ಯೋಜನೆ ನಿರ್ವಹಣೆ ಸಮಸ್ಯೆ ಕುರಿತು ಸದನದಲ್ಲಿ ಗಮನ ಸೆಳೆದಿರುವೆ. ಹಲವು ಬಾರಿ ಸರ್ಕಾರಕ್ಕೆ ಪತ್ರ ಬರೆದಿದ್ದರೂ ನಿರ್ವಹಣೆಗೆ ಬಿಡಿಗಾಸು ನೀಡಿಲ್ಲ. ರೈತರಿಗೆ ಭೂ ಪರಿಹಾರ ಕೊಟ್ಟಿಲ್ಲ. ಬೇರೆ ದಾರಿ ಕಾಣಿಸದೇ ಜನರನ್ನು ಸಂಘಟಿಸಿ ಹೋರಾಟಕ್ಕೆ ಇಳಿಯುವ ಯೋಚನೆ ಮಾಡಿರುವೆಕೃಷ್ಣನಾಯ್ಕ, ಶಾಸಕ ಹೂವಿನಹಡಗಲಿ
ಅನುದಾನ ಕೊರತೆಯಿಂದ ನಿರ್ವಹಣೆ ಸಮಸ್ಯೆಯಾಗಿದೆ. ಈ ಬಾರಿ ನರೇಗಾ ಅಡಿಯಲ್ಲಿ ಕೆಲವು ಕಾಲುವೆ ಹೂಳು ತೆಗೆಸಿದ್ದೇವೆ. ಪೂರ್ಣ ಅಚ್ಚುಕಟ್ಟಿಗೆ ನೀರು ಹರಿಸಲು ಯೋಜನೆ ಹಾಕಿಕೊಂಡಿದ್ದೇವೆ. ನೀರು ಬಳಕೆದಾರರ ಸಂಘ ರಚಿಸಿ ರೈತರಲ್ಲಿ ಅರಿವು ಮೂಡಿಸಲಾಗುವುದುಶಿವಮೂರ್ತಿ ಇಇ ಸಿಂಗಟಾಲೂರು ಏ.ನೀ.ಯೋ. ವಿಭಾಗ ಹಡಗಲಿ
ಇಡೀ ತಾಲ್ಲೂಕನ್ನು ಹಸಿರಾಗಿಸುವ ನೀರಾವರಿ ಯೋಜನೆಯನ್ನು ಎಂ.ಪಿ.ಪ್ರಕಾಶ್ ಮಾಡಿ ಹೋಗಿದ್ದಾರೆ. ನಿರ್ವಹಣೆ ಕೊರತೆಯಿಂದ ಕೊನೆಯ ಭಾಗದ ರೈತರು ಇನ್ನು ನೀರು ಕಂಡಿಲ್ಲ. ಚುನಾವಣೆಯಲ್ಲಿ ಮಾತ್ರ ಜನಪ್ರತಿನಿಧಿಗಳಿಗೆ ಈ ಯೋಜನೆ ನೆನಪಾಗುವುದು ದುರ್ದೈವಎಲ್.ಸೋಮಿನಾಯ್ಕ ರೈತ ದಾಸರಹಳ್ಳಿ ತಾಂಡ
ಯೋಜನೆ ಉದ್ಘಾಟನೆಯಾಗಿ 13 ವರ್ಷವಾದರೂ ಪೂರ್ಣ ಅಚ್ಚುಕಟ್ಟಿಗೆ ನೀರು ಹರಿದಿಲ್ಲ. ತಾಂತ್ರಿಕ ಅಡೆತಡೆ ನಿವಾರಿಸಿ ಇಡೀ ತಾಲ್ಲೂಕಿಗೆ ನೀರಾವರಿ ಸೌಲಭ್ಯ ವಿಸ್ತರಿಸಬೇಕು. ಜಮೀನು ಕಳೆದುಕೊಂಡ ರೈತರಿಗೆ ಸರ್ಕಾರ ತಕ್ಷಣ ಭೂ ಪರಿಹಾರ ನೀಡಬೇಕುಎಂ.ಶಿವರಾಜ್ ಕಾರ್ಯದರ್ಶಿ ರೈತ ಸಂಘ ಹಡಗಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.