ರಥಬೀದಿಯಲ್ಲಿ ಸಾಗಿದ ರಥದಲ್ಲಿ ಮುಖ್ಯ ದೇವರಾದ ಮಹಾಬಲೇಶ್ವರನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ವೆಂಕಟ್ರಮಣ ದೇವಸ್ಥಾನದವರೆಗೆ ಸಾಗಿದ ರಥವನ್ನು ತಿರುಗಿ ಮೂಲಸ್ಥಾನಕ್ಕೆ ತಂದು ನಿಲ್ಲಿಸಲಾಯಿತು. ಎತ್ತರದ ರಥ ಎಂದೇ ಪ್ರಸಿದ್ಧಿಯಾಗಿರುವ, ಅತಿ ಪುರಾತನ ರಥವನ್ನು ಬಣ್ಣ– ಬಣ್ಣದ ಬಾವುಟಗಳಿಂದ, ತಳಿರು–ತೋರಣಗಳಿಂದ, ಹೂವಿನಿಂದ ಆಕರ್ಷಕವಾಗಿ ಶೃಂಗರಿಸಲಾಗಿತ್ತು.