<p><strong>ಕಾರವಾರ: </strong>ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೊಂಕಣ ರೈಲ್ವೆಯು ವಿಶೇಷ ರೈಲುಗಳ ಸಂಚಾರವನ್ನು ಪ್ರಕಟಿಸಿದೆ.</p>.<p>01079 ಸಂಖ್ಯೆಯ ಲೋಕಮಾನ್ಯ ತಿಲಕ್ (ಟಿ)– ಕೊಚುವೇಲಿ– ಲೋಕಮಾನ್ಯ ತಿಲಕ್ ವಾರಾಂತ್ಯವಿಶೇಷ ರೈಲುಗಳು ಡಿ.21, ಡಿ.28 ಹಾಗೂಜ.4ರಂದು ಸಂಚರಿಸಲಿವೆ. ಅವು ಲೋಕಮಾನ್ಯ ಟರ್ಮಿನಲ್ನಿಂದ ರಾತ್ರಿ 12.45ಕ್ಕೆ ಸಂಚಾರ ಆರಂಭಿಸಲಿವೆ. 01080 ಸಂಖ್ಯೆಯರೈಲುಗಳು ಡಿ.22, 29 ಹಾಗೂ ಜ.5ರಂದು ಕೊಚುವೇಲಿಯಿಂದ ಮಧ್ಯಾಹ್ನ2.15ಕ್ಕೆ ಪ್ರಯಾಣಿಸಲಿವೆ.</p>.<p>01467 ಸಂಖ್ಯೆಯ ಪುಣೆ ಜಂಕ್ಷನ್– ಎರ್ನಾಕುಲಂ ಜಂಕ್ಷನ್ ನಡುವೆ ‘ಹಮ್ಸಫರ್’ ವಾರಾಂತ್ಯ ವಿಶೇಷ ರೈಲುಗಳು ಡಿ.23, 30 ಹಾಗೂ ಜ.6ರಂದು ಪುಣೆಯಿಂದ ಸಂಜೆ 7.55ಕ್ಕೆಪ್ರಯಾಣಿಸಲಿವೆ. 01468 ಸಂಖ್ಯೆಯ ರೈಲುಗಳು ಡಿ.25, ಜ.1 ಹಾಗೂ 8ರಂದು ಎರ್ನಾಕುಲಂನಿಂದ ಬೆಳಿಗ್ಗೆ 5.30ಕ್ಕೆ ಹೊರಡಲಿದೆ.</p>.<p>ಈ ರೈಲುಗಳಿಗೆ ಕಾರವಾರ, ಕುಮಟಾ, ಮುರ್ಡೇಶ್ವರ, ಮೂಕಾಂಬಿಕಾ ರಸ್ತೆ ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ, ಸುರತ್ಕಲ್, ಮಂಗಳೂರು ಜಂಕ್ಷನ್, ಕಾಸರಗೋಡಿನಲ್ಲಿನಿಲುಗಡೆ ಇದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ: </strong>ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೊಂಕಣ ರೈಲ್ವೆಯು ವಿಶೇಷ ರೈಲುಗಳ ಸಂಚಾರವನ್ನು ಪ್ರಕಟಿಸಿದೆ.</p>.<p>01079 ಸಂಖ್ಯೆಯ ಲೋಕಮಾನ್ಯ ತಿಲಕ್ (ಟಿ)– ಕೊಚುವೇಲಿ– ಲೋಕಮಾನ್ಯ ತಿಲಕ್ ವಾರಾಂತ್ಯವಿಶೇಷ ರೈಲುಗಳು ಡಿ.21, ಡಿ.28 ಹಾಗೂಜ.4ರಂದು ಸಂಚರಿಸಲಿವೆ. ಅವು ಲೋಕಮಾನ್ಯ ಟರ್ಮಿನಲ್ನಿಂದ ರಾತ್ರಿ 12.45ಕ್ಕೆ ಸಂಚಾರ ಆರಂಭಿಸಲಿವೆ. 01080 ಸಂಖ್ಯೆಯರೈಲುಗಳು ಡಿ.22, 29 ಹಾಗೂ ಜ.5ರಂದು ಕೊಚುವೇಲಿಯಿಂದ ಮಧ್ಯಾಹ್ನ2.15ಕ್ಕೆ ಪ್ರಯಾಣಿಸಲಿವೆ.</p>.<p>01467 ಸಂಖ್ಯೆಯ ಪುಣೆ ಜಂಕ್ಷನ್– ಎರ್ನಾಕುಲಂ ಜಂಕ್ಷನ್ ನಡುವೆ ‘ಹಮ್ಸಫರ್’ ವಾರಾಂತ್ಯ ವಿಶೇಷ ರೈಲುಗಳು ಡಿ.23, 30 ಹಾಗೂ ಜ.6ರಂದು ಪುಣೆಯಿಂದ ಸಂಜೆ 7.55ಕ್ಕೆಪ್ರಯಾಣಿಸಲಿವೆ. 01468 ಸಂಖ್ಯೆಯ ರೈಲುಗಳು ಡಿ.25, ಜ.1 ಹಾಗೂ 8ರಂದು ಎರ್ನಾಕುಲಂನಿಂದ ಬೆಳಿಗ್ಗೆ 5.30ಕ್ಕೆ ಹೊರಡಲಿದೆ.</p>.<p>ಈ ರೈಲುಗಳಿಗೆ ಕಾರವಾರ, ಕುಮಟಾ, ಮುರ್ಡೇಶ್ವರ, ಮೂಕಾಂಬಿಕಾ ರಸ್ತೆ ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ, ಸುರತ್ಕಲ್, ಮಂಗಳೂರು ಜಂಕ್ಷನ್, ಕಾಸರಗೋಡಿನಲ್ಲಿನಿಲುಗಡೆ ಇದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>