<p>ಶಿರಸಿ: ಎಥೆನಾಲ್ ಉತ್ಪಾದನೆಗೆ ಮೆಕ್ಕೆಜೋಳ ಬಳಕೆ ಆಗುತ್ತಿರುವ ಕಾರಣಕ್ಕೆ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಮೆಕ್ಕೆಜೋಳಕ್ಕೆ ಕಟಾವಿನ ಆರಂಭದಲ್ಲೇ ಉತ್ತಮ ಧಾರಣೆ ಲಭ್ಯವಾಗುತ್ತಿದೆ. ಆದರೆ ಅತಿವೃಷ್ಟಿಯ ಕಾರಣಕ್ಕೆ ಇಳುವರಿ ಮೇಲೆ ತೀವ್ರ ಪರಿಣಾಮ ಬೀರಿದ್ದು, ಬೆಲೆಯಿದ್ದಾಗ ಬೆಳೆ ಇಲ್ಲ ಎಂಬ ಸ್ಥಿತಿ ಬೆಳೆಗಾರನದ್ದಾಗಿದೆ.</p>.<p>ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂದಾಜು 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಈ ಹಿಂದೆ ಕೋಳಿ ಆಹಾರ ಸೇರಿ ಕೆಲವೇ ಕೆಲವು ಉದ್ಯಮಗಳಿಗೆ ಸೀಮಿತವಾಗಿದ್ದ ಮೆಕ್ಕೆಜೋಳದಿಂದ ಈಗ ಎಥೆನಾಲ್ ಉತ್ಪಾದನೆ ಮಾಡಲಾಗುತ್ತಿದ್ದು, ಭಾರಿ ಬೇಡಿಕೆ ಬಂದಿದೆ ಎಂಬುದು ಬೆಳೆಗಾರರ ಅಭಿಪ್ರಾಯ.</p>.<p>‘ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ಮೆಕ್ಕೆಜೋಳ ಗರಿಷ್ಠ ₹3,300ರವರೆಗೂ ಮಾರಾಟವಾಗುತ್ತಿದ್ದು, ಇದು ಬೆಳೆ ಕಟಾವಿನ ಆರಂಭದ ದಿನಗಳಲ್ಲಿ ರೈತರಿಗೆ ಸಿಗುತ್ತಿರುವ ಅತ್ಯಧಿಕ ಧಾರಣೆಯಾಗಿದೆ. ಈ ಹಿಂದೆ ಮೆಕ್ಕೆಜೋಳ ಬೆಳೆದ ರೈತರು ಬೆಂಬಲ ಬೆಲೆಯಲ್ಲಿ ಬೆಳೆಯನ್ನು ಖರೀದಿಸುವಂತೆ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದರು. ಆದರೆ, ಪ್ರಸ್ತುತ ಕೇಂದ್ರ ಸರ್ಕಾರ ಘೋಷಿಸಿರುವ ₹2,330 ಬೆಂಬಲ ಬೆಲೆಗಿಂತಲೂ ದರ ಹೆಚ್ಚಳವಾಗಿದೆ. ಕಳೆದ ವರ್ಷಗಳಲ್ಲಿ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಮೆಕ್ಕೆಜೋಳಕ್ಕೆ ₹2,000 ದರ ಇರುತ್ತಿತ್ತು’ ಎನ್ನುತ್ತಾರೆ ರೈತರು.</p>.<p>‘ಕಬ್ಬು ಮತ್ತು ಅಕ್ಕಿಯಿಂದ ಉತ್ಪಾದನೆ ಮಾಡುತ್ತಿದ್ದ ಎಥೆನಾಲ್ ಅನ್ನು ಈಗ ಮೆಕ್ಕೆಜೋಳದಿಂದಲೂ ಉತ್ಪಾದನೆ ಮಾಡಲಾಗುತ್ತಿದೆ. ಪಕ್ಕದ ಜಿಲ್ಲೆ ಹಾವೇರಿಯಲ್ಲಿ ಕಾರ್ಖಾನೆಗೆ ಎಥೆನಾಲ್ ಉತ್ಪಾದನೆ ಅನುಮತಿ ನೀಡಲಾಗುತ್ತಿದ್ದು, ಈ ಕಾರ್ಖಾನೆಗೆ ಪ್ರತಿದಿನ ಸಾವಿರಾರು ಕ್ವಿಂಟಾಲ್ ಮೆಕ್ಕೆಜೋಳ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಕಾರ್ಖಾನೆಯ ಮಾಲೀಕರು ಮೆಕ್ಕೆಜೋಳ ವ್ಯಾಪಾರಸ್ಥರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಮೆಕ್ಕೆಜೋಳದ ದರ ಏರಿಕೆಗೆ ಕಾರಣವಾಗಿದೆ’ ಎಂಬುದು ವ್ಯಾಪಾರಿ ಮಹೇಶ ಗೌಡ ಮಾತು.</p>.<p>‘ಅತಿವೃಷ್ಟಿಯ ಕಾರಣಕ್ಕೆ ಅರ್ಧ ಇಳುವರಿ ಕುಂಠಿತವಾಗಿದೆ. ಕಳೆದ ವರ್ಷ 2 ಎಕರೆಗೆ 30 ಕ್ವಿಂಟಾಲ್ ಉತ್ಪನ್ನ ಬಂದಿದ್ದು, ಈ ಬಾರಿ ಕೇವಲ 18 ಕ್ವಿಂಟಲ್ ಕೂಡ ಬಂದಿಲ್ಲ. ಈ ದರ ಲಭಿಸಿದರೆ ಹಾಕಿದ ಬಂಡವಾಳ ರೈತರ ಕೈ ಸೇರುತ್ತದೆ. ದರ ಇಳಿದರೆ ನಷ್ಟದ ಹೊರೆ ರೈತರ ಹೆಗಲೇರುತ್ತದೆ’ ಎಂಬುದು ಬೆಳೆಗಾರ ಮಲ್ಲಿಕಾರ್ಜುನ ಗೌಡ ಮಾತಾಗಿದೆ.</p>.<p> ಕಟಾವಿನ ಆರಂಭದಲ್ಲೇ ಉತ್ತಮ ಧಾರಣೆ ಕ್ವಿಂಟಲ್ ಮೆಕ್ಕೆಜೋಳಕ್ಕೆ ₹3,300 ದರ ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚುವ ಸಾಧ್ಯತೆ</p>.<div><blockquote>ಮೆಕ್ಕೆಜೋಳಕ್ಕೆ ಈ ಹಿಂದೆ ಯಾವಾಗಲೂ ಇಷ್ಟೊಂದು ಬೇಡಿಕೆ ಬಂದಿರಲಿಲ್ಲ. ಪ್ರಸ್ತುತ ₹3 ಸಾವಿರದಿಂದ ₹3300 ಆಸುಪಾಸು ಮಾರಾಟ ಆಗುತ್ತಿದೆ. ಮುಂದಿನ ದಿನಗಳಲ್ಲಿ ದರ ಹೆಚ್ಚಾಗಬಹುದು </blockquote><span class="attribution">ಮಹೇಸ ನಾಯ್ಕ ಮೆಕ್ಕೆಜೋಳ ಬೆಳೆಗಾರ</span></div>.<p> ಕುಕ್ಕಟೋದ್ಯಮಕ್ಕೆ ಪೆಟ್ಟು ಮೆಕ್ಕೆಜೋಳ ದರ ಏರಿಕೆಯಾಗುತ್ತಿರುವುದರಿಂದ ಕುಕ್ಕಟೋದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ. ತಾಲ್ಲೂಕಿನಲ್ಲಿ ಕೋಳಿ ಸಾಕಣೆಯಲ್ಲಿ ಮೆಕ್ಕೆಜೋಳವೇ ಪ್ರಮುಖ ಆಹಾರವಾಗಿದೆ. ಈಗ ಮೆಕ್ಕೆಜೋಳದ ದರ ಏರಿಕೆಯಾಗಿದ್ದು ಕೋಳಿ ಸಾಕಣೆಗೆ ಭಾರಿ ಸಮಸ್ಯೆ ಎದುರಾಗಿದೆ. ಇದು ಮುಂದಿನ ದಿನಗಳಲ್ಲಿ ಮೊಟ್ಟೆ ದರ ಏರಿಕೆಗೆ ಕಾರಣವಾದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಸಿ: ಎಥೆನಾಲ್ ಉತ್ಪಾದನೆಗೆ ಮೆಕ್ಕೆಜೋಳ ಬಳಕೆ ಆಗುತ್ತಿರುವ ಕಾರಣಕ್ಕೆ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಮೆಕ್ಕೆಜೋಳಕ್ಕೆ ಕಟಾವಿನ ಆರಂಭದಲ್ಲೇ ಉತ್ತಮ ಧಾರಣೆ ಲಭ್ಯವಾಗುತ್ತಿದೆ. ಆದರೆ ಅತಿವೃಷ್ಟಿಯ ಕಾರಣಕ್ಕೆ ಇಳುವರಿ ಮೇಲೆ ತೀವ್ರ ಪರಿಣಾಮ ಬೀರಿದ್ದು, ಬೆಲೆಯಿದ್ದಾಗ ಬೆಳೆ ಇಲ್ಲ ಎಂಬ ಸ್ಥಿತಿ ಬೆಳೆಗಾರನದ್ದಾಗಿದೆ.</p>.<p>ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂದಾಜು 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಈ ಹಿಂದೆ ಕೋಳಿ ಆಹಾರ ಸೇರಿ ಕೆಲವೇ ಕೆಲವು ಉದ್ಯಮಗಳಿಗೆ ಸೀಮಿತವಾಗಿದ್ದ ಮೆಕ್ಕೆಜೋಳದಿಂದ ಈಗ ಎಥೆನಾಲ್ ಉತ್ಪಾದನೆ ಮಾಡಲಾಗುತ್ತಿದ್ದು, ಭಾರಿ ಬೇಡಿಕೆ ಬಂದಿದೆ ಎಂಬುದು ಬೆಳೆಗಾರರ ಅಭಿಪ್ರಾಯ.</p>.<p>‘ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ಮೆಕ್ಕೆಜೋಳ ಗರಿಷ್ಠ ₹3,300ರವರೆಗೂ ಮಾರಾಟವಾಗುತ್ತಿದ್ದು, ಇದು ಬೆಳೆ ಕಟಾವಿನ ಆರಂಭದ ದಿನಗಳಲ್ಲಿ ರೈತರಿಗೆ ಸಿಗುತ್ತಿರುವ ಅತ್ಯಧಿಕ ಧಾರಣೆಯಾಗಿದೆ. ಈ ಹಿಂದೆ ಮೆಕ್ಕೆಜೋಳ ಬೆಳೆದ ರೈತರು ಬೆಂಬಲ ಬೆಲೆಯಲ್ಲಿ ಬೆಳೆಯನ್ನು ಖರೀದಿಸುವಂತೆ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದರು. ಆದರೆ, ಪ್ರಸ್ತುತ ಕೇಂದ್ರ ಸರ್ಕಾರ ಘೋಷಿಸಿರುವ ₹2,330 ಬೆಂಬಲ ಬೆಲೆಗಿಂತಲೂ ದರ ಹೆಚ್ಚಳವಾಗಿದೆ. ಕಳೆದ ವರ್ಷಗಳಲ್ಲಿ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಮೆಕ್ಕೆಜೋಳಕ್ಕೆ ₹2,000 ದರ ಇರುತ್ತಿತ್ತು’ ಎನ್ನುತ್ತಾರೆ ರೈತರು.</p>.<p>‘ಕಬ್ಬು ಮತ್ತು ಅಕ್ಕಿಯಿಂದ ಉತ್ಪಾದನೆ ಮಾಡುತ್ತಿದ್ದ ಎಥೆನಾಲ್ ಅನ್ನು ಈಗ ಮೆಕ್ಕೆಜೋಳದಿಂದಲೂ ಉತ್ಪಾದನೆ ಮಾಡಲಾಗುತ್ತಿದೆ. ಪಕ್ಕದ ಜಿಲ್ಲೆ ಹಾವೇರಿಯಲ್ಲಿ ಕಾರ್ಖಾನೆಗೆ ಎಥೆನಾಲ್ ಉತ್ಪಾದನೆ ಅನುಮತಿ ನೀಡಲಾಗುತ್ತಿದ್ದು, ಈ ಕಾರ್ಖಾನೆಗೆ ಪ್ರತಿದಿನ ಸಾವಿರಾರು ಕ್ವಿಂಟಾಲ್ ಮೆಕ್ಕೆಜೋಳ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಕಾರ್ಖಾನೆಯ ಮಾಲೀಕರು ಮೆಕ್ಕೆಜೋಳ ವ್ಯಾಪಾರಸ್ಥರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಮೆಕ್ಕೆಜೋಳದ ದರ ಏರಿಕೆಗೆ ಕಾರಣವಾಗಿದೆ’ ಎಂಬುದು ವ್ಯಾಪಾರಿ ಮಹೇಶ ಗೌಡ ಮಾತು.</p>.<p>‘ಅತಿವೃಷ್ಟಿಯ ಕಾರಣಕ್ಕೆ ಅರ್ಧ ಇಳುವರಿ ಕುಂಠಿತವಾಗಿದೆ. ಕಳೆದ ವರ್ಷ 2 ಎಕರೆಗೆ 30 ಕ್ವಿಂಟಾಲ್ ಉತ್ಪನ್ನ ಬಂದಿದ್ದು, ಈ ಬಾರಿ ಕೇವಲ 18 ಕ್ವಿಂಟಲ್ ಕೂಡ ಬಂದಿಲ್ಲ. ಈ ದರ ಲಭಿಸಿದರೆ ಹಾಕಿದ ಬಂಡವಾಳ ರೈತರ ಕೈ ಸೇರುತ್ತದೆ. ದರ ಇಳಿದರೆ ನಷ್ಟದ ಹೊರೆ ರೈತರ ಹೆಗಲೇರುತ್ತದೆ’ ಎಂಬುದು ಬೆಳೆಗಾರ ಮಲ್ಲಿಕಾರ್ಜುನ ಗೌಡ ಮಾತಾಗಿದೆ.</p>.<p> ಕಟಾವಿನ ಆರಂಭದಲ್ಲೇ ಉತ್ತಮ ಧಾರಣೆ ಕ್ವಿಂಟಲ್ ಮೆಕ್ಕೆಜೋಳಕ್ಕೆ ₹3,300 ದರ ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚುವ ಸಾಧ್ಯತೆ</p>.<div><blockquote>ಮೆಕ್ಕೆಜೋಳಕ್ಕೆ ಈ ಹಿಂದೆ ಯಾವಾಗಲೂ ಇಷ್ಟೊಂದು ಬೇಡಿಕೆ ಬಂದಿರಲಿಲ್ಲ. ಪ್ರಸ್ತುತ ₹3 ಸಾವಿರದಿಂದ ₹3300 ಆಸುಪಾಸು ಮಾರಾಟ ಆಗುತ್ತಿದೆ. ಮುಂದಿನ ದಿನಗಳಲ್ಲಿ ದರ ಹೆಚ್ಚಾಗಬಹುದು </blockquote><span class="attribution">ಮಹೇಸ ನಾಯ್ಕ ಮೆಕ್ಕೆಜೋಳ ಬೆಳೆಗಾರ</span></div>.<p> ಕುಕ್ಕಟೋದ್ಯಮಕ್ಕೆ ಪೆಟ್ಟು ಮೆಕ್ಕೆಜೋಳ ದರ ಏರಿಕೆಯಾಗುತ್ತಿರುವುದರಿಂದ ಕುಕ್ಕಟೋದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ. ತಾಲ್ಲೂಕಿನಲ್ಲಿ ಕೋಳಿ ಸಾಕಣೆಯಲ್ಲಿ ಮೆಕ್ಕೆಜೋಳವೇ ಪ್ರಮುಖ ಆಹಾರವಾಗಿದೆ. ಈಗ ಮೆಕ್ಕೆಜೋಳದ ದರ ಏರಿಕೆಯಾಗಿದ್ದು ಕೋಳಿ ಸಾಕಣೆಗೆ ಭಾರಿ ಸಮಸ್ಯೆ ಎದುರಾಗಿದೆ. ಇದು ಮುಂದಿನ ದಿನಗಳಲ್ಲಿ ಮೊಟ್ಟೆ ದರ ಏರಿಕೆಗೆ ಕಾರಣವಾದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>