<p><strong>ಕಾರವಾರ</strong>: ಗಣೇಶ ಚತುರ್ಥಿ ಆಚರಣೆಯ ಹಳೆಯ ಖರ್ಚಿನ ವಿಚಾರಕ್ಕೆ ಇಲ್ಲಿನ ಸಾಯಿಕಟ್ಟಾದಲ್ಲಿ ಶನಿವಾರ ಕುಟುಂಬವೊಂದರ ನಡುವೆ ಕಲಹ ನಡೆದು, ಯುವಕನೊಬ್ಬ ತನ್ನ ಸೋದರ ಸಂಬಂಧಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ.</p>.<p>ಶಿರಸಿ ಅಯ್ಯಪ್ಪ ನಗರದ, ಹಾನಗಲ್ನಲ್ಲಿ ಸರ್ವೇಯರ್ ಆಗಿದ್ದ ಸಂದೇಶ ಪ್ರಭಾಕರ ಬೋರಕರ್ (31) ಹತ್ಯೆಯಾದವರು. ಅವರ ಸಹೋದರನ ಪುತ್ರ ಮನೀಷ್ ಬೋರಕರ್ ಹತ್ಯೆಗೈದ ಆರೋಪಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮನೀಷ್ ಸೇರಿ ಅವರದೇ ಕುಟುಂಬದ ಐವರನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.</p>.<p>‘ಶಿರಸಿ ಮೂಲದ ಒಂದೇ ಕುಟುಂಬಕ್ಕೆ ಸೇರಿದ್ದ ಹಲವರು ಗಣೇಶ ಚತುರ್ಥಿ ಆಚರಣೆಗೆ ಸೇರಿದ್ದ ವೇಳೆ ಹಳೆಯ ಖರ್ಚಿನ ₹8 ಸಾವಿರ ಹಣದ ವಿಚಾರವಾಗಿ ಕಲಹ ನಡೆದಿತ್ತು. ಈ ವೇಳೆ ಸಂದೇಶ ಎಂಬುವವರ ಹತ್ಯೆ ನಡೆದಿದೆ. ಘಟನೆಗೆ ಸಂಬಂಧಿಸಿ ಹತ್ಯೆಗೈದ ಮನೀಷ್, ಅವರ ತಂದೆ ಕಿರಣ್ ಬೋರಕರ್, ಚಿಕ್ಕಪ್ಪಂದಿರಾದ ರತನ್ ಬೋರಕರ್, ಪ್ರಶಾಂತ ಬೋರಕರ್, ಸಂತೋಷ ಬೋರಕರ್ಎಂಬುವವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ</strong>: ಗಣೇಶ ಚತುರ್ಥಿ ಆಚರಣೆಯ ಹಳೆಯ ಖರ್ಚಿನ ವಿಚಾರಕ್ಕೆ ಇಲ್ಲಿನ ಸಾಯಿಕಟ್ಟಾದಲ್ಲಿ ಶನಿವಾರ ಕುಟುಂಬವೊಂದರ ನಡುವೆ ಕಲಹ ನಡೆದು, ಯುವಕನೊಬ್ಬ ತನ್ನ ಸೋದರ ಸಂಬಂಧಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ.</p>.<p>ಶಿರಸಿ ಅಯ್ಯಪ್ಪ ನಗರದ, ಹಾನಗಲ್ನಲ್ಲಿ ಸರ್ವೇಯರ್ ಆಗಿದ್ದ ಸಂದೇಶ ಪ್ರಭಾಕರ ಬೋರಕರ್ (31) ಹತ್ಯೆಯಾದವರು. ಅವರ ಸಹೋದರನ ಪುತ್ರ ಮನೀಷ್ ಬೋರಕರ್ ಹತ್ಯೆಗೈದ ಆರೋಪಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮನೀಷ್ ಸೇರಿ ಅವರದೇ ಕುಟುಂಬದ ಐವರನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.</p>.<p>‘ಶಿರಸಿ ಮೂಲದ ಒಂದೇ ಕುಟುಂಬಕ್ಕೆ ಸೇರಿದ್ದ ಹಲವರು ಗಣೇಶ ಚತುರ್ಥಿ ಆಚರಣೆಗೆ ಸೇರಿದ್ದ ವೇಳೆ ಹಳೆಯ ಖರ್ಚಿನ ₹8 ಸಾವಿರ ಹಣದ ವಿಚಾರವಾಗಿ ಕಲಹ ನಡೆದಿತ್ತು. ಈ ವೇಳೆ ಸಂದೇಶ ಎಂಬುವವರ ಹತ್ಯೆ ನಡೆದಿದೆ. ಘಟನೆಗೆ ಸಂಬಂಧಿಸಿ ಹತ್ಯೆಗೈದ ಮನೀಷ್, ಅವರ ತಂದೆ ಕಿರಣ್ ಬೋರಕರ್, ಚಿಕ್ಕಪ್ಪಂದಿರಾದ ರತನ್ ಬೋರಕರ್, ಪ್ರಶಾಂತ ಬೋರಕರ್, ಸಂತೋಷ ಬೋರಕರ್ಎಂಬುವವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>