<p><strong>ಹಗರಿಬೊಮ್ಮನಹಳ್ಳಿ:</strong> ‘ದಾನದಲ್ಲಿ ದೈವತ್ವವನ್ನು ಕಾಣಬೇಕು, ನಾವು ನೀಡಿದ್ದು ಮತ್ತೊಬ್ಬರಿಗೆ ತಿಳಿಯದಂತಿರಬೇಕು’ ಎಂದು ಮರಿಯಮ್ಮನಹಳ್ಳಿಯ ಗುರುಪಾದದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ಕೋಗಳಿ ತಾಂಡಾದಲ್ಲಿ ಬುಧವಾರ ₹2ಕೋಟಿ ವೆಚ್ಚದ ಅಜ್ಜಮ್ಮದೇವಿ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.</p>.<p>‘ರೈತರು ನಿಜವಾದ ದಾನಿಗಳಾಗಿದ್ದಾರೆ, ತಾವು ಬಿತ್ತುವ ಅಂಶದಲ್ಲಿಯೂ ಪ್ರಾಣಿ ಪಕ್ಷಿಗಳಿಗಾಗಿ ಮುಡಿಪಾಗಿಡುವ ಮೂಲಕ ಧನ್ಯತೆ ಮೆರೆಯುತ್ತಾರೆ’ ಎಂದರು.</p>.<p>ಬಂಜಾರ ಗುರುಪೀಠದ ಸರ್ದಾರ ಸೇವಲಾಲ್ ಸ್ವಾಮೀಜಿ, ‘ಸಮುದಾಯದ ಸಹಭಾಗಿತ್ವದಲ್ಲಿ ವರ್ಷದೊಳಗೆ ದೇವಸ್ಥಾನ ನಿರ್ಮಿಸಲಾಗುವುದು. ಉಡುಪಿಯ ನುರಿತ ಕಾರ್ಮಿಕರಿಗೆ ದೇವಸ್ಥಾನ ನಿರ್ಮಾಣದ ಜವಾಬ್ದಾರಿ ವಹಿಸಲಾಗಿದೆ’ ಎಂದರು.</p>.<p>ನಂದಿಪುರದ ಮಹೇಶ್ವರ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ, ಗವಿಮಠದ ಮಹೇಶ್ವರ ಆನಂದ ಗುರೂಜಿ, ಆದರಳ್ಳಿಯ ಕುಮಾರಸ್ವಾಮೀಜಿ, ಶಿವಪ್ರಕಾಶ್ ಸ್ವಾಮೀಜಿ ಮಾತನಾಡಿದರು. ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆ ನೀಡಿದ ಸೋನುನಾಯ್ಕ ಸೇರಿದಂತೆ ಗ್ರಾಮದ ಮುಖಂಡರನ್ನು ಸನ್ಮಾನಿಸಲಾಯಿತು.</p>.<p>ಬಿಸಿಎಂ ವ್ಯವಸ್ಥಾಪಕ ದೇವೇಂದ್ರನಾಯ್ಕ, ವಿಜಯಕುಮಾರನಾಯ್ಕ, ಉಮಾಪತಿ, ಮುಖಂಡರಾದ ಗುಂಡನಾಯ್ಕ, ಸಂತೋಷನಾಯ್ಕ, ಪ್ರಕಾಶನಾಯ್ಕ, ಚಂದುನಾಯ್ಕ, ಎಸ್.ಮಲ್ಲೇಶನಾಯ್ಕ, ಬಿ. ಮೈಲಾರಸ್ವಾಮಿ, ಉಮಾನಾಯ್ಕ, ಹೂವಿನಹಡಗಲಿಯ ವೆಂಕನಾಯ್ಕ, ಪಿಡಿಒ ಶ್ರೀಕಾಂತ್, ಕೊಟ್ರಯ್ಯ, ಜೆ.ಎಂ.ವಿನಾಯಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಗರಿಬೊಮ್ಮನಹಳ್ಳಿ:</strong> ‘ದಾನದಲ್ಲಿ ದೈವತ್ವವನ್ನು ಕಾಣಬೇಕು, ನಾವು ನೀಡಿದ್ದು ಮತ್ತೊಬ್ಬರಿಗೆ ತಿಳಿಯದಂತಿರಬೇಕು’ ಎಂದು ಮರಿಯಮ್ಮನಹಳ್ಳಿಯ ಗುರುಪಾದದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ಕೋಗಳಿ ತಾಂಡಾದಲ್ಲಿ ಬುಧವಾರ ₹2ಕೋಟಿ ವೆಚ್ಚದ ಅಜ್ಜಮ್ಮದೇವಿ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.</p>.<p>‘ರೈತರು ನಿಜವಾದ ದಾನಿಗಳಾಗಿದ್ದಾರೆ, ತಾವು ಬಿತ್ತುವ ಅಂಶದಲ್ಲಿಯೂ ಪ್ರಾಣಿ ಪಕ್ಷಿಗಳಿಗಾಗಿ ಮುಡಿಪಾಗಿಡುವ ಮೂಲಕ ಧನ್ಯತೆ ಮೆರೆಯುತ್ತಾರೆ’ ಎಂದರು.</p>.<p>ಬಂಜಾರ ಗುರುಪೀಠದ ಸರ್ದಾರ ಸೇವಲಾಲ್ ಸ್ವಾಮೀಜಿ, ‘ಸಮುದಾಯದ ಸಹಭಾಗಿತ್ವದಲ್ಲಿ ವರ್ಷದೊಳಗೆ ದೇವಸ್ಥಾನ ನಿರ್ಮಿಸಲಾಗುವುದು. ಉಡುಪಿಯ ನುರಿತ ಕಾರ್ಮಿಕರಿಗೆ ದೇವಸ್ಥಾನ ನಿರ್ಮಾಣದ ಜವಾಬ್ದಾರಿ ವಹಿಸಲಾಗಿದೆ’ ಎಂದರು.</p>.<p>ನಂದಿಪುರದ ಮಹೇಶ್ವರ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ, ಗವಿಮಠದ ಮಹೇಶ್ವರ ಆನಂದ ಗುರೂಜಿ, ಆದರಳ್ಳಿಯ ಕುಮಾರಸ್ವಾಮೀಜಿ, ಶಿವಪ್ರಕಾಶ್ ಸ್ವಾಮೀಜಿ ಮಾತನಾಡಿದರು. ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆ ನೀಡಿದ ಸೋನುನಾಯ್ಕ ಸೇರಿದಂತೆ ಗ್ರಾಮದ ಮುಖಂಡರನ್ನು ಸನ್ಮಾನಿಸಲಾಯಿತು.</p>.<p>ಬಿಸಿಎಂ ವ್ಯವಸ್ಥಾಪಕ ದೇವೇಂದ್ರನಾಯ್ಕ, ವಿಜಯಕುಮಾರನಾಯ್ಕ, ಉಮಾಪತಿ, ಮುಖಂಡರಾದ ಗುಂಡನಾಯ್ಕ, ಸಂತೋಷನಾಯ್ಕ, ಪ್ರಕಾಶನಾಯ್ಕ, ಚಂದುನಾಯ್ಕ, ಎಸ್.ಮಲ್ಲೇಶನಾಯ್ಕ, ಬಿ. ಮೈಲಾರಸ್ವಾಮಿ, ಉಮಾನಾಯ್ಕ, ಹೂವಿನಹಡಗಲಿಯ ವೆಂಕನಾಯ್ಕ, ಪಿಡಿಒ ಶ್ರೀಕಾಂತ್, ಕೊಟ್ರಯ್ಯ, ಜೆ.ಎಂ.ವಿನಾಯಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>