ಅದಕ್ಕೆ ಸಂದೀಪ್ ಸಿಂಗ್, ‘ನನ್ನಿಂದ ತಪ್ಪಾಗಿದೆ. ಭವಿಷ್ಯದಲ್ಲಿ ಈ ರೀತಿ ಮಾಡಲಾರೆ. ನನ್ನನ್ನು ಸಮಾಜದವರು ಕ್ಷಮಿಸಬೇಕು’ ಎಂದು ಸಭೆಯಲ್ಲಿ ಹೇಳಿದರು ಎಂಬ ಸಂಗತಿಯನ್ನು ವಿಶ್ವನಾಥ್ ರಾವ್ ಕುಲಕರ್ಣಿ, ನಾಣಿಕೆರೆ ತಿಮ್ಮಯ್ಯ ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ. ಈ ಕುರಿತು ಸಂದೀಪ್ ಸಿಂಗ್ ಅವರನ್ನು ಸಂಪರ್ಕಿಸಿದಾಗ ಕರೆ ಸ್ವೀಕರಿಸಲಿಲ್ಲ.