<p><strong>ಜೊಯಿಡಾ</strong>: ತಾಲ್ಲೂಕಿನಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಸುಪಾ ಜಲಾಶಯ ತುಂಬುವ ಹಂತಕ್ಕೆ ತಲುಪಿದ್ದು ಜಲಾಶಯದ ಹಿನ್ನೀರು ರಸ್ತೆಯಲ್ಲಿ ಆವರಿಸಿ ಬಜಾರಕುಣಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸುಳ್ಳೆ ಗ್ರಾಮದ ಜನರು ಸಂಚಾರಕ್ಕೆ ಪರದಾಡುವಂತಾಗಿದೆ.</p>.<p>ಕರಂಜೆ - ದುಧಮಳಾ ರಸ್ತೆ, ಅಸುಳ್ಳೆ ರಸ್ತೆ, ಹಾಗೂ ಕಾಳಪೆಯಲ್ಲಿ ಸೇತುವೆ ಸುತ್ತಲೂ ರಸ್ತೆಯಲ್ಲಿ ಜಲಾಶಯದ ಹಿನ್ನೀರು ತುಂಬಿದ್ದು ಕರಂಜೆ ಊರಿನ ಜನರು ಹೊರ ಭಾಗಕ್ಕೆ ಬರಲು ಪರದಾಡುತ್ತಿದ್ದಾರೆ.</p>.<p>ತಾಲ್ಲೂಕಿನ ಕ್ಯಾಸಲ್ ರಾಕ್ ಮೂಲಕ ಕರಂಜೆ ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಎರಡು ದೊಡ್ಡ ಹಳ್ಳಗಳು ತುಂಬಿ ಹರಿಯುತ್ತಿದ್ದು ಹಳ್ಳಿಗಳಿಗೆ ಸೇತುವೆಗಳು ಇಲ್ಲದಿರುವುದರಿಂದ ಕರಂಜೆ, ಅಸುಳ್ಳೆ ಜನರು ಪರದಾಡುತ್ತಿದ್ದಾರೆ.</p>.<p>ಜನರ ಸಂಚಾರಕ್ಕೆ ಸದ್ಯ ದೋಣಿ ವ್ಯವಸ್ಥೆ ಮಾಡಲಾಗಿದೆ. ಬಜಾರಕುಣಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿಗ್ಗಿ ಭಾಗದ ಕರಂಜೆ ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಉಳವಿ - ಗೋವಾ ಗಡಿ ರಾಜ್ಯ ಹೆದ್ದಾರಿ ಸಂಪೂರ್ಣ ಹಾಳಾಗಿದ್ದು ಜೊತೆಗೆ ಹೆದ್ದಾರಿಯಲ್ಲಿ ಹರಿಯುವ ಹಲವು ಹಳ್ಳಿಗಳಿಗೆ ಸೇತುವೆಗಳು ನಿರ್ಮಾಣ ಆಗದೇ ಇರುವುದರಿಂದ ಪ್ರತಿ ಮಳೆಗಾಲದಲ್ಲೂ ಈ ಭಾಗದ ಜನರು ಸಂಚಾರಕ್ಕೆ ಪರದಾಡುತ್ತಾರೆ. ಸೋಮವಾರ ಕೆಪಿಸಿ ವತಿಯಿಂದ ಗ್ರಾಮ ಪಂಚಾಯಿತಿ ಮೂಲಕ ಕರಂಜೆ ಊರಿನ ಜನರಿಗೆ ದೋಣಿ ವ್ಯವಸ್ಥೆ ಸೋಮವಾರದಿಂದ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೊಯಿಡಾ</strong>: ತಾಲ್ಲೂಕಿನಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಸುಪಾ ಜಲಾಶಯ ತುಂಬುವ ಹಂತಕ್ಕೆ ತಲುಪಿದ್ದು ಜಲಾಶಯದ ಹಿನ್ನೀರು ರಸ್ತೆಯಲ್ಲಿ ಆವರಿಸಿ ಬಜಾರಕುಣಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸುಳ್ಳೆ ಗ್ರಾಮದ ಜನರು ಸಂಚಾರಕ್ಕೆ ಪರದಾಡುವಂತಾಗಿದೆ.</p>.<p>ಕರಂಜೆ - ದುಧಮಳಾ ರಸ್ತೆ, ಅಸುಳ್ಳೆ ರಸ್ತೆ, ಹಾಗೂ ಕಾಳಪೆಯಲ್ಲಿ ಸೇತುವೆ ಸುತ್ತಲೂ ರಸ್ತೆಯಲ್ಲಿ ಜಲಾಶಯದ ಹಿನ್ನೀರು ತುಂಬಿದ್ದು ಕರಂಜೆ ಊರಿನ ಜನರು ಹೊರ ಭಾಗಕ್ಕೆ ಬರಲು ಪರದಾಡುತ್ತಿದ್ದಾರೆ.</p>.<p>ತಾಲ್ಲೂಕಿನ ಕ್ಯಾಸಲ್ ರಾಕ್ ಮೂಲಕ ಕರಂಜೆ ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಎರಡು ದೊಡ್ಡ ಹಳ್ಳಗಳು ತುಂಬಿ ಹರಿಯುತ್ತಿದ್ದು ಹಳ್ಳಿಗಳಿಗೆ ಸೇತುವೆಗಳು ಇಲ್ಲದಿರುವುದರಿಂದ ಕರಂಜೆ, ಅಸುಳ್ಳೆ ಜನರು ಪರದಾಡುತ್ತಿದ್ದಾರೆ.</p>.<p>ಜನರ ಸಂಚಾರಕ್ಕೆ ಸದ್ಯ ದೋಣಿ ವ್ಯವಸ್ಥೆ ಮಾಡಲಾಗಿದೆ. ಬಜಾರಕುಣಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿಗ್ಗಿ ಭಾಗದ ಕರಂಜೆ ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಉಳವಿ - ಗೋವಾ ಗಡಿ ರಾಜ್ಯ ಹೆದ್ದಾರಿ ಸಂಪೂರ್ಣ ಹಾಳಾಗಿದ್ದು ಜೊತೆಗೆ ಹೆದ್ದಾರಿಯಲ್ಲಿ ಹರಿಯುವ ಹಲವು ಹಳ್ಳಿಗಳಿಗೆ ಸೇತುವೆಗಳು ನಿರ್ಮಾಣ ಆಗದೇ ಇರುವುದರಿಂದ ಪ್ರತಿ ಮಳೆಗಾಲದಲ್ಲೂ ಈ ಭಾಗದ ಜನರು ಸಂಚಾರಕ್ಕೆ ಪರದಾಡುತ್ತಾರೆ. ಸೋಮವಾರ ಕೆಪಿಸಿ ವತಿಯಿಂದ ಗ್ರಾಮ ಪಂಚಾಯಿತಿ ಮೂಲಕ ಕರಂಜೆ ಊರಿನ ಜನರಿಗೆ ದೋಣಿ ವ್ಯವಸ್ಥೆ ಸೋಮವಾರದಿಂದ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>