<p><strong>ಕಾರವಾರ:</strong> ಕುಮಟಾ ತಾಲ್ಲೂಕಿನ ತದಡಿ ಬಂದರಿನಿಂದ ಶುಕ್ರವಾರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಅಚ್ಚರಿ ಕಾದಿತ್ತು. ಬೃಹತ್ ಗಾತ್ರದ ‘ತಿಮಿಂಗಲ ಸೊರಾ’ (ವೇಲ್ ಶಾರ್ಕ್) ಮೀನೊಂದು ಬಲೆಗೆ ಬಿದ್ದಿತ್ತು.</p>.<p>ಗುಜರಾತ್ ಕರಾವಳಿಯಿಂದ ಕೇರಳದವರೆಗೂ ಕಾಣಸಿಗುವ ಈ ಮೀನುಗಳು ಬಲೆಗೆ ಬೀಳುವುದು ಅಪರೂಪ. ನೀರು ಸುಮಾರು 21 ಡಿಗ್ರಿ ಸೆಲ್ಷಿಯಸ್ಗಿಂದ ಕಡಿಮೆ ಉಷ್ಣಾಂಶವಿರುವ ಆಳ ಸಮುದ್ರದಲ್ಲಿ ಇವು ವಾಸಿಸುತ್ತವೆ. ಅಂದಾಜು 800 ಕೆ.ಜಿ.ಯಷ್ಟು ತೂಕವಿರುವ ಇವುಗಳನ್ನು, ಮತ್ಸ್ಯ ಸಂಕುಲದ ಅತಿದೊಡ್ಡ ಸದಸ್ಯರಲ್ಲಿ ಒಂದು ಎಂದು ಗುರುತಿಸಲಾಗಿದೆ.</p>.<p>ಅರಬ್ಬಿ ಸಮುದ್ರದಲ್ಲಿ ಹೆಚ್ಚಾಗಿ ಕಾಣಸಿಗುತ್ತಿದ್ದ ಈ ಪ್ರಭೇದದ ಮೀನುಗಳು, ಕೆಲವು ವರ್ಷಗಳಿಂದ ಅಪರೂಪವಾಗಿವೆ. ಹಾಗಾಗಿ ಅವುಗಳನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಗುರುತಿಸಲಾಗಿದ್ದು, ಬೇಟೆಯಾಡುವುದು ಅಪರಾಧವಾಗಿವೆ.</p>.<p>ಅಚಾನಕ್ ಆಗಿ ಬಲೆಗೆ ಬಿದ್ದರೂ ಅವುಗಳನ್ನು ಪುನಃ ನೀರಿಗೆ ಬಿಡಲಾಗುತ್ತದೆ. ತದಡಿಯ ಮೀನುಗಾರರೂ ತಮ್ಮ ಬಲೆಗೆ ಬಿದ್ದ ಮೀನನ್ನು ದೋಣಿಗೆ ಎಳೆದು ಬಲೆಯಿಂದ ಬಿಡಿಸಿ ಪುನಃ ನೀರಿಗೆ ಬಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ಕುಮಟಾ ತಾಲ್ಲೂಕಿನ ತದಡಿ ಬಂದರಿನಿಂದ ಶುಕ್ರವಾರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಅಚ್ಚರಿ ಕಾದಿತ್ತು. ಬೃಹತ್ ಗಾತ್ರದ ‘ತಿಮಿಂಗಲ ಸೊರಾ’ (ವೇಲ್ ಶಾರ್ಕ್) ಮೀನೊಂದು ಬಲೆಗೆ ಬಿದ್ದಿತ್ತು.</p>.<p>ಗುಜರಾತ್ ಕರಾವಳಿಯಿಂದ ಕೇರಳದವರೆಗೂ ಕಾಣಸಿಗುವ ಈ ಮೀನುಗಳು ಬಲೆಗೆ ಬೀಳುವುದು ಅಪರೂಪ. ನೀರು ಸುಮಾರು 21 ಡಿಗ್ರಿ ಸೆಲ್ಷಿಯಸ್ಗಿಂದ ಕಡಿಮೆ ಉಷ್ಣಾಂಶವಿರುವ ಆಳ ಸಮುದ್ರದಲ್ಲಿ ಇವು ವಾಸಿಸುತ್ತವೆ. ಅಂದಾಜು 800 ಕೆ.ಜಿ.ಯಷ್ಟು ತೂಕವಿರುವ ಇವುಗಳನ್ನು, ಮತ್ಸ್ಯ ಸಂಕುಲದ ಅತಿದೊಡ್ಡ ಸದಸ್ಯರಲ್ಲಿ ಒಂದು ಎಂದು ಗುರುತಿಸಲಾಗಿದೆ.</p>.<p>ಅರಬ್ಬಿ ಸಮುದ್ರದಲ್ಲಿ ಹೆಚ್ಚಾಗಿ ಕಾಣಸಿಗುತ್ತಿದ್ದ ಈ ಪ್ರಭೇದದ ಮೀನುಗಳು, ಕೆಲವು ವರ್ಷಗಳಿಂದ ಅಪರೂಪವಾಗಿವೆ. ಹಾಗಾಗಿ ಅವುಗಳನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಗುರುತಿಸಲಾಗಿದ್ದು, ಬೇಟೆಯಾಡುವುದು ಅಪರಾಧವಾಗಿವೆ.</p>.<p>ಅಚಾನಕ್ ಆಗಿ ಬಲೆಗೆ ಬಿದ್ದರೂ ಅವುಗಳನ್ನು ಪುನಃ ನೀರಿಗೆ ಬಿಡಲಾಗುತ್ತದೆ. ತದಡಿಯ ಮೀನುಗಾರರೂ ತಮ್ಮ ಬಲೆಗೆ ಬಿದ್ದ ಮೀನನ್ನು ದೋಣಿಗೆ ಎಳೆದು ಬಲೆಯಿಂದ ಬಿಡಿಸಿ ಪುನಃ ನೀರಿಗೆ ಬಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>