<p><strong>ಬೆಂಗಳೂರು</strong>: ಮಣಿಕಾಂತ್ ಶಿವಾನಂದ ಅವರ ದ್ವಿಶತಕ ಹಾಗೂ ಧ್ರುವ್ ಕೃಷ್ಣನ್ ಅವರ ಶತಕದ ನೆರವಿನಿಂದ ಕರ್ನಾಟಕ ತಂಡವು ಕೂಚ್ ಬಿಹಾರ್ ಟ್ರೋಫಿ (19 ವರ್ಷದೊಳಗಿನವರ) ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಒಡಿಶಾ ವಿರುದ್ಧ ಮೊದಲ ಇನಿಂಗ್ಸ್ನಲ್ಲಿ 242 ರನ್ಗಳ ಬೃಹತ್ ಮುನ್ನಡೆ ಪಡೆಯಿತು.</p>.<p>ಒಡಿಶಾದ ಬಲಾಂಗಿರ್ನಲ್ಲಿ ನಡೆಯುತ್ತಿರುವ ಸಿ ಗುಂಪಿನ ಪಂದ್ಯದಲ್ಲಿ ಬುಧವಾರ 1 ವಿಕೆಟ್ಗೆ 50 ರನ್ಗಳೊಡನೆ ಆಟ ಮುಂದುವರಿಸಿದ ಅನ್ವಯ್ ದ್ರಾವಿಡ್ ಪಡೆಯು ದಿನದ ಮೂರೂ ಅವಧಿಗಳಲ್ಲಿ ಮೇಲುಗೈ ಸಾಧಿಸಿತು. ಮಣಿಕಾಂತ್ (227 ರನ್; 4x20, 6x7) ಹಾಗೂ ಧ್ರುವ್ (105 ರನ್; 4x13) ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ 223 ರನ್ ಸೇರಿಸಿದರು.</p>.<p>ಧ್ರುವ್ ಅವರು ಶತಕ ಗಳಿಸಿದ ಸ್ವಲ್ಪ ಹೊತ್ತಿನಲ್ಲಿಯೇ ಪ್ರಿಯಾಂಶು ಮೊಹಾಂತಿ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ, ಮಣಿಕಾಂತ್ ಹಾಗೂ ನಾಯಕ ಅನ್ವಯ್ (ಔಟಾಗದೇ 62 ರನ್; 4x2) ಮೂರನೇ ವಿಕೆಟ್ಗೆ 169 ರನ್ಗಳ ಜೊತೆಯಾಟವಾಡಿದರು. </p>.<p>ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡವು 107 ಓವರ್ಗಳಲ್ಲಿ 3 ವಿಕೆಟ್ಗೆ 412 ರನ್ ಗಳಿಸಿದೆ. ಅನ್ವಯ್ ಅವರೊಂದಿಗೆ ರೋಹಿತ್ ಎ.ಎ. (ಔಟಾಗದೇ 4) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.</p>.<p>ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಒಡಿಶಾ: 58.4 ಓವರ್ಗಳಲ್ಲಿ 170; ಕರ್ನಾಟಕ: 107 ಓವರ್ಗಳಲ್ಲಿ 3 ವಿಕೆಟ್ಗೆ 412 (ಮಣಿಕಾಂತ್ ಶಿವಾನಂದ 227, ಧ್ರುವ್ ಕೃಷ್ಣನ್ 105, ಅನ್ವಯ್ ದ್ರಾವಿಡ್ ಔಟಾಗದೇ 62; ಪ್ರಿಯಾಂಶು ಮೊಹಾಂತಿ 73ಕ್ಕೆ2).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಮಣಿಕಾಂತ್ ಶಿವಾನಂದ ಅವರ ದ್ವಿಶತಕ ಹಾಗೂ ಧ್ರುವ್ ಕೃಷ್ಣನ್ ಅವರ ಶತಕದ ನೆರವಿನಿಂದ ಕರ್ನಾಟಕ ತಂಡವು ಕೂಚ್ ಬಿಹಾರ್ ಟ್ರೋಫಿ (19 ವರ್ಷದೊಳಗಿನವರ) ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಒಡಿಶಾ ವಿರುದ್ಧ ಮೊದಲ ಇನಿಂಗ್ಸ್ನಲ್ಲಿ 242 ರನ್ಗಳ ಬೃಹತ್ ಮುನ್ನಡೆ ಪಡೆಯಿತು.</p>.<p>ಒಡಿಶಾದ ಬಲಾಂಗಿರ್ನಲ್ಲಿ ನಡೆಯುತ್ತಿರುವ ಸಿ ಗುಂಪಿನ ಪಂದ್ಯದಲ್ಲಿ ಬುಧವಾರ 1 ವಿಕೆಟ್ಗೆ 50 ರನ್ಗಳೊಡನೆ ಆಟ ಮುಂದುವರಿಸಿದ ಅನ್ವಯ್ ದ್ರಾವಿಡ್ ಪಡೆಯು ದಿನದ ಮೂರೂ ಅವಧಿಗಳಲ್ಲಿ ಮೇಲುಗೈ ಸಾಧಿಸಿತು. ಮಣಿಕಾಂತ್ (227 ರನ್; 4x20, 6x7) ಹಾಗೂ ಧ್ರುವ್ (105 ರನ್; 4x13) ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ 223 ರನ್ ಸೇರಿಸಿದರು.</p>.<p>ಧ್ರುವ್ ಅವರು ಶತಕ ಗಳಿಸಿದ ಸ್ವಲ್ಪ ಹೊತ್ತಿನಲ್ಲಿಯೇ ಪ್ರಿಯಾಂಶು ಮೊಹಾಂತಿ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ, ಮಣಿಕಾಂತ್ ಹಾಗೂ ನಾಯಕ ಅನ್ವಯ್ (ಔಟಾಗದೇ 62 ರನ್; 4x2) ಮೂರನೇ ವಿಕೆಟ್ಗೆ 169 ರನ್ಗಳ ಜೊತೆಯಾಟವಾಡಿದರು. </p>.<p>ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡವು 107 ಓವರ್ಗಳಲ್ಲಿ 3 ವಿಕೆಟ್ಗೆ 412 ರನ್ ಗಳಿಸಿದೆ. ಅನ್ವಯ್ ಅವರೊಂದಿಗೆ ರೋಹಿತ್ ಎ.ಎ. (ಔಟಾಗದೇ 4) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.</p>.<p>ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಒಡಿಶಾ: 58.4 ಓವರ್ಗಳಲ್ಲಿ 170; ಕರ್ನಾಟಕ: 107 ಓವರ್ಗಳಲ್ಲಿ 3 ವಿಕೆಟ್ಗೆ 412 (ಮಣಿಕಾಂತ್ ಶಿವಾನಂದ 227, ಧ್ರುವ್ ಕೃಷ್ಣನ್ 105, ಅನ್ವಯ್ ದ್ರಾವಿಡ್ ಔಟಾಗದೇ 62; ಪ್ರಿಯಾಂಶು ಮೊಹಾಂತಿ 73ಕ್ಕೆ2).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>