<p><strong>ಹೊಸಪೇಟೆ (ವಿಜಯನಗರ):</strong> ತಾಲ್ಲೂಕಿನ ವಡ್ಡರಹಳ್ಳಿಯಲ್ಲಿ ಒಂದು ತಿಂಗಳಿನಿಂದ ಹೊಸಪೇಟೆ–ಬಳ್ಳಾರಿ ಬಸ್ಗಳನ್ನು ನಿಲುಗಡೆ ಮಾಡದ ಕಾರಣ ಸ್ಥಳೀಯ ನಿವಾಸಿಗಳು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.</p>.<p>‘ವಡ್ಡರಹಳ್ಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹೊಸ ಬೈಪಾಸ್ ರಸ್ತೆ ಆಗಿದೆ. ಆದರೆ, ಹೆದ್ದಾರಿಯಲ್ಲಿ ಬಸ್ಗಳನ್ನು ನಿಲುಗಡೆ ಮಾಡುತ್ತಿಲ್ಲ. ನಿಲುಗಡೆಗೆ ಅವಕಾಶ ಇದ್ದರೂ ನಿರ್ಲಕ್ಷ್ಯಿಸಲಾಗುತ್ತಿದೆ. ಇದರಿಂದಾಗಿ ಕಾಕುಬಾಳು, ತಾಳೂರು ಬಸ್ಗಳನ್ನಷ್ಟೇ ಊರಿನ ಜನ ಅವಲಂಬಿಸಬೇಕಾಗಿದೆ. ಈ ಬಸ್ಗಳೂ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ’ ಎಂದು ಸ್ಥಳೀಯ ಅಪ್ಪು ಸುಧಾಕರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ದಂಡ ಹಾಕಿ:</strong> ‘ವಡ್ಡರಹಳ್ಳಿಗೆ ಬಂದು ಹೋಗದ, ಅಲ್ಲಿ ನಿಲುಗಡೆ ಮಾಡದ ಬಸ್ಗಳಿಗೆ ದಂಡ ಹಾಕಿದರೆ ಮಾತ್ರ ಸಮರ್ಪಕ ಸೇವೆ ನೀಡಬಹುದು. ಈ ಹಿಂದೆ ಧರ್ಮಸಾಗರದಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ದಂಡ ಹಾಕಿದ ಬಳಿಕ ಎಲ್ಲಾ ಬಸ್ಗಳೂ ಧರ್ಮಸಾಗರದಲ್ಲಿ ನಿಲುಗಡೆ ಮಾಡುತ್ತಿವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ):</strong> ತಾಲ್ಲೂಕಿನ ವಡ್ಡರಹಳ್ಳಿಯಲ್ಲಿ ಒಂದು ತಿಂಗಳಿನಿಂದ ಹೊಸಪೇಟೆ–ಬಳ್ಳಾರಿ ಬಸ್ಗಳನ್ನು ನಿಲುಗಡೆ ಮಾಡದ ಕಾರಣ ಸ್ಥಳೀಯ ನಿವಾಸಿಗಳು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.</p>.<p>‘ವಡ್ಡರಹಳ್ಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹೊಸ ಬೈಪಾಸ್ ರಸ್ತೆ ಆಗಿದೆ. ಆದರೆ, ಹೆದ್ದಾರಿಯಲ್ಲಿ ಬಸ್ಗಳನ್ನು ನಿಲುಗಡೆ ಮಾಡುತ್ತಿಲ್ಲ. ನಿಲುಗಡೆಗೆ ಅವಕಾಶ ಇದ್ದರೂ ನಿರ್ಲಕ್ಷ್ಯಿಸಲಾಗುತ್ತಿದೆ. ಇದರಿಂದಾಗಿ ಕಾಕುಬಾಳು, ತಾಳೂರು ಬಸ್ಗಳನ್ನಷ್ಟೇ ಊರಿನ ಜನ ಅವಲಂಬಿಸಬೇಕಾಗಿದೆ. ಈ ಬಸ್ಗಳೂ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ’ ಎಂದು ಸ್ಥಳೀಯ ಅಪ್ಪು ಸುಧಾಕರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ದಂಡ ಹಾಕಿ:</strong> ‘ವಡ್ಡರಹಳ್ಳಿಗೆ ಬಂದು ಹೋಗದ, ಅಲ್ಲಿ ನಿಲುಗಡೆ ಮಾಡದ ಬಸ್ಗಳಿಗೆ ದಂಡ ಹಾಕಿದರೆ ಮಾತ್ರ ಸಮರ್ಪಕ ಸೇವೆ ನೀಡಬಹುದು. ಈ ಹಿಂದೆ ಧರ್ಮಸಾಗರದಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ದಂಡ ಹಾಕಿದ ಬಳಿಕ ಎಲ್ಲಾ ಬಸ್ಗಳೂ ಧರ್ಮಸಾಗರದಲ್ಲಿ ನಿಲುಗಡೆ ಮಾಡುತ್ತಿವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>