ಸೋಮವಾರ, 29 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ವಿಜಯನಗರ | ಜನರ ರಕ್ಷಣೆಯ ಭರವಸೆಯೇ ಕೋರ್ಟ್: ಆರ್.ನಟರಾಜ್

ವಿಜಯನಗರ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಉದ್ಘಾಟನೆ
Published : 29 ಸೆಪ್ಟೆಂಬರ್ 2025, 7:20 IST
Last Updated : 29 ಸೆಪ್ಟೆಂಬರ್ 2025, 7:20 IST
ಫಾಲೋ ಮಾಡಿ
Comments
ಶ್ರಮಿಸಿದ ಶಾಸಕರ ಕಡೆಗಣನೆ?
ಉದ್ಘಾಟನಾ ಕಾರ್ಯಕ್ರಮದಿಂದ ಶಾಸಕ ಎಚ್‌.ಆರ್.ಗವಿಯಪ್ಪ ದೂರವೇ ಉಳಿದುದು ಅಚ್ಚರಿಗೆ ಕಾರಣವಾಯಿತು. ಜಿಲ್ಲಾ ನ್ಯಾಯಾಲಯ ಸ್ಥಾಪನೆಗೆ ಮೂಲ ಕಾರಣವೇ ಅವರಾಗಿದ್ದರೂ ಶಿಷ್ಟಾಚಾರದ ನೆಪದಲ್ಲಿ ಅವರನ್ನು ದೂರ ಇಡಲಾಯಿತೇ ಎಂಬ ಮಾತು ವಕೀಲರ ವಲಯದಿಂದಲೂ ಕೇಳಿಸಿತು. ‘ಹೈಕೋರ್ಟ್ ಸೂಚನೆಯಂತೆಯೇ ಆಹ್ವಾನ ಪತ್ರಿಕೆ ಸಿದ್ಧಪಡಿಸಲಾಗಿದೆ. ಅವರ ಸೂಚನೆಯಂತೆಯೇ ಉದ್ಘಾಟನಾ ನಾಮಫಲಕದಲ್ಲಿ ಇರಬೇಕಾದವರ ಹೆಸರು ಹಾಕಲಾಗಿದೆ’ ಎಂದು ವಕೀಲರ ಸಂಘದವರು ಹೇಳುತ್ತಿದ್ದಾರೆ. ಸಚಿವರು ಇದ್ದರೆ ಪರವಾಗಿಲ್ಲ ಸ್ಥಳೀಯ ಶಾಸಕರು ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಆಹ್ವಾನ ಪತ್ರದಲ್ಲಿ ಬೇಡವೇ ಬೇಡ ಎಂದು ಹೈಕೋರ್ಟ್‌ ಶಿಷ್ಟಾಚಾರದಲ್ಲಿ ಇದೆಯೇ ಎಂಬ ಪ್ರಶ್ನೆ ಮಾರ್ದನಿಸಿದೆ.
ಕೋರ್ಟ್‌ ಸ್ಥಾಪನೆಯಿಂದ ಖುಷಿಯಾಗಿದೆ’
‘ನ್ಯಾಯಾಂಗ ಮತ್ತು ಶಾಸಕಾಂಗಗಳು ಆಡಳಿತ ವ್ಯವಸ್ಥೆಯ ಕಣ್ಣುಗಳಿದ್ದಂತೆ. ನನ್ನ ಕ್ಷೇತ್ರದ ಜನತೆಗಾಗಿ ಹಾಗೂ ಜಿಲ್ಲೆಯ ಸಮಸ್ತ ಜನತೆಗಾಗಿ ಜಿಲ್ಲಾ ನ್ಯಾಯಾಲಯವನ್ನು ತಂದ ಹೆಮ್ಮೆ ನನಗೆ ಇದೆ. ಯಾವ ಕೆಲಸ ಮಾಡಿದರೂ ಸ್ವಾರ್ಥ ಪ್ರಚಾರಕ್ಕಾಗಿ ಮಾಡಬಾರದು. ನನ್ನನ್ನು ನಿರ್ಲಕ್ಷಿಸಲಾಗಿದೆ ಎಂಬ ವಿಚಾರ ಇದ್ದರೂ ಜಿಲ್ಲಾ ನ್ಯಾಯಾಲಯ ಉದ್ಘಾಟನೆಯಿಂದ ನನಗೆ ಸಂತಸವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ನನ್ನ ಸಂಬಂಧ ಉತ್ತಮವಾಗಿದೆ. ಶಿಷ್ಟಾಚಾರ ವಿಚಾರ ಶಿಷ್ಟಾಚಾರ ಅಧಿಕಾರಿಗಳಿಗೇ ಕೇಳಬೇಕು’ ಎಂದು ಶಾಸಕ ಎಚ್.ಆರ್.ಗವಿಯಪ್ಪ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT