ಪರ್ಯಾಯ ವ್ಯವಸ್ಥೆಗೆ ಆದ್ಯತೆ ನೀಡಲಿ
‘ಗ್ರಾಮದಲ್ಲಿ 170ಕ್ಕೂ ಹೆಚ್ಚು ಕುಟುಂಬಗಳಿದ್ದು ಸುಮಾರು 350 ಎಕರೆಯಷ್ಟು ಅಡಿಕೆ ತೋಟಗಳಿವೆ. ಬಹುತೇಕ ರೈತರು ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಿ ಜಮೀನು ಬಿಟ್ಟುಕೊಡಲು ಈ ಹಿಂದೆಯೇ ಅಫಿಡವಿಟ್ ಸಲ್ಲಿಸಿದ್ದರು. ಕೃಷಿ ಜಮೀನಿಗೆ ಸೂಕ್ತ ಪರಿಹಾರ ನೀಡುವ ಜತೆಗೆ ವಸತಿಗೆ ಸೂಕ್ತ ಕಾಲೊನಿ ನಿರ್ಮಿಸಿಕೊಡಬೇಕು ಎಂಬ ಬೇಡಿಕೆಗೆ ಸರ್ಕಾರದಿಂದ ಈವರೆಗೆ ಮನ್ನಣೆ ಸಿಕ್ಕಿಲ್ಲ. ಈಗ ಗುರುತಿಸಿದ 12 ಎಕರೆ ಜಾಗ ಕೆಲವೇ ಕುಟುಂಬಗಳ ಸ್ಥಳಾಂತರಕ್ಕೆ ಮಾತ್ರ ಗುರುತಿಸಲಾಗಿದೆ. ಗ್ರಾಮಸ್ಥರು ಸ್ವಯಂ ಸ್ಥಳಾಂತರಕ್ಕೆ ಒಪ್ಪಿರುವಾಗ ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆದ್ಯತೆ ನೀಡಲಿ’ ಎನ್ನುತ್ತಾರೆ ಕಳಚೆ ಗ್ರಾಮಸ್ಥರು.