ಕೊಪ್ಪಳ ಜಿಲ್ಲೆ ಕುಷ್ಟಗಿಯ ಯಮನೂರಪ್ಪ (22) ಬದುಕುಳಿದ ಯುವಕ. ಜೀವನದಲ್ಲಿ ಜಿಗುಪ್ಸೆಗೊಂಡ ಯಮನೂರಪ್ಪ ಆತ್ಮಹತ್ಯೆ ಮಾಡಿಕೊಳ್ಳಲು ತುಂಗಭದ್ರಾ ಕಾಲುವೆಗೆ ಜಿಗಿದಿದ್ದಾನೆ. ಈ ವೇಳೆ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ಆಶ್ರಯ ಕಾಲೊನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಧುಸೂದನ್ ಅವರು, ಅದನ್ನು ಗಮನಿಸಿ ಕಾಲುವೆಗೆ ಇಳಿದು ಯುವಕನನ್ನು ರಕ್ಷಿಸಿ ಮೇಲೆ ಕರೆ ತಂದಿದ್ದಾರೆ.