<p><strong>ಶಿರಸಿ</strong>: ಇಲ್ಲಿನ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೊ ಆಪರೇಟಿವ್ (ಕೆಡಿಸಿಸಿ) ಬ್ಯಾಂಕಿನ ನಿರ್ದೇಶಕ ಸ್ಥಾನಗಳಿಗೆ ನಡೆದಿದ್ದ ಚುನಾವಣೆಯ ಬಾಕಿ ಇದ್ದ ನಾಲ್ಕು ಸ್ಥಾನಗಳ ಮತ ಎಣಿಕೆ ಪ್ರಕ್ರಿಯೆ ಧಾರವಾಡ ಹೈಕೋರ್ಟ್ ಅಂತಿಮ ಆದೇಶದ ಹಿನ್ನೆಲೆಯಲ್ಲಿ ಶನಿವಾರ ನಡೆಯಿತು. ನಾಲ್ಕರಲ್ಲಿ ಮೂರು ಸ್ಥಾನಗಳು ಹಾಲಿ ಅಧ್ಯಕ್ಷ ಶಿವರಾಮ ಹೆಬ್ಬಾರ ಹಾಗೂ ಬೆಂಬಲಿಗರ ಪಾಲಾದರೆ, ಸಚಿವ ಮಂಕಾಳ ವೈದ್ಯ ಬೆಂಬಲಿಗ, ಹಾಲಿ ನಿರ್ದೇಶಕ ಸುರೇಶ್ಚಂದ್ರ ಚೀಟಿ ಎತ್ತುವ ಪ್ರಕ್ರಿಯೆಯಲ್ಲಿ ಗೆಲುವು ದಾಖಲಿಸಿದರು.</p>.<p>ಕೆಡಿಸಿಸಿ ಬ್ಯಾಂಕಿನ 16 ನಿರ್ದೇಶಕ ಸ್ಥಾನಗಳಿಗೆ ಅ.25ರಂದು ಚುನಾವಣೆ ನಡೆದಿತ್ತು. 9 ಸ್ಥಾನಗಳಿಗೆ ಸಂಬಂಧಿಸಿದ ಮತದಾರರ ಯಾದಿ ಹಾಗೂ ವಿವಿಧ ವಿಷಯಗಳ ಕುರಿತಂತೆ ಕೆಲವರು ಕೋರ್ಟ್ ಮೊರೆ ಹೋಗಿದ್ದರು. ಹೀಗಾಗಿ, ವಿವಾದಿತ ಮತಗಳನ್ನು ಪ್ರತ್ಯೇಕ ಮತ ಪೆಟ್ಟಿಗೆಯಲ್ಲಿ ಸಂಗ್ರಹಿಸಿಟ್ಟು, ಉಳಿದ ಮತ ಎಣಿಕೆ ನಡೆದಿತ್ತು. ಆದರೆ, ಈ ಪ್ರತ್ಯೇಕವಾಗಿ ಇಟ್ಟ ಮತಗಳ ಎಣಿಕೆ ಪೂರ್ಣಗೊಳ್ಳದ ಹೊರತೂ ಫಲಿತಾಂಶ ಘೋಷಣೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಧಾರವಾಡ ಹೈಕೋರ್ಟ್ ಪೀಠವು ಈ 9 ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳಿಗೆ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲು ಸೂಚಿಸಿದ್ದ ಹಿನ್ನೆಲೆಯಲ್ಲಿ ಮತಗಳ ಎಣಿಕೆ ನಡೆಯಿತು.</p>.<p>ಯಲ್ಲಾಪುರ ಪ್ರಾಥಮಿಕ ಪ್ರಾಥಮಿಕ ಪತ್ತಿನ ಸಹಕಾರಿ ಕ್ಷೇತ್ರದಲ್ಲಿ ಹಾಲಿ ಅಧ್ಯಕ್ಷ ಶಿವರಾಮ ಹೆಬ್ಬಾರ 10 ಮತ ಪಡೆದು ಗೆಲುವು ಸಾಧಿಸಿದರು. ಅವರ ಪ್ರತಿಸ್ಪರ್ಧಿ ಗೋಪಾಲಕೃಷ್ಣ ನರಸಿಂಹ ಗಾಂವಕರ 2 ಮತಗಳನ್ನು ಪಡೆದಿದ್ದಾರೆ. ಶಿರಸಿ ತಾಲ್ಲೂಕು ಮಹಾಬಲೇಶ್ವರ ಅನಂತ ಹೆಗಡೆ 13 ಮತಗಳನ್ನು ಪಡೆದು ವಿಜಯಿಯಾದರೆ, ಪ್ರತಿಸ್ಪರ್ಧಿ ಜಿ.ಆರ್.ಹೆಗಡೆ ಬೆಳ್ಳೇಕೇರಿ 12 ಮತಗಳನ್ನು ಪಡೆದು ಪರಾಭವಗೊಂಡರು. ತಾಲ್ಲೂಕು ಒಕ್ಕಲುತನ ಹುಟ್ಟುವಳಿಗಳ ಮಾರಾಟ ಸಹಕಾರಿ ಸಂಘಗಳ ಮತ ಕ್ಷೇತ್ರ ಸ್ಥಾನದಲ್ಲಿ ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ 5 ಮತಗಳನ್ನು ಪಡೆದರೆ, ರವಿ ಗಜಾನನ ಹೆಗಡೆ 6 ಮತಗಳನ್ನು ಪಡೆದು ಗೆಲುವು ದಾಕಲಿಸಿದರು. </p>.<p>ತೀವ್ರ ಕುತೂಹಲ ಮೂಡಿಸಿದ್ದ ಹಾಲು ಉತ್ಪಾದಕರ, ಕಾರ್ಮಿಕ, ಕೂಲಿಕಾರರ ಮತ ಕ್ಷೇತ್ರದ ಮತ ಎಣಿಕೆ ಕೌತುಕ ಮೂಡಿಸಿತ್ತು. ಈ ವಿಭಾಗದಲ್ಲಿ 17 ಮತದಾರರ ಕುರಿತಂತೆ ಕೋರ್ಟ್ ಆದೇಶವಿದ್ದ ಕಾರಣ ಈ ಮತಗಳ ಎಣಿಕೆಯನ್ನು ಮುಂದೂಡಲಾಗಿತ್ತು. ಶಿವರಾಮ ಹೆಬ್ಬಾರ ಬೆಂಬಲಿಗರಾದ ಶಂಕರ ಪರಮೇಶ್ವರ ಹೆಗಡೆ ಹಾಗೂ ಮಂಕಾಳ ವೈದ್ಯ ಅವರ ಬೆಂಬಲಿಗ, ಹಾಲಿ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ತಲಾ 109 ಮತ ಗಳಿಸುವ ಮೂಲಕ ಗಮನ ಸೆಳೆದರು. ಸಹಕಾರಿ ಸಂಘಗಳ ಚುನಾವಣೆಯ ಬೈಲಾದಂತೆ ಚೀಟಿ ಎತ್ತುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಿದಾಗ ಸುರೇಶ್ಚಂದ್ರ ಹೆಗಡೆ ಆಯ್ಕೆಯಾಗಿ ಗೆಲುವಿನ ನಗೆ ಬೀರಿದರು. ಉಪವಿಭಾಗಾಧಿಕಾರಿ ಕಾವ್ಯರಾಣಿ ಕೆ. ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. </p>.<p>ಬಳಿಕ ಮಾತನಾಡಿದ ಶಿವರಾಮ ಹೆಬ್ಬಾರ, ‘ಚುನಾವಣೆಯು ಫಲಿತಾಂಶದ ಅಂತಿಮ ಘಟ್ಟ ತಲುಪಿದೆ. ಇನ್ನೂ ಅಧಿಕೃತವಾಗಿ ಐದು ಕ್ಷೇತ್ರಗಳ ಫಲಿತಾಂಶ ಕೋರ್ಟ್ ಆದೇಶದಿಂದ ನಿಂತಿದೆ. ಆದಷ್ಟು ಬೇಗ ಕೋರ್ಟ್ನಲ್ಲಿ ಪ್ರಕರಣ ಮುಗಿಯಬೇಕಿದೆ. ಇಲ್ಲದೇ ಹೋದಲ್ಲಿ ಬ್ಯಾಂಕಿನ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ’ ಎಂದರು. ‘ಯಾವ ಕಾರಣಕ್ಕೂ ಜಿಲ್ಲೆಯ ರೈತರು, ಬ್ಯಾಂಕಿನಲ್ಲಿ ಠೇವಣಿ ಇಟ್ಟವರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ. ಸಂಸ್ಥೆಯ ಗೌರವಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳುತ್ತೇವೆ’ ಎಂದೂ ಹೇಳಿದರು. </p>.<div><blockquote>ಚುನಾವಣೆಯವರೆಗೆ ಮಾತ್ರ ಪ್ರತಿಸ್ಪರ್ಧಿಗಳು. ಇನ್ನು ಮುಂದೆ ಆಡಳಿತ ಪಕ್ಷ ವಿರೋಧ ಪಕ್ಷ ಎಂಬುದು ಬ್ಯಾಂಕಿನ ಆಡಳಿತದಲ್ಲಿ ಇರುವುದಿಲ್ಲ.</blockquote><span class="attribution">ಶಿವರಾಮ ಹೆಬ್ಬಾರ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ </span></div>.<p><strong>5 ಕ್ಷೇತ್ರಗಳ ಮತ ಎಣಿಕೆ ಬಾಕಿ</strong> </p><p>ಸದ್ಯ ನಾಲ್ಕು ಕ್ಷೇತ್ರಗಳ ಮತ ಎಣಿಕೆ ಮುಕ್ತಾಯವಾಗಿದ್ದು ಇನ್ನು ಔದ್ಯೋಗಿಕ ಮತದಾರ ಕ್ಷೇತ್ರ ಸಿದ್ದಾಪುರ ಸಹಕಾರ ಸಂಘ ಕಾರವಾರ ಸಹಕಾರ ಸಂಘ ಕ್ಷೇತ್ರ ಗ್ರಾಹಕರ ಕ್ಷೇತ್ರ ಹಾಗೂ ಅರ್ಬನ್ ಬ್ಯಾಂಕ್ ಮತ ಕ್ಷೇತ್ರ ಸೇರಿದಂತೆ 5 ನಿರ್ದೇಶಕ ಸ್ಥಾನಗಳ ಮತ ಎಣಿಕೆ ನಡೆಯಬೇಕಿದ್ದು ಕೋರ್ಟ್ ಅಂತಿಮ ಆದೇಶಕ್ಕೆ ಕಾಯಲಾಗುತ್ತಿದೆ. ಇದುವರೆಗೆ ಪ್ರಕಟಗೊಂಡ 11 ಸ್ಥಾನಗಳ ಪೈಕಿ ಶಿವರಾಮ ಹೆಬ್ಬಾರ ಬಣಕ್ಕೆ 8 ನಿರ್ದೇಶಕ ಸ್ಥಾನ ಮಂಕಾಳ ವೈದ್ಯ ಬಣಕ್ಕೆ 3 ಸ್ಥಾನ ಲಭಿಸಿದಂತಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ</strong>: ಇಲ್ಲಿನ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೊ ಆಪರೇಟಿವ್ (ಕೆಡಿಸಿಸಿ) ಬ್ಯಾಂಕಿನ ನಿರ್ದೇಶಕ ಸ್ಥಾನಗಳಿಗೆ ನಡೆದಿದ್ದ ಚುನಾವಣೆಯ ಬಾಕಿ ಇದ್ದ ನಾಲ್ಕು ಸ್ಥಾನಗಳ ಮತ ಎಣಿಕೆ ಪ್ರಕ್ರಿಯೆ ಧಾರವಾಡ ಹೈಕೋರ್ಟ್ ಅಂತಿಮ ಆದೇಶದ ಹಿನ್ನೆಲೆಯಲ್ಲಿ ಶನಿವಾರ ನಡೆಯಿತು. ನಾಲ್ಕರಲ್ಲಿ ಮೂರು ಸ್ಥಾನಗಳು ಹಾಲಿ ಅಧ್ಯಕ್ಷ ಶಿವರಾಮ ಹೆಬ್ಬಾರ ಹಾಗೂ ಬೆಂಬಲಿಗರ ಪಾಲಾದರೆ, ಸಚಿವ ಮಂಕಾಳ ವೈದ್ಯ ಬೆಂಬಲಿಗ, ಹಾಲಿ ನಿರ್ದೇಶಕ ಸುರೇಶ್ಚಂದ್ರ ಚೀಟಿ ಎತ್ತುವ ಪ್ರಕ್ರಿಯೆಯಲ್ಲಿ ಗೆಲುವು ದಾಖಲಿಸಿದರು.</p>.<p>ಕೆಡಿಸಿಸಿ ಬ್ಯಾಂಕಿನ 16 ನಿರ್ದೇಶಕ ಸ್ಥಾನಗಳಿಗೆ ಅ.25ರಂದು ಚುನಾವಣೆ ನಡೆದಿತ್ತು. 9 ಸ್ಥಾನಗಳಿಗೆ ಸಂಬಂಧಿಸಿದ ಮತದಾರರ ಯಾದಿ ಹಾಗೂ ವಿವಿಧ ವಿಷಯಗಳ ಕುರಿತಂತೆ ಕೆಲವರು ಕೋರ್ಟ್ ಮೊರೆ ಹೋಗಿದ್ದರು. ಹೀಗಾಗಿ, ವಿವಾದಿತ ಮತಗಳನ್ನು ಪ್ರತ್ಯೇಕ ಮತ ಪೆಟ್ಟಿಗೆಯಲ್ಲಿ ಸಂಗ್ರಹಿಸಿಟ್ಟು, ಉಳಿದ ಮತ ಎಣಿಕೆ ನಡೆದಿತ್ತು. ಆದರೆ, ಈ ಪ್ರತ್ಯೇಕವಾಗಿ ಇಟ್ಟ ಮತಗಳ ಎಣಿಕೆ ಪೂರ್ಣಗೊಳ್ಳದ ಹೊರತೂ ಫಲಿತಾಂಶ ಘೋಷಣೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಧಾರವಾಡ ಹೈಕೋರ್ಟ್ ಪೀಠವು ಈ 9 ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳಿಗೆ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲು ಸೂಚಿಸಿದ್ದ ಹಿನ್ನೆಲೆಯಲ್ಲಿ ಮತಗಳ ಎಣಿಕೆ ನಡೆಯಿತು.</p>.<p>ಯಲ್ಲಾಪುರ ಪ್ರಾಥಮಿಕ ಪ್ರಾಥಮಿಕ ಪತ್ತಿನ ಸಹಕಾರಿ ಕ್ಷೇತ್ರದಲ್ಲಿ ಹಾಲಿ ಅಧ್ಯಕ್ಷ ಶಿವರಾಮ ಹೆಬ್ಬಾರ 10 ಮತ ಪಡೆದು ಗೆಲುವು ಸಾಧಿಸಿದರು. ಅವರ ಪ್ರತಿಸ್ಪರ್ಧಿ ಗೋಪಾಲಕೃಷ್ಣ ನರಸಿಂಹ ಗಾಂವಕರ 2 ಮತಗಳನ್ನು ಪಡೆದಿದ್ದಾರೆ. ಶಿರಸಿ ತಾಲ್ಲೂಕು ಮಹಾಬಲೇಶ್ವರ ಅನಂತ ಹೆಗಡೆ 13 ಮತಗಳನ್ನು ಪಡೆದು ವಿಜಯಿಯಾದರೆ, ಪ್ರತಿಸ್ಪರ್ಧಿ ಜಿ.ಆರ್.ಹೆಗಡೆ ಬೆಳ್ಳೇಕೇರಿ 12 ಮತಗಳನ್ನು ಪಡೆದು ಪರಾಭವಗೊಂಡರು. ತಾಲ್ಲೂಕು ಒಕ್ಕಲುತನ ಹುಟ್ಟುವಳಿಗಳ ಮಾರಾಟ ಸಹಕಾರಿ ಸಂಘಗಳ ಮತ ಕ್ಷೇತ್ರ ಸ್ಥಾನದಲ್ಲಿ ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ 5 ಮತಗಳನ್ನು ಪಡೆದರೆ, ರವಿ ಗಜಾನನ ಹೆಗಡೆ 6 ಮತಗಳನ್ನು ಪಡೆದು ಗೆಲುವು ದಾಕಲಿಸಿದರು. </p>.<p>ತೀವ್ರ ಕುತೂಹಲ ಮೂಡಿಸಿದ್ದ ಹಾಲು ಉತ್ಪಾದಕರ, ಕಾರ್ಮಿಕ, ಕೂಲಿಕಾರರ ಮತ ಕ್ಷೇತ್ರದ ಮತ ಎಣಿಕೆ ಕೌತುಕ ಮೂಡಿಸಿತ್ತು. ಈ ವಿಭಾಗದಲ್ಲಿ 17 ಮತದಾರರ ಕುರಿತಂತೆ ಕೋರ್ಟ್ ಆದೇಶವಿದ್ದ ಕಾರಣ ಈ ಮತಗಳ ಎಣಿಕೆಯನ್ನು ಮುಂದೂಡಲಾಗಿತ್ತು. ಶಿವರಾಮ ಹೆಬ್ಬಾರ ಬೆಂಬಲಿಗರಾದ ಶಂಕರ ಪರಮೇಶ್ವರ ಹೆಗಡೆ ಹಾಗೂ ಮಂಕಾಳ ವೈದ್ಯ ಅವರ ಬೆಂಬಲಿಗ, ಹಾಲಿ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ತಲಾ 109 ಮತ ಗಳಿಸುವ ಮೂಲಕ ಗಮನ ಸೆಳೆದರು. ಸಹಕಾರಿ ಸಂಘಗಳ ಚುನಾವಣೆಯ ಬೈಲಾದಂತೆ ಚೀಟಿ ಎತ್ತುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಿದಾಗ ಸುರೇಶ್ಚಂದ್ರ ಹೆಗಡೆ ಆಯ್ಕೆಯಾಗಿ ಗೆಲುವಿನ ನಗೆ ಬೀರಿದರು. ಉಪವಿಭಾಗಾಧಿಕಾರಿ ಕಾವ್ಯರಾಣಿ ಕೆ. ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. </p>.<p>ಬಳಿಕ ಮಾತನಾಡಿದ ಶಿವರಾಮ ಹೆಬ್ಬಾರ, ‘ಚುನಾವಣೆಯು ಫಲಿತಾಂಶದ ಅಂತಿಮ ಘಟ್ಟ ತಲುಪಿದೆ. ಇನ್ನೂ ಅಧಿಕೃತವಾಗಿ ಐದು ಕ್ಷೇತ್ರಗಳ ಫಲಿತಾಂಶ ಕೋರ್ಟ್ ಆದೇಶದಿಂದ ನಿಂತಿದೆ. ಆದಷ್ಟು ಬೇಗ ಕೋರ್ಟ್ನಲ್ಲಿ ಪ್ರಕರಣ ಮುಗಿಯಬೇಕಿದೆ. ಇಲ್ಲದೇ ಹೋದಲ್ಲಿ ಬ್ಯಾಂಕಿನ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ’ ಎಂದರು. ‘ಯಾವ ಕಾರಣಕ್ಕೂ ಜಿಲ್ಲೆಯ ರೈತರು, ಬ್ಯಾಂಕಿನಲ್ಲಿ ಠೇವಣಿ ಇಟ್ಟವರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ. ಸಂಸ್ಥೆಯ ಗೌರವಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳುತ್ತೇವೆ’ ಎಂದೂ ಹೇಳಿದರು. </p>.<div><blockquote>ಚುನಾವಣೆಯವರೆಗೆ ಮಾತ್ರ ಪ್ರತಿಸ್ಪರ್ಧಿಗಳು. ಇನ್ನು ಮುಂದೆ ಆಡಳಿತ ಪಕ್ಷ ವಿರೋಧ ಪಕ್ಷ ಎಂಬುದು ಬ್ಯಾಂಕಿನ ಆಡಳಿತದಲ್ಲಿ ಇರುವುದಿಲ್ಲ.</blockquote><span class="attribution">ಶಿವರಾಮ ಹೆಬ್ಬಾರ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ </span></div>.<p><strong>5 ಕ್ಷೇತ್ರಗಳ ಮತ ಎಣಿಕೆ ಬಾಕಿ</strong> </p><p>ಸದ್ಯ ನಾಲ್ಕು ಕ್ಷೇತ್ರಗಳ ಮತ ಎಣಿಕೆ ಮುಕ್ತಾಯವಾಗಿದ್ದು ಇನ್ನು ಔದ್ಯೋಗಿಕ ಮತದಾರ ಕ್ಷೇತ್ರ ಸಿದ್ದಾಪುರ ಸಹಕಾರ ಸಂಘ ಕಾರವಾರ ಸಹಕಾರ ಸಂಘ ಕ್ಷೇತ್ರ ಗ್ರಾಹಕರ ಕ್ಷೇತ್ರ ಹಾಗೂ ಅರ್ಬನ್ ಬ್ಯಾಂಕ್ ಮತ ಕ್ಷೇತ್ರ ಸೇರಿದಂತೆ 5 ನಿರ್ದೇಶಕ ಸ್ಥಾನಗಳ ಮತ ಎಣಿಕೆ ನಡೆಯಬೇಕಿದ್ದು ಕೋರ್ಟ್ ಅಂತಿಮ ಆದೇಶಕ್ಕೆ ಕಾಯಲಾಗುತ್ತಿದೆ. ಇದುವರೆಗೆ ಪ್ರಕಟಗೊಂಡ 11 ಸ್ಥಾನಗಳ ಪೈಕಿ ಶಿವರಾಮ ಹೆಬ್ಬಾರ ಬಣಕ್ಕೆ 8 ನಿರ್ದೇಶಕ ಸ್ಥಾನ ಮಂಕಾಳ ವೈದ್ಯ ಬಣಕ್ಕೆ 3 ಸ್ಥಾನ ಲಭಿಸಿದಂತಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>