ಶ್ರೀಗಳ ಗದ್ದುಗೆ ಬಳಿ ಕ್ರಿಯಾ ಸಮಾಧಿ
ಮಠದ ಆವರಣದಲ್ಲಿ ಭಾನುವಾರ ಸ್ವಾಮೀಜಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಅನೇಕ ಮಠಾಧೀಶರು ರಾಜಕಾರಣಿಗಳು ಭಕ್ತರು ಅಂತಿಮ ದರ್ಶನ ಪಡೆದರು. ಅಲಂಕೃತ ಪಲ್ಲಕ್ಕಿಯಲ್ಲಿ ಸ್ವಾಮೀಜಿ ಅಂತಿಮಯಾತ್ರೆ ನಡೆಯಿತು. ಮಠದ ಆವರಣದಲ್ಲಿ ಕೆಂಪಯ್ಯ ಸ್ವಾಮೀಜಿ ಗದ್ದುಗೆ ಪಕ್ಕದಲ್ಲೇ ಶಂಕರ ಸ್ವಾಮೀಜಿ ಕ್ರಿಯಾ ಸಮಾಧಿ ನೆರವೇರಿಸಲಾಯಿತು.