<p><strong>ಮುಂಡಗೋಡ</strong>: ‘ಟಿಬೆಟ್ನ ಪರಂಪರೆಯನ್ನು ಚೀನಾ ಹಾಳು ಮಾಡಲು ಪ್ರಯತ್ನಿಸಿತು. ಆದರೆ, ಭಾರತದಲ್ಲಿ ಬೌದ್ಧ ಅಧ್ಯಯನವನ್ನು ನಿರಂತರವಾಗಿ ಮಾಡುತ್ತ, ಟಿಬೆಟ್ ಪರಂಪರೆಯನ್ನು ಜೀವಂತವಾಗಿಡಲು ಸಾಧ್ಯವಾಗಿದೆ’ ಎಂದು ಟಿಬೆಟಿಯನ್ ಧಾರ್ಮಿಕ ನಾಯಕ 14ನೇ ದಲೈ ಲಾಮಾ ಹೇಳಿದರು.</p>.<p>ಇಲ್ಲಿನ ಟಿಬೆಟ್ ಕ್ಯಾಂಪ್ಗೆ ಶುಕ್ರವಾರ ಆಗಮಿಸಿ ಬೌದ್ಧ ಮಂದಿರದ ಸಭಾಂಗಣದಲ್ಲಿ ಬಿಕ್ಕುಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಳಂದಾ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು, ಬಿಕ್ಕುಗಳು ನಿರಂತರ ಅಧ್ಯಯನ ಮಾಡಬೇಕು’ ಎಂದರು.</p>.<p>‘ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡಲು ಬೌದ್ಧ ಅಧ್ಯಯನ ಅವಶ್ಯ. ಬೌದ್ಧ ತತ್ವ ಮತ್ತು ವಿಜ್ಞಾನ ನಡುವೆ ಸಂಬಂಧವಿದೆ. ಬೌದ್ಧ ಅಧ್ಯಯನದಲ್ಲಿ ಹಲವು ವಿಜ್ಞಾನಿಗಳು ಆಸಕ್ತಿ ತೋರುತ್ತಿರುವುದು ಇದಕ್ಕೆ ಸಾಕ್ಷಿ. ನಾನು 130 ವರ್ಷಗಳವರೆಗೆ ಬದುಕುತ್ತೇನೆ’ ಎಂದರು.</p>.<p>ಇದಕ್ಕೂ ಮುನ್ನ ಆರು ವರ್ಷಗಳ ಬಳಿಕ ಭೇಟಿ ನೀಡಿದ ದಲೈ ಲಾಮಾ ಅವರನ್ನು ಬೌದ್ಧ ಮುಖಂಡರು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಕೈಯಲ್ಲಿ ಬಿಳಿ ರುಮಾಲು (ಖತಾ) ಹಿಡಿದು ಬಿಕ್ಕುಗಳು ನಮಸ್ಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಡಗೋಡ</strong>: ‘ಟಿಬೆಟ್ನ ಪರಂಪರೆಯನ್ನು ಚೀನಾ ಹಾಳು ಮಾಡಲು ಪ್ರಯತ್ನಿಸಿತು. ಆದರೆ, ಭಾರತದಲ್ಲಿ ಬೌದ್ಧ ಅಧ್ಯಯನವನ್ನು ನಿರಂತರವಾಗಿ ಮಾಡುತ್ತ, ಟಿಬೆಟ್ ಪರಂಪರೆಯನ್ನು ಜೀವಂತವಾಗಿಡಲು ಸಾಧ್ಯವಾಗಿದೆ’ ಎಂದು ಟಿಬೆಟಿಯನ್ ಧಾರ್ಮಿಕ ನಾಯಕ 14ನೇ ದಲೈ ಲಾಮಾ ಹೇಳಿದರು.</p>.<p>ಇಲ್ಲಿನ ಟಿಬೆಟ್ ಕ್ಯಾಂಪ್ಗೆ ಶುಕ್ರವಾರ ಆಗಮಿಸಿ ಬೌದ್ಧ ಮಂದಿರದ ಸಭಾಂಗಣದಲ್ಲಿ ಬಿಕ್ಕುಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಳಂದಾ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು, ಬಿಕ್ಕುಗಳು ನಿರಂತರ ಅಧ್ಯಯನ ಮಾಡಬೇಕು’ ಎಂದರು.</p>.<p>‘ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡಲು ಬೌದ್ಧ ಅಧ್ಯಯನ ಅವಶ್ಯ. ಬೌದ್ಧ ತತ್ವ ಮತ್ತು ವಿಜ್ಞಾನ ನಡುವೆ ಸಂಬಂಧವಿದೆ. ಬೌದ್ಧ ಅಧ್ಯಯನದಲ್ಲಿ ಹಲವು ವಿಜ್ಞಾನಿಗಳು ಆಸಕ್ತಿ ತೋರುತ್ತಿರುವುದು ಇದಕ್ಕೆ ಸಾಕ್ಷಿ. ನಾನು 130 ವರ್ಷಗಳವರೆಗೆ ಬದುಕುತ್ತೇನೆ’ ಎಂದರು.</p>.<p>ಇದಕ್ಕೂ ಮುನ್ನ ಆರು ವರ್ಷಗಳ ಬಳಿಕ ಭೇಟಿ ನೀಡಿದ ದಲೈ ಲಾಮಾ ಅವರನ್ನು ಬೌದ್ಧ ಮುಖಂಡರು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಕೈಯಲ್ಲಿ ಬಿಳಿ ರುಮಾಲು (ಖತಾ) ಹಿಡಿದು ಬಿಕ್ಕುಗಳು ನಮಸ್ಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>