<p><strong>ಹೊಸಪೇಟೆ (ವಿಜಯನಗರ):</strong> ‘ಜೈಲಿನ ಹಕ್ಕಿಗಳಾಗಿರುವವರು ಅಲ್ಲಿ ಸಿಗುವಂತಹ ಉಪಯುಕ್ತ ಸಮಯವನ್ನು ಓದಿಗೆ ಮೀಸಲಿಡಬೇಕು. ಸಾಕ್ಷರರಾಗಿ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಬಹುದು’ ಎಂದು ಹೊಸಪೇಟೆಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಪದ್ಮಪ್ರಸಾದ್ ಸಲಹೆ ಮಾಡಿದರು.</p>.<p>ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ, ಹೊಸಪೇಟೆ ತಾಲ್ಲೂಕು ಉಪಕಾರಾಗೃಹ ಹಾಗೂ ಹೊಸಪೇಟೆ ತಾಲ್ಲೂಕು ಲೋಕ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ಕೈದಿಗಳಿಗೆ ಹಮ್ಮಿಕೊಂಡಿದ್ದ ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಯಾವುದೋ ಒಂದು ಕಾರಣದಿಂದ ತಮ್ಮ ಗಮನಕ್ಕೆ ತಿಳಿದೋ ತಿಳಿಯದೇ ಜೈಲು ಹಕ್ಕಿಗಳಾಗಿರುತ್ತೀರಿ. ಆದರೆ, ಜೈಲು ಸೇರಿದ ನಂತರ ಅಲ್ಲಿ ಪುಸ್ತಕಗಳನ್ನು ಓದಬೇಕು. ಸಾಕ್ಷರರಾಗಬೇಕು. ಜೈಲು ಸೇರಿದಾಗ ಅನೇಕರು ಪುಸ್ತಕಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆ’ ಎಂದರು.</p>.<p>ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಸುನಂದಾ ಮಾತನಾಡಿ, ‘ಶಿಕ್ಷಣ ಮನುಷ್ಯನನ್ನು ಬದಲಾವಣೆಯತ್ತ ಕೊಂಡೊಯ್ಯುತ್ತದೆ. ತಾವೆಲ್ಲರೂ ಸಾಕ್ಷರರಾಗುವ ಮೂಲಕ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಮತ್ತು ನೆಮ್ಮದಿಯಿಂದ ಜೀವನ ನಡೆಸಬೇಕು’ ಎಂದು ಹೇಳಿದರು.</p>.<p>ಕಾರಾಗೃಹದ ಸೂಪರಿಟೆಂಡೆಂಟ್ ಎಂ.ಹೆಚ್.ಕಲಾದಗಿ, ‘ಜೈಲಿನಲ್ಲಿರುವ ಬಂಧಿಗಳ ಸಾಕ್ಷರತಾ ಪ್ರಮಾಣ ಆಧರಿಸಿ ಸರ್ಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಎಲ್ಲರೂ ಅದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.</p>.<p>ಲೋಕ ಶಿಕ್ಷಣ ಸಂಯೋಜಕರಾದ ಮಧುಸೂದನ್ ಗುರುರಾಜ್, ಸಹಾಯಕ ಜೈಲರ್ ಎಸ್.ಎಚ್.ಕಾಳಿ, ಜಯಶ್ರೀ ಪೋಳ್, ಸಂತೋಷ ಸಂತಾಗೋಳ, ಸಹಶಿಕ್ಷಕ ಪ್ರಕಾಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ):</strong> ‘ಜೈಲಿನ ಹಕ್ಕಿಗಳಾಗಿರುವವರು ಅಲ್ಲಿ ಸಿಗುವಂತಹ ಉಪಯುಕ್ತ ಸಮಯವನ್ನು ಓದಿಗೆ ಮೀಸಲಿಡಬೇಕು. ಸಾಕ್ಷರರಾಗಿ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಬಹುದು’ ಎಂದು ಹೊಸಪೇಟೆಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಪದ್ಮಪ್ರಸಾದ್ ಸಲಹೆ ಮಾಡಿದರು.</p>.<p>ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ, ಹೊಸಪೇಟೆ ತಾಲ್ಲೂಕು ಉಪಕಾರಾಗೃಹ ಹಾಗೂ ಹೊಸಪೇಟೆ ತಾಲ್ಲೂಕು ಲೋಕ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ಕೈದಿಗಳಿಗೆ ಹಮ್ಮಿಕೊಂಡಿದ್ದ ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಯಾವುದೋ ಒಂದು ಕಾರಣದಿಂದ ತಮ್ಮ ಗಮನಕ್ಕೆ ತಿಳಿದೋ ತಿಳಿಯದೇ ಜೈಲು ಹಕ್ಕಿಗಳಾಗಿರುತ್ತೀರಿ. ಆದರೆ, ಜೈಲು ಸೇರಿದ ನಂತರ ಅಲ್ಲಿ ಪುಸ್ತಕಗಳನ್ನು ಓದಬೇಕು. ಸಾಕ್ಷರರಾಗಬೇಕು. ಜೈಲು ಸೇರಿದಾಗ ಅನೇಕರು ಪುಸ್ತಕಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆ’ ಎಂದರು.</p>.<p>ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಸುನಂದಾ ಮಾತನಾಡಿ, ‘ಶಿಕ್ಷಣ ಮನುಷ್ಯನನ್ನು ಬದಲಾವಣೆಯತ್ತ ಕೊಂಡೊಯ್ಯುತ್ತದೆ. ತಾವೆಲ್ಲರೂ ಸಾಕ್ಷರರಾಗುವ ಮೂಲಕ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಮತ್ತು ನೆಮ್ಮದಿಯಿಂದ ಜೀವನ ನಡೆಸಬೇಕು’ ಎಂದು ಹೇಳಿದರು.</p>.<p>ಕಾರಾಗೃಹದ ಸೂಪರಿಟೆಂಡೆಂಟ್ ಎಂ.ಹೆಚ್.ಕಲಾದಗಿ, ‘ಜೈಲಿನಲ್ಲಿರುವ ಬಂಧಿಗಳ ಸಾಕ್ಷರತಾ ಪ್ರಮಾಣ ಆಧರಿಸಿ ಸರ್ಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಎಲ್ಲರೂ ಅದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.</p>.<p>ಲೋಕ ಶಿಕ್ಷಣ ಸಂಯೋಜಕರಾದ ಮಧುಸೂದನ್ ಗುರುರಾಜ್, ಸಹಾಯಕ ಜೈಲರ್ ಎಸ್.ಎಚ್.ಕಾಳಿ, ಜಯಶ್ರೀ ಪೋಳ್, ಸಂತೋಷ ಸಂತಾಗೋಳ, ಸಹಶಿಕ್ಷಕ ಪ್ರಕಾಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>