<p><strong>ಕೂಡ್ಲಿಗಿ: </strong>ತಾಲ್ಲೂಕಿನ ಅಪ್ಪೇನಹಳ್ಳಿ ತಾಂಡಾದಲ್ಲಿ ಬುಧವಾರ ರಾತ್ರಿ ಮನೆ ಮುಂದೆ ಕಟ್ಟಿದ್ದ ಟಗರುಗಳ ಮೇಲೆ ಮೂರು ಚಿರತೆ ದಾಳಿ ಮಾಡಿದ್ದರಿಂದ 9 ಟಗರು ಸಾವನ್ನಪ್ಪಿವೆ.<br /><br />ತಾಂಡಾದ ಜಾಣನಾಯ್ಕ್ ಎಂಬುವವರು ತಾವು ಸಾಕಿದ್ದ 9 ಟಗರುಗಳನ್ನು ಮನೆ ಮುಂದೆ ಕಟ್ಟಿದ್ದರು. ರಾತ್ರಿ 1 ಗಂಟೆ ಸುಮಾರಿಗೆ ಮೂರು ಚಿರತೆಗಳು ಏಕಕಾಲಕ್ಕೆ ಟಗರುಗಳ ಮೇಲೆ ದಾಳಿ ಮಾಡಿವೆ. ಈ ವೇಳೆ ಮನೆ ಮುಂದೆ ಮಲಗಿದ್ದ ಜಾಣನಾಯ್ಕ್, ಸಂಗೀತಾಬಾಯಿ ದಂಪತಿ ಚಿರತೆಗಳನ್ನು ಕಂಡು ಮನೆ ಒಳಗೆ ಓಡಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಮನೆ ಮುಂದೆ ಕಟ್ಟಿದ್ದ 9 ಟಗರುಗಳನ್ನು ಸಾಯಿಸಿ, ಅವುಗಳಲ್ಲಿ ಎರಡನ್ನು ಹೊತ್ತೊಕೊಂಡು ಕಾಡಿನತ್ತ ಓಡಿ ಹೋಗಿವೆ.<br /><br />ಒಂದು ಟಗರು ₹20 ಸಾವಿರ ಹಾಗೂ ಉಳಿದ ಎಂಟು ಟಗರುಗಳು ಸುಮಾರು ₹15 ಸಾವಿರ ಬೆಲೆ ಬಾಳುತ್ತಿದ್ದವು ಎಂದು ಅಂದಾಜಿಸಲಾಗಿದೆ. ವಿಷಯ ತಿಳಿದ ಗುಡೇಕೋಟೆ ವಲಯ ಅರಣ್ಯ ಅಧಿಕಾರಿ ಶ್ರೀಧರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.<br /><br />ಜಾಣ ನಾಯ್ಕ್ ಹಾಗೂ ಸಂಗೀತಾಬಾಯಿ ಪ್ರತಿ ವರ್ಷ ಕಬ್ಬು ಕಡಿಯಲು ವಲಸೆ ಹೋಗುತ್ತಿದ್ದರು. ಆದರೆ ಕೋವಿಡ್ನಿಂದ ಈ ವರ್ಷ ವಲಸೆ ಹೋಗುವುದು ಬೇಡ ಎಂದು ಹೇಳಿ ಟಗರು ಮರಿಗಳನ್ನು ಖರೀದಿ ಮಾಡಿ ಅವುಗಳನ್ನು ಸಾಕಿದ್ದರು. ಎಂದು ತಾಂಡಾದಲ್ಲಿಯೇ ಉಳಿದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೂಡ್ಲಿಗಿ: </strong>ತಾಲ್ಲೂಕಿನ ಅಪ್ಪೇನಹಳ್ಳಿ ತಾಂಡಾದಲ್ಲಿ ಬುಧವಾರ ರಾತ್ರಿ ಮನೆ ಮುಂದೆ ಕಟ್ಟಿದ್ದ ಟಗರುಗಳ ಮೇಲೆ ಮೂರು ಚಿರತೆ ದಾಳಿ ಮಾಡಿದ್ದರಿಂದ 9 ಟಗರು ಸಾವನ್ನಪ್ಪಿವೆ.<br /><br />ತಾಂಡಾದ ಜಾಣನಾಯ್ಕ್ ಎಂಬುವವರು ತಾವು ಸಾಕಿದ್ದ 9 ಟಗರುಗಳನ್ನು ಮನೆ ಮುಂದೆ ಕಟ್ಟಿದ್ದರು. ರಾತ್ರಿ 1 ಗಂಟೆ ಸುಮಾರಿಗೆ ಮೂರು ಚಿರತೆಗಳು ಏಕಕಾಲಕ್ಕೆ ಟಗರುಗಳ ಮೇಲೆ ದಾಳಿ ಮಾಡಿವೆ. ಈ ವೇಳೆ ಮನೆ ಮುಂದೆ ಮಲಗಿದ್ದ ಜಾಣನಾಯ್ಕ್, ಸಂಗೀತಾಬಾಯಿ ದಂಪತಿ ಚಿರತೆಗಳನ್ನು ಕಂಡು ಮನೆ ಒಳಗೆ ಓಡಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಮನೆ ಮುಂದೆ ಕಟ್ಟಿದ್ದ 9 ಟಗರುಗಳನ್ನು ಸಾಯಿಸಿ, ಅವುಗಳಲ್ಲಿ ಎರಡನ್ನು ಹೊತ್ತೊಕೊಂಡು ಕಾಡಿನತ್ತ ಓಡಿ ಹೋಗಿವೆ.<br /><br />ಒಂದು ಟಗರು ₹20 ಸಾವಿರ ಹಾಗೂ ಉಳಿದ ಎಂಟು ಟಗರುಗಳು ಸುಮಾರು ₹15 ಸಾವಿರ ಬೆಲೆ ಬಾಳುತ್ತಿದ್ದವು ಎಂದು ಅಂದಾಜಿಸಲಾಗಿದೆ. ವಿಷಯ ತಿಳಿದ ಗುಡೇಕೋಟೆ ವಲಯ ಅರಣ್ಯ ಅಧಿಕಾರಿ ಶ್ರೀಧರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.<br /><br />ಜಾಣ ನಾಯ್ಕ್ ಹಾಗೂ ಸಂಗೀತಾಬಾಯಿ ಪ್ರತಿ ವರ್ಷ ಕಬ್ಬು ಕಡಿಯಲು ವಲಸೆ ಹೋಗುತ್ತಿದ್ದರು. ಆದರೆ ಕೋವಿಡ್ನಿಂದ ಈ ವರ್ಷ ವಲಸೆ ಹೋಗುವುದು ಬೇಡ ಎಂದು ಹೇಳಿ ಟಗರು ಮರಿಗಳನ್ನು ಖರೀದಿ ಮಾಡಿ ಅವುಗಳನ್ನು ಸಾಕಿದ್ದರು. ಎಂದು ತಾಂಡಾದಲ್ಲಿಯೇ ಉಳಿದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>