ತಾಲ್ಲೂಕಿನ ಮೈದೂರು ಗ್ರಾಮದಲ್ಲಿ ಶುಕ್ರವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ‘ಇಂಥ ಕಾಯ್ದೆಯಿಂದ ಮಾತ್ರ ಪಕ್ಷದಿಂದ ಪಕ್ಷಕ್ಕೆ ಜಿಗಿಯುವವರಿಗೆ ಕಡಿವಾಣ ಹಾಕಿದಂತಾಗುತ್ತದೆ. ಪಕ್ಷಾಂತರ ಮಾಡಿದವರಿಗೆ ಜನರು ಮತ ಹಾಕಬಾರದು. ಈ ಕಾಯ್ದೆ ಮಾಡುವ ಅಧಿಕಾರ ನನಗೆ ಇದ್ದಿದ್ದರೆ, ಹಿಂಜರಿಯುತ್ತಿರಲಿಲ್ಲ’ ಎಂದರು.