<p><strong>ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ)</strong>: ಇಲ್ಲಿನ 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗುವ ಒಳರೋಗಿಗಳಿಗೆ ನಿತ್ಯ ಸಂಜೆ ಉಚಿತ ಉಪಾಹಾರ ನೀಡುವ ಮೂಲಕ ವಿಶೇಷ ಸೇವೆ ಮಾಡುತ್ತಿರುವ ಪಟ್ಟಣದ ದರ್ಶನ್ ಹೋಟೆಲ್ ಮಾಲೀಕ ಎಸ್.ಎಂ.ಗಂಗಾಧರ ಮತ್ತು ಕುಟುಂಬವು, ರೋಗಿಗಳ ಹೊಟ್ಟೆ ತುಂಬಿಸುವುದರಲ್ಲೇ ಸಂತೃಪ್ತಿ ಕಾಣುತ್ತಿದೆ.</p>.<p>ಪ್ರತಿದಿನ ಅಂದಾಜು 75ರಿಂದ 80 ರೋಗಿಗಳಿಗೆ, ಬಾಣಂತಿಯರಿಗೆ ಉಚಿತವಾಗಿಯೇ ಇಡ್ಲಿ, ಉಪ್ಪಿಟ್ಟು, ಗಂಜಿ ನೀಡಲಾಗುತ್ತಿದೆ. ಈ ಕಾರ್ಯಕ್ಕಾಗಿ ಪ್ರತಿ ತಿಂಗಳು ₹60 ಸಾವಿರದಿಂದ ₹75 ಸಾವಿರ ಖರ್ಚು ಮಾಡುತ್ತಿದ್ದಾರೆ. ಈ ವಿಶಿಷ್ಟ ಸೇವೆ ಇದೀಗ 100 ದಿನಗಳ ಗಡಿ ದಾಟಿದೆ.</p>.<p>ಹೋಟೆಲ್ ಸಿಬ್ಬಂದಿ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದ ರೋಗಿಗಳಿಗೆ ಟೋಕನ್ ನೀಡಿ ಬರುತ್ತಾರೆ. ಸಂಜೆ ಬರುವ ರೋಗಿಗಳ ಸಂಬಂಧಿಕರಿಗೆ ಬಿಸಿ ಬಿಸಿಯಾದ ಉಪಾಹಾರ, ನೀರು ನೀಡಲಾಗುತ್ತಿದೆ.</p>.<p>ಗಂಗಾಧರ ಅವರೊಂದಿಗೆ ಅವರ ಪತ್ನಿ ಅಂಬುಜಾ ಹಾಗೂ ಸ್ನೇಹಿತರಾದ ಸಿ.ಎಂ.ಶ್ರೀನಿವಾಸ, ಸರ್ದಾರ ಯಮನೂರಪ್ಪ, ಮಡಿವಾಳರ ಅಶೋಕ, ಲಕ್ಷ್ಮಿಪತಿ (ಪುಟ್ಟು) ಆಟೋ ವೀರೇಶ, ಪರಶುರಾಮ ಕೈ ಜೋಡಿಸಿದ್ದಾರೆ.</p>.<p>‘ಹೋಟೆಲ್ನಲ್ಲಿ ಸಂಜೆ ಸಮಯದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಸಹಾಯವನ್ನು ಗಂಗಾಧರ ನೆನೆಯುತ್ತಾರೆ. ಇಲ್ಲಿ ಉಪಾಹಾರ ಪಡೆದು ಆಸ್ಪತ್ರೆಯಲ್ಲಿ ಗುಣಮುಖರಾಗಿ ತೆರಳುವ ರೋಗಿಯ ಕಡೆಯ ಪ್ರತಿಯೊಬ್ಬರೂ ಇವರ ಸೇವೆಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಈ ಕಾರ್ಯ ಸ್ತುತ್ಯರ್ಯ, ಇಂತಹ ಸಮಾಜಮುಖಿ ಕೆಲಸಗಳಿಗೆ ಯುವಕರು ಮುಂದೆ ಬರಬೇಕು ಎನ್ನುತ್ತಾರೆ’ ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರವೀಣ್ಕುಮಾರ್.</p>.<div><blockquote>ರೋಗಿಗಳ ಕುಟುಂಬದವರು ಉಪಾಹಾರಕ್ಕಾಗಿ ಪಟ್ಟಣದಲ್ಲಿ ಅಲೆದಾಡುವುದು ಗಮನಕ್ಕೆ ಬಂತು. ಹೀಗಾಗಿ ಬರುವ ಲಾಭದಲ್ಲಿ ಒಂದಿಷ್ಟು ರೋಗಿಗಳಾಗಿ ಮೀಸಲಿಡಲು ನಿರ್ಧರಿಸಿದೆ.</blockquote><span class="attribution">– ಎಸ್.ಎಂ.ಗಂಗಾಧರ, ಹೋಟೆಲ್ ಮಾಲೀಕ</span></div>.<div><blockquote>ಈ ಸೇವೆಗೆ ಎಲ್ಲ ಕಡೆಯಿಂದಲೂ ಶ್ಲಾಘನೆ ವ್ಯಕ್ತವಾಗಿದೆ. ತಾವೂ ಇದರಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಬಹುತೇಕರು ಕೇಳುತ್ತಿದ್ದಾರೆ. ವೆಚ್ಚ ಭರಿಸುವುದಾಗಿ ಹೇಳುತ್ತಿದ್ದಾರೆ.</blockquote><span class="attribution">– ಸಿ.ಎಂ.ಶ್ರೀನಿವಾಸ, ಸೇವೆಯಲ್ಲಿ ಕೈ ಜೋಡಿಸಿದವರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ)</strong>: ಇಲ್ಲಿನ 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗುವ ಒಳರೋಗಿಗಳಿಗೆ ನಿತ್ಯ ಸಂಜೆ ಉಚಿತ ಉಪಾಹಾರ ನೀಡುವ ಮೂಲಕ ವಿಶೇಷ ಸೇವೆ ಮಾಡುತ್ತಿರುವ ಪಟ್ಟಣದ ದರ್ಶನ್ ಹೋಟೆಲ್ ಮಾಲೀಕ ಎಸ್.ಎಂ.ಗಂಗಾಧರ ಮತ್ತು ಕುಟುಂಬವು, ರೋಗಿಗಳ ಹೊಟ್ಟೆ ತುಂಬಿಸುವುದರಲ್ಲೇ ಸಂತೃಪ್ತಿ ಕಾಣುತ್ತಿದೆ.</p>.<p>ಪ್ರತಿದಿನ ಅಂದಾಜು 75ರಿಂದ 80 ರೋಗಿಗಳಿಗೆ, ಬಾಣಂತಿಯರಿಗೆ ಉಚಿತವಾಗಿಯೇ ಇಡ್ಲಿ, ಉಪ್ಪಿಟ್ಟು, ಗಂಜಿ ನೀಡಲಾಗುತ್ತಿದೆ. ಈ ಕಾರ್ಯಕ್ಕಾಗಿ ಪ್ರತಿ ತಿಂಗಳು ₹60 ಸಾವಿರದಿಂದ ₹75 ಸಾವಿರ ಖರ್ಚು ಮಾಡುತ್ತಿದ್ದಾರೆ. ಈ ವಿಶಿಷ್ಟ ಸೇವೆ ಇದೀಗ 100 ದಿನಗಳ ಗಡಿ ದಾಟಿದೆ.</p>.<p>ಹೋಟೆಲ್ ಸಿಬ್ಬಂದಿ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದ ರೋಗಿಗಳಿಗೆ ಟೋಕನ್ ನೀಡಿ ಬರುತ್ತಾರೆ. ಸಂಜೆ ಬರುವ ರೋಗಿಗಳ ಸಂಬಂಧಿಕರಿಗೆ ಬಿಸಿ ಬಿಸಿಯಾದ ಉಪಾಹಾರ, ನೀರು ನೀಡಲಾಗುತ್ತಿದೆ.</p>.<p>ಗಂಗಾಧರ ಅವರೊಂದಿಗೆ ಅವರ ಪತ್ನಿ ಅಂಬುಜಾ ಹಾಗೂ ಸ್ನೇಹಿತರಾದ ಸಿ.ಎಂ.ಶ್ರೀನಿವಾಸ, ಸರ್ದಾರ ಯಮನೂರಪ್ಪ, ಮಡಿವಾಳರ ಅಶೋಕ, ಲಕ್ಷ್ಮಿಪತಿ (ಪುಟ್ಟು) ಆಟೋ ವೀರೇಶ, ಪರಶುರಾಮ ಕೈ ಜೋಡಿಸಿದ್ದಾರೆ.</p>.<p>‘ಹೋಟೆಲ್ನಲ್ಲಿ ಸಂಜೆ ಸಮಯದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಸಹಾಯವನ್ನು ಗಂಗಾಧರ ನೆನೆಯುತ್ತಾರೆ. ಇಲ್ಲಿ ಉಪಾಹಾರ ಪಡೆದು ಆಸ್ಪತ್ರೆಯಲ್ಲಿ ಗುಣಮುಖರಾಗಿ ತೆರಳುವ ರೋಗಿಯ ಕಡೆಯ ಪ್ರತಿಯೊಬ್ಬರೂ ಇವರ ಸೇವೆಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಈ ಕಾರ್ಯ ಸ್ತುತ್ಯರ್ಯ, ಇಂತಹ ಸಮಾಜಮುಖಿ ಕೆಲಸಗಳಿಗೆ ಯುವಕರು ಮುಂದೆ ಬರಬೇಕು ಎನ್ನುತ್ತಾರೆ’ ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರವೀಣ್ಕುಮಾರ್.</p>.<div><blockquote>ರೋಗಿಗಳ ಕುಟುಂಬದವರು ಉಪಾಹಾರಕ್ಕಾಗಿ ಪಟ್ಟಣದಲ್ಲಿ ಅಲೆದಾಡುವುದು ಗಮನಕ್ಕೆ ಬಂತು. ಹೀಗಾಗಿ ಬರುವ ಲಾಭದಲ್ಲಿ ಒಂದಿಷ್ಟು ರೋಗಿಗಳಾಗಿ ಮೀಸಲಿಡಲು ನಿರ್ಧರಿಸಿದೆ.</blockquote><span class="attribution">– ಎಸ್.ಎಂ.ಗಂಗಾಧರ, ಹೋಟೆಲ್ ಮಾಲೀಕ</span></div>.<div><blockquote>ಈ ಸೇವೆಗೆ ಎಲ್ಲ ಕಡೆಯಿಂದಲೂ ಶ್ಲಾಘನೆ ವ್ಯಕ್ತವಾಗಿದೆ. ತಾವೂ ಇದರಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಬಹುತೇಕರು ಕೇಳುತ್ತಿದ್ದಾರೆ. ವೆಚ್ಚ ಭರಿಸುವುದಾಗಿ ಹೇಳುತ್ತಿದ್ದಾರೆ.</blockquote><span class="attribution">– ಸಿ.ಎಂ.ಶ್ರೀನಿವಾಸ, ಸೇವೆಯಲ್ಲಿ ಕೈ ಜೋಡಿಸಿದವರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>