<p><strong>ಶಿರಸಿ:</strong> ತಾಲ್ಲೂಕಿನ ಕಾನಗೋಡನ ಶ್ರೀಸಿದ್ದಿ ಮಹಿಳಾ ಮಂಡಳಿಯ ಮಹಿಳಾ ಉತ್ಸವದ ಅಂಗವಾಗಿ ಮಹಿಳೆಯರಿಗೆ ಹಾಗೂ ಯುವತಿಯರಿಗೆ ವಿವಿಧ ಸ್ಪರ್ಧೆ, ಪಂಚಾಯಿತಿ ವ್ಯಾಪ್ತಿಯ ಮಾಹಿತಿ ಕೈಪಿಡಿ ಬಿಡುಗಡೆ, ಬಹುಮಾನ ವಿತರಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.</p>.<p>ಮಹಿಳೆಯರು, ಹೆಣ್ಣು ಮಕ್ಕಳಿಗಾಗಿ ಹಗ್ಗ ಜಗ್ಗಾಟ, ತಲೆ ಮೇಲೆ ಪುಸ್ತಕ ಇಟ್ಟು ಓಟ, ಸಂಗೀತ ಖುರ್ಚಿ, ಏಕ್ಮಿನಿಟ್, ಕಸೂತಿ ಸ್ಪರ್ಧೆ, ಸಿಹಿ ತಿಂಡಿ ಸ್ಪರ್ಧೆ, ಭಾರತೀಯ ಸೊಗಡಿನ ಫ್ಯಾಷನ್ ಶೋಗಳು ಗಮನ ಸೆಳೆದವು. 200ಕ್ಕೂ ಅಧಿಕ ಮಹಿಳೆಯರು ಭಾಗವಹಿಸಿದ್ದರು.</p>.<p>ಸಮಾರೋಪದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಸತೀಶ ಹೆಗಡೆ ಮಾಹಿತಿ ಪುಸ್ತಕ ಬಿಡುಗಡೆ ಮಾಡಿದರು. ಇದೇ ವೇಳೆ ಸಾಹಿತಿ ಸತೀಶ ಹೆಗಡೆ, ಮುಖ್ಯಮಂತ್ರಿ ಪದಕ ಪಡೆದ ಅರಣ್ಯ ಇಲಾಖೆ ನೌಕರ ವಿ.ಟಿ.ನಾಯ್ಕ, ಯಕ್ಷಗಾನದ ಯುವ ಪ್ರತಿಭೆ ತುಳಸಿ ಹೆಗಡೆ ಅವರನ್ನು ಸನ್ಮಾನಿಸಲಾಯಿತು.</p>.<p>ಮನುವಿಕಾಸದ ಗಣಪತಿ ಭಟ್, ಎಂಇಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ಪತ್ರಕರ್ತೆ ಶೈಲಜಾ ಗೋರ್ನಮನೆ, ಪಂಚಾಯಿತಿ ಅಧ್ಯಕ್ಷ ಪ್ರಕಾಶ ನಾಯ್ಕ, ಪ್ರಮುಖರಾದ ಜಿ.ವಿ.ಕಾನಗೋಡ, ರಾಜಾರಾಮ ಭಟ್, ಡಿ.ವಿ.ಹೆಗಡೆ, ಗೀತಾ ಪೂಜಾರಿ, ಸಂಘದ ಕಾರ್ಯದರ್ಶಿ ವಿಮಲಾ ಹೆಗಡೆ ಇದ್ದರು. </p>.<p>ಮಂಡಳಿ ಅಧ್ಯಕ್ಷೆ ಜಲಜಾಕ್ಷಿ ಹೆಗಡೆ ಆಲ್ಮನೆ ಅಧ್ಯಕ್ಷತೆ ವಹಿಸಿದ್ದರು. ಗೀತಾ ಪೂಜಾರಿ, ಸುವರ್ಣಾ ಕಾನಗೋಡ, ವಿಮಲಾ ಹೆಗಡೆ, ಶೋಭಾ ಮಶೀಗದ್ದೆ, ಪ್ರತಿಮಾ ಹೆಗಡೆ, ಶೋಭಾ ಹೆಗಡೆ, ರವೀಂದ್ರ ಸಹಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong> ತಾಲ್ಲೂಕಿನ ಕಾನಗೋಡನ ಶ್ರೀಸಿದ್ದಿ ಮಹಿಳಾ ಮಂಡಳಿಯ ಮಹಿಳಾ ಉತ್ಸವದ ಅಂಗವಾಗಿ ಮಹಿಳೆಯರಿಗೆ ಹಾಗೂ ಯುವತಿಯರಿಗೆ ವಿವಿಧ ಸ್ಪರ್ಧೆ, ಪಂಚಾಯಿತಿ ವ್ಯಾಪ್ತಿಯ ಮಾಹಿತಿ ಕೈಪಿಡಿ ಬಿಡುಗಡೆ, ಬಹುಮಾನ ವಿತರಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.</p>.<p>ಮಹಿಳೆಯರು, ಹೆಣ್ಣು ಮಕ್ಕಳಿಗಾಗಿ ಹಗ್ಗ ಜಗ್ಗಾಟ, ತಲೆ ಮೇಲೆ ಪುಸ್ತಕ ಇಟ್ಟು ಓಟ, ಸಂಗೀತ ಖುರ್ಚಿ, ಏಕ್ಮಿನಿಟ್, ಕಸೂತಿ ಸ್ಪರ್ಧೆ, ಸಿಹಿ ತಿಂಡಿ ಸ್ಪರ್ಧೆ, ಭಾರತೀಯ ಸೊಗಡಿನ ಫ್ಯಾಷನ್ ಶೋಗಳು ಗಮನ ಸೆಳೆದವು. 200ಕ್ಕೂ ಅಧಿಕ ಮಹಿಳೆಯರು ಭಾಗವಹಿಸಿದ್ದರು.</p>.<p>ಸಮಾರೋಪದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಸತೀಶ ಹೆಗಡೆ ಮಾಹಿತಿ ಪುಸ್ತಕ ಬಿಡುಗಡೆ ಮಾಡಿದರು. ಇದೇ ವೇಳೆ ಸಾಹಿತಿ ಸತೀಶ ಹೆಗಡೆ, ಮುಖ್ಯಮಂತ್ರಿ ಪದಕ ಪಡೆದ ಅರಣ್ಯ ಇಲಾಖೆ ನೌಕರ ವಿ.ಟಿ.ನಾಯ್ಕ, ಯಕ್ಷಗಾನದ ಯುವ ಪ್ರತಿಭೆ ತುಳಸಿ ಹೆಗಡೆ ಅವರನ್ನು ಸನ್ಮಾನಿಸಲಾಯಿತು.</p>.<p>ಮನುವಿಕಾಸದ ಗಣಪತಿ ಭಟ್, ಎಂಇಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ಪತ್ರಕರ್ತೆ ಶೈಲಜಾ ಗೋರ್ನಮನೆ, ಪಂಚಾಯಿತಿ ಅಧ್ಯಕ್ಷ ಪ್ರಕಾಶ ನಾಯ್ಕ, ಪ್ರಮುಖರಾದ ಜಿ.ವಿ.ಕಾನಗೋಡ, ರಾಜಾರಾಮ ಭಟ್, ಡಿ.ವಿ.ಹೆಗಡೆ, ಗೀತಾ ಪೂಜಾರಿ, ಸಂಘದ ಕಾರ್ಯದರ್ಶಿ ವಿಮಲಾ ಹೆಗಡೆ ಇದ್ದರು. </p>.<p>ಮಂಡಳಿ ಅಧ್ಯಕ್ಷೆ ಜಲಜಾಕ್ಷಿ ಹೆಗಡೆ ಆಲ್ಮನೆ ಅಧ್ಯಕ್ಷತೆ ವಹಿಸಿದ್ದರು. ಗೀತಾ ಪೂಜಾರಿ, ಸುವರ್ಣಾ ಕಾನಗೋಡ, ವಿಮಲಾ ಹೆಗಡೆ, ಶೋಭಾ ಮಶೀಗದ್ದೆ, ಪ್ರತಿಮಾ ಹೆಗಡೆ, ಶೋಭಾ ಹೆಗಡೆ, ರವೀಂದ್ರ ಸಹಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>