ಗುಳ್ಳಾಪುರದಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿದ್ದು, ಕಮ್ಮಾಣಿ– ಹಳುವಳ್ಳಿ ರಸ್ತೆಯಲ್ಲಿ ಈ ಸೇತುವೆಯಿದೆ. ಅದರ ನಿರ್ವಹಣೆಯಬಗ್ಗೆ ಲೋಕೋಪಯೋಗಿ ಇಲಾಖೆಯ ಅಂಕೋಲಾದ ಅಧಿಕಾರಿಗಳನ್ನು ಕೇಳಿದರೆ, ಸೇತುವೆಯು ಯಲ್ಲಾಪುರ ವ್ಯಾಪ್ತಿಯಲ್ಲಿದೆ ಎನ್ನುತ್ತಿದ್ದಾರೆ. ಯಲ್ಲಾಪುರದವರನ್ನು ಕೇಳಿದರೆ ಅಂಕೋಲಾ ಎಂದು ಹೇಳುತ್ತಿದ್ದಾರೆ. ಹೀಗಾಗಿ ಯಾರನ್ನು ಸಂಪರ್ಕಸಬೇಕು ಎಂಬುದೇ ತಿಳಿಯುತ್ತಿಲ್ಲ. ಸಂಭವನೀಯ ದುರಂತವನ್ನು ಸೇತುವೆ ದುರಸ್ತಿ ಮಾಡಿ ತಪ್ಪಿಸಬೇಕು ಎಂದು ಕೋನಾಳದ ಸುಧಾಕರ ಭಟ್ ಒತ್ತಾಯಿಸಿದ್ದಾರೆ.