<p>ಶಿರಸಿ: 4 ಶತಮಾನಗಳಷ್ಟು ಹಳೆಯದಾಗಿದ್ದ ತಾಲ್ಲೂಕಿನ ಬನವಾಸಿಯ ಮಧುಕೇಶ್ವರ ದೇವಸ್ಥಾನದ ಮಹಾಸ್ಯಂದನ ರಥದ ಮರುನಿರ್ಮಾಣಕ್ಕೆ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಾಜಶೇಖರ ಒಡೆಯರ್, ಅವರ ಪುತ್ರ ವಿಶ್ವನಾಥ ರಾಜಶೇಖರ ಒಡೆಯರ್ ತಮ್ಮ ಕುಟುಂಬದ ವತಿಯಿಂದ ₹5,05,555 ದೇಣಿಗೆ ನೀಡಿದ್ದಾರೆ.</p>.<p>ಮಹಾಸ್ಯಂದನ ರಥ ನಿರ್ಮಾಣದ ಆರ್ಥಿಕ ಸಮಿತಿ ಅಧ್ಯಕ್ಷ ದ್ಯಾಮಣ್ಣ ದೊಡ್ಮನಿ ಅವರಿಗೆ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಚೆಕ್ ಹಸ್ತಾಂತರಿಸಿದರು.</p>.<p>‘ನೂತನ ರಥ ನಿರ್ಮಿಸಲು ಅಂದಾಜು ₹ 3 ಕೋಟಿ ಮೊತ್ತ ತಗಲುವ ಸಾಧ್ಯತೆ ಇದೆ. ರಥ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದ್ದು, ನಿರ್ಮಾಣ ವೆಚ್ಚಕ್ಕೆ ಭಕ್ತರಿಂದ ದೇಣಿಗೆ ಸಂಗ್ರಹಿಸಲಾಗುತ್ತಿದೆ. ರಾಜಶೇಖರ ಒಡೆಯರ್ ಕುಟುಂಬಸ್ಥರು ಒಂದು ದೊಡ್ಡ ಗಾಲಿ ನಿರ್ಮಾಣದ ಅಂದಾಜು ವೆಚ್ಚವನ್ನು ನೀಡಿದ್ದಾರೆ’ ಎಂದರು.</p>.<p>ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಕಾರ್ಯಾಧ್ಯಕ್ಷ ದಯಾನಂದ ಭಟ್, ಪ್ರಕಾಶ ಬಂಗಲೆ, ಶಿರಸಿ ಎ.ಪಿ.ಎಂ.ಸಿ. ಅದ್ಯಕ್ಷ ಶಿವಕುಮಾರ ದೇಸಾಯಿ ಗೌಡ, ಶ್ರೀನಿಧಿ ಮಂಗಳೂರು, ದತ್ತಾತ್ರೇಯ ಭಟ್, ವಿಶ್ವನಾಥ ಒಡೆಯರ, ಬನವಾಸಿ ಗ್ರಾಮ ಪಂಚಾಯ್ತಿ ಸದಸ್ಯ ಅಶೋಕ ಪೊನ್ನಪ್ಪ, ಸುಧೀರ ನಾಯರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಸಿ: 4 ಶತಮಾನಗಳಷ್ಟು ಹಳೆಯದಾಗಿದ್ದ ತಾಲ್ಲೂಕಿನ ಬನವಾಸಿಯ ಮಧುಕೇಶ್ವರ ದೇವಸ್ಥಾನದ ಮಹಾಸ್ಯಂದನ ರಥದ ಮರುನಿರ್ಮಾಣಕ್ಕೆ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಾಜಶೇಖರ ಒಡೆಯರ್, ಅವರ ಪುತ್ರ ವಿಶ್ವನಾಥ ರಾಜಶೇಖರ ಒಡೆಯರ್ ತಮ್ಮ ಕುಟುಂಬದ ವತಿಯಿಂದ ₹5,05,555 ದೇಣಿಗೆ ನೀಡಿದ್ದಾರೆ.</p>.<p>ಮಹಾಸ್ಯಂದನ ರಥ ನಿರ್ಮಾಣದ ಆರ್ಥಿಕ ಸಮಿತಿ ಅಧ್ಯಕ್ಷ ದ್ಯಾಮಣ್ಣ ದೊಡ್ಮನಿ ಅವರಿಗೆ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಚೆಕ್ ಹಸ್ತಾಂತರಿಸಿದರು.</p>.<p>‘ನೂತನ ರಥ ನಿರ್ಮಿಸಲು ಅಂದಾಜು ₹ 3 ಕೋಟಿ ಮೊತ್ತ ತಗಲುವ ಸಾಧ್ಯತೆ ಇದೆ. ರಥ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದ್ದು, ನಿರ್ಮಾಣ ವೆಚ್ಚಕ್ಕೆ ಭಕ್ತರಿಂದ ದೇಣಿಗೆ ಸಂಗ್ರಹಿಸಲಾಗುತ್ತಿದೆ. ರಾಜಶೇಖರ ಒಡೆಯರ್ ಕುಟುಂಬಸ್ಥರು ಒಂದು ದೊಡ್ಡ ಗಾಲಿ ನಿರ್ಮಾಣದ ಅಂದಾಜು ವೆಚ್ಚವನ್ನು ನೀಡಿದ್ದಾರೆ’ ಎಂದರು.</p>.<p>ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಕಾರ್ಯಾಧ್ಯಕ್ಷ ದಯಾನಂದ ಭಟ್, ಪ್ರಕಾಶ ಬಂಗಲೆ, ಶಿರಸಿ ಎ.ಪಿ.ಎಂ.ಸಿ. ಅದ್ಯಕ್ಷ ಶಿವಕುಮಾರ ದೇಸಾಯಿ ಗೌಡ, ಶ್ರೀನಿಧಿ ಮಂಗಳೂರು, ದತ್ತಾತ್ರೇಯ ಭಟ್, ವಿಶ್ವನಾಥ ಒಡೆಯರ, ಬನವಾಸಿ ಗ್ರಾಮ ಪಂಚಾಯ್ತಿ ಸದಸ್ಯ ಅಶೋಕ ಪೊನ್ನಪ್ಪ, ಸುಧೀರ ನಾಯರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>