<p><strong>ಹೊಸಪೇಟೆ (ವಿಜಯನಗರ):</strong> ಇಲ್ಲಿನ ರೈಲು ನಿಲ್ದಾಣ ಬಳಿಯ ತುಂಗಭದ್ರಾ ಜಲಾಶಯದ ಕೆಳಮಟ್ಟದ ಕಾಲುವೆಯಲ್ಲಿ (ಎಲ್ಎಲ್ಸಿ) ನೀರಿನಲ್ಲಿ ಮುಳುಗುತ್ತಿದ್ದ ಯುವಕನನ್ನು ಶಿಕ್ಷಕ ಮಧುಸೂದನ್ ಬುಧವಾರ ರಕ್ಷಿಸಿದ್ದಾರೆ.</p>.<p>ಕೊಪ್ಪಳ ಜಿಲ್ಲೆ ಕುಷ್ಟಗಿಯ ಯಮನೂರಪ್ಪ (22) ಬದುಕುಳಿದ ಯುವಕ. ಜೀವನದಲ್ಲಿ ಜಿಗುಪ್ಸೆಗೊಂಡ ಯಮನೂರಪ್ಪ ಆತ್ಮಹತ್ಯೆ ಮಾಡಿಕೊಳ್ಳಲು ತುಂಗಭದ್ರಾ ಕಾಲುವೆಗೆ ಜಿಗಿದಿದ್ದಾನೆ. ಈ ವೇಳೆ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ಆಶ್ರಯ ಕಾಲೊನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಧುಸೂದನ್ ಅವರು, ಅದನ್ನು ಗಮನಿಸಿ ಕಾಲುವೆಗೆ ಇಳಿದು ಯುವಕನನ್ನು ರಕ್ಷಿಸಿ ಮೇಲೆ ಕರೆ ತಂದಿದ್ದಾರೆ.</p>.<p>ಬಳಿಕ ಯುವಕನನ್ನು ಗ್ರಾಮೀಣ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಮೇಟಿ ಅವರು, ಯಮನೂರಪ್ಪ ಅವರ ಸಂಬಂಧಿಕರನ್ನು ಠಾಣೆಗೆ ಕರೆಸಿ, ಅವರಿಗೆ ಒಪ್ಪಿಸಿದ್ದಾರೆ.</p>.<p>‘ಯುವಕ ಕಾಲುವೆಗೆ ಜಿಗಿದಾಗ ಚಾಲಕರಿಬ್ಬರು ಅವರ ವಾಹನಗಳನ್ನು ತೊಳೆಯುತ್ತಿದ್ದರು. ಅವರಿಬ್ಬರಿಗೆ ಈಜು ಗೊತ್ತಿರಲಿಲ್ಲ. ಬೇರೆಯವರ ಸಹಾಯಕ್ಕಾಗಿ ಕಿರುಚಾಡುತ್ತಿದ್ದರು. ಅಲ್ಲಿಂದಲೇ ಹಾದು ಹೋಗುತ್ತಿದ್ದ ನಾನು ತಕ್ಷಣವೇ ಕಾಲುವೆಗೆ ಇಳಿದು ಯಮನೂರಪ್ಪನನ್ನು ರಕ್ಷಿಸಿ ಮೇಲೆ ಕರೆತಂದೆ’ ಎಂದು ಮಧುಸೂದನ್ ತಿಳಿಸಿದ್ದಾರೆ.</p>.<p>‘ಯಮನೂರಪ್ಪ ಬೆಳಿಗ್ಗೆ ರೈಲಿನಡಿ ಪ್ರಾಣ ಕೊಡಲು ನಿರ್ಧರಿಸಿದ್ದ. ಆದರೆ, ಸುಮಾರು ಗಂಟೆಗಳ ಕಾಲ ಯಾವುದೇ ರೈಲುಗಳು ಬರಲಿಲ್ಲವಂತೆ. ಅದಕ್ಕಾಗಿ ಕಾಲುವೆಗೆ ಜಿಗಿದು ಪ್ರಾಣ ತ್ಯಜಿಸಲು ಮುಂದಾಗಿದ್ದ ಎಂಬ ಸಂಗತಿಯನ್ನು ಸ್ವತಃ ಆತನೇ ತಿಳಿಸಿದ್ದಾನೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ):</strong> ಇಲ್ಲಿನ ರೈಲು ನಿಲ್ದಾಣ ಬಳಿಯ ತುಂಗಭದ್ರಾ ಜಲಾಶಯದ ಕೆಳಮಟ್ಟದ ಕಾಲುವೆಯಲ್ಲಿ (ಎಲ್ಎಲ್ಸಿ) ನೀರಿನಲ್ಲಿ ಮುಳುಗುತ್ತಿದ್ದ ಯುವಕನನ್ನು ಶಿಕ್ಷಕ ಮಧುಸೂದನ್ ಬುಧವಾರ ರಕ್ಷಿಸಿದ್ದಾರೆ.</p>.<p>ಕೊಪ್ಪಳ ಜಿಲ್ಲೆ ಕುಷ್ಟಗಿಯ ಯಮನೂರಪ್ಪ (22) ಬದುಕುಳಿದ ಯುವಕ. ಜೀವನದಲ್ಲಿ ಜಿಗುಪ್ಸೆಗೊಂಡ ಯಮನೂರಪ್ಪ ಆತ್ಮಹತ್ಯೆ ಮಾಡಿಕೊಳ್ಳಲು ತುಂಗಭದ್ರಾ ಕಾಲುವೆಗೆ ಜಿಗಿದಿದ್ದಾನೆ. ಈ ವೇಳೆ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ಆಶ್ರಯ ಕಾಲೊನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಧುಸೂದನ್ ಅವರು, ಅದನ್ನು ಗಮನಿಸಿ ಕಾಲುವೆಗೆ ಇಳಿದು ಯುವಕನನ್ನು ರಕ್ಷಿಸಿ ಮೇಲೆ ಕರೆ ತಂದಿದ್ದಾರೆ.</p>.<p>ಬಳಿಕ ಯುವಕನನ್ನು ಗ್ರಾಮೀಣ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಮೇಟಿ ಅವರು, ಯಮನೂರಪ್ಪ ಅವರ ಸಂಬಂಧಿಕರನ್ನು ಠಾಣೆಗೆ ಕರೆಸಿ, ಅವರಿಗೆ ಒಪ್ಪಿಸಿದ್ದಾರೆ.</p>.<p>‘ಯುವಕ ಕಾಲುವೆಗೆ ಜಿಗಿದಾಗ ಚಾಲಕರಿಬ್ಬರು ಅವರ ವಾಹನಗಳನ್ನು ತೊಳೆಯುತ್ತಿದ್ದರು. ಅವರಿಬ್ಬರಿಗೆ ಈಜು ಗೊತ್ತಿರಲಿಲ್ಲ. ಬೇರೆಯವರ ಸಹಾಯಕ್ಕಾಗಿ ಕಿರುಚಾಡುತ್ತಿದ್ದರು. ಅಲ್ಲಿಂದಲೇ ಹಾದು ಹೋಗುತ್ತಿದ್ದ ನಾನು ತಕ್ಷಣವೇ ಕಾಲುವೆಗೆ ಇಳಿದು ಯಮನೂರಪ್ಪನನ್ನು ರಕ್ಷಿಸಿ ಮೇಲೆ ಕರೆತಂದೆ’ ಎಂದು ಮಧುಸೂದನ್ ತಿಳಿಸಿದ್ದಾರೆ.</p>.<p>‘ಯಮನೂರಪ್ಪ ಬೆಳಿಗ್ಗೆ ರೈಲಿನಡಿ ಪ್ರಾಣ ಕೊಡಲು ನಿರ್ಧರಿಸಿದ್ದ. ಆದರೆ, ಸುಮಾರು ಗಂಟೆಗಳ ಕಾಲ ಯಾವುದೇ ರೈಲುಗಳು ಬರಲಿಲ್ಲವಂತೆ. ಅದಕ್ಕಾಗಿ ಕಾಲುವೆಗೆ ಜಿಗಿದು ಪ್ರಾಣ ತ್ಯಜಿಸಲು ಮುಂದಾಗಿದ್ದ ಎಂಬ ಸಂಗತಿಯನ್ನು ಸ್ವತಃ ಆತನೇ ತಿಳಿಸಿದ್ದಾನೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>