<p><strong>ಹೊಸಪೇಟೆ (ವಿಜಯನಗರ):</strong> ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಎರಡನೇ ಬೆಳೆ ಬೆಳೆಯಲು ನೀರು ಪೂರೈಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಸಿರುಗುಪ್ಪ ತಾಲ್ಲೂಕಿನ ಕರೂರು ಗ್ರಾಮದಿಂದ ಜಲಾಶಯದವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯು ಭಾನುವಾರ ತಾಲ್ಲೂಕಿನ ಕಮಲಾಪುರ ಪಟ್ಟಣಕ್ಕೆ ಆಗಮಿಸಿತು.</p><p>ಬಿ.ಆರ್. ಅಂಬೇಡ್ಕರ್ ವೃತ್ತಕ್ಕೆ ತೆರಳಿದ ಪದಾಧಿಕಾರಿಗಳು ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.</p><p>ಸಂಘದ ಅಧ್ಯಕ್ಷ ಆರ್. ಮಾಧವರೆಡ್ಡಿ ಮಾತನಾಡಿ, ‘ಸೋಮವಾರ ಜಲಾಶಯದ ಬಳಿಯ ತುಂಗಭದ್ರಾ ಮಂಡಳಿಯ ಕಚೇರಿ ತಲುಪಿ, ಪ್ರತಿಭಟನೆ ಮಾಡಲಾಗುತ್ತದೆ’ ಎಂದರು.</p><p>‘ಈಗಾಗಲೇ ಎಚ್ಎಲ್ಸಿ ಕಾಲುವೆಗೆ ನೀರು ಹರಿಸಲಾಗಿದೆ. ಆದರೆ, ರಾಯಚೂರು ಹಾಗೂ ಎಲ್ಎಫ್ಸಿಯ ಎರಡು ಕಾಲುವೆಗೆ ನೀರು ಹರಿಸುತ್ತಿಲ್ಲ. ಜಲಾಶಯದಲ್ಲಿ 80 ಟಿಎಂಸಿ ಅಡಿ ನೀರು ಇದ್ದರೂ, ನಾಟಕ ಆಡುತ್ತಿದ್ದಾರೆ’ ಎಂದು ಆರೋಪಿಸಿದರು.</p><p>‘ಈವರೆಗೆ ಕೇವಲ 16 ಗೇಟ್ಗಳನ್ನು ಅಳವಡಿಸಿದ್ದು, ಇನ್ನೂ 19 ಗೇಟ್ಗಳನ್ನು ಯಾವಾಗ ಅಳವಡಿಸುತ್ತಾರೆಂಬುದು ಸ್ಪಷ್ಟವಿಲ್ಲ. ಎರಡನೇ ಬೆಳೆಗೆ ಜನವರಿವರೆಗೆ ನೀರು ಬೇಕಿದೆ. ಅದಕ್ಕಾಗಿ ಹೋರಾಟ ಹಮ್ಮಿಕೊಂಡಿದ್ದೇವೆ’ ಎಂದು ತಿಳಿಸಿದರು.</p><p>ರೈತ ಮುಖಂಡರಾದ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಜಿ. ಪಂಪನಗೌಡ, ಅಸುಂಡೆ ಬಸವರಾಜ ಸ್ವಾಮಿ, ಪ್ರಭಾಕರ ರೆಡ್ಡಿ, ಹುಲುಗಪ್ಪ ಚಾಗನೂರು, ಜಾನೂರು ಪಂಪನಗೌಡ, ಚಾನಾಳು ವಿರುಪಾಕ್ಷಿ, ಗಣೇಶ್, ಹುಲುಗಪ್ಪ, ಕರಿಯಪ್ಪ ಗುಡಿಮನೆ, ರತ್ಮಮ್ಮ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ):</strong> ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಎರಡನೇ ಬೆಳೆ ಬೆಳೆಯಲು ನೀರು ಪೂರೈಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಸಿರುಗುಪ್ಪ ತಾಲ್ಲೂಕಿನ ಕರೂರು ಗ್ರಾಮದಿಂದ ಜಲಾಶಯದವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯು ಭಾನುವಾರ ತಾಲ್ಲೂಕಿನ ಕಮಲಾಪುರ ಪಟ್ಟಣಕ್ಕೆ ಆಗಮಿಸಿತು.</p><p>ಬಿ.ಆರ್. ಅಂಬೇಡ್ಕರ್ ವೃತ್ತಕ್ಕೆ ತೆರಳಿದ ಪದಾಧಿಕಾರಿಗಳು ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.</p><p>ಸಂಘದ ಅಧ್ಯಕ್ಷ ಆರ್. ಮಾಧವರೆಡ್ಡಿ ಮಾತನಾಡಿ, ‘ಸೋಮವಾರ ಜಲಾಶಯದ ಬಳಿಯ ತುಂಗಭದ್ರಾ ಮಂಡಳಿಯ ಕಚೇರಿ ತಲುಪಿ, ಪ್ರತಿಭಟನೆ ಮಾಡಲಾಗುತ್ತದೆ’ ಎಂದರು.</p><p>‘ಈಗಾಗಲೇ ಎಚ್ಎಲ್ಸಿ ಕಾಲುವೆಗೆ ನೀರು ಹರಿಸಲಾಗಿದೆ. ಆದರೆ, ರಾಯಚೂರು ಹಾಗೂ ಎಲ್ಎಫ್ಸಿಯ ಎರಡು ಕಾಲುವೆಗೆ ನೀರು ಹರಿಸುತ್ತಿಲ್ಲ. ಜಲಾಶಯದಲ್ಲಿ 80 ಟಿಎಂಸಿ ಅಡಿ ನೀರು ಇದ್ದರೂ, ನಾಟಕ ಆಡುತ್ತಿದ್ದಾರೆ’ ಎಂದು ಆರೋಪಿಸಿದರು.</p><p>‘ಈವರೆಗೆ ಕೇವಲ 16 ಗೇಟ್ಗಳನ್ನು ಅಳವಡಿಸಿದ್ದು, ಇನ್ನೂ 19 ಗೇಟ್ಗಳನ್ನು ಯಾವಾಗ ಅಳವಡಿಸುತ್ತಾರೆಂಬುದು ಸ್ಪಷ್ಟವಿಲ್ಲ. ಎರಡನೇ ಬೆಳೆಗೆ ಜನವರಿವರೆಗೆ ನೀರು ಬೇಕಿದೆ. ಅದಕ್ಕಾಗಿ ಹೋರಾಟ ಹಮ್ಮಿಕೊಂಡಿದ್ದೇವೆ’ ಎಂದು ತಿಳಿಸಿದರು.</p><p>ರೈತ ಮುಖಂಡರಾದ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಜಿ. ಪಂಪನಗೌಡ, ಅಸುಂಡೆ ಬಸವರಾಜ ಸ್ವಾಮಿ, ಪ್ರಭಾಕರ ರೆಡ್ಡಿ, ಹುಲುಗಪ್ಪ ಚಾಗನೂರು, ಜಾನೂರು ಪಂಪನಗೌಡ, ಚಾನಾಳು ವಿರುಪಾಕ್ಷಿ, ಗಣೇಶ್, ಹುಲುಗಪ್ಪ, ಕರಿಯಪ್ಪ ಗುಡಿಮನೆ, ರತ್ಮಮ್ಮ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>