ಮಳೆ ತಡವಾಗಿ ಆರಂಭವಾಗಿದೆ. ತುಂಗಭದ್ರಾ ಜಲಾಶಯದ ಒಳ ಹರಿವು 20 ಕ್ಯುಸೆಕ್ ಇದ್ದಾಗ ಮಾತ್ರ ಮಾಲವಿ ಜಲಾಶಯಕ್ಕೆ ನೀರು ಹರಿಸಲಾಗುವುದು
ಐಗೋಳ ಪ್ರಕಾಶ್ ಕಾರ್ಯನಿರ್ವಾಹಕ ಎಂಜಿನಿಯರ್ ಜಲಸಂಪನ್ಮೂಲ ಇಲಾಖೆ ಹೂವಿನ ಹಡಗಲಿ
ಮೀನುಗಾರಿಕೆಗೆ ವರದಾನ
‘ಜಲಾಶಯದ ಅಂಗಳದಲ್ಲಿ ಐದು ಗ್ರಾಮ ಪಂಚಾಯ್ತಿಗಳಿಂದ ಈ ಹಿಂದೆ ನರೇಗಾ ಯೋಜನೆ ಅಡಿಯಲ್ಲಿ ಹೂಳು ತೆಗೆಸಲಾಗಿತ್ತು. ಆ ಸ್ಥಳದಲ್ಲಿ ಅಳಿದುಳಿದಿರುವ ನೀರಿನಲ್ಲಿ ಮೀನುಗಾರಿಕೆ ನಡೆದಿದೆ. ಒಂದು ತಿಂಗಳಿಂದ ಮೀನುಗಾರರ ಬದುಕಿಗೆ ಭದ್ರತೆ ಒದಗಿಸಿದೆ. ನೀರು ಪೋಲಾಗಿ ಹೋಗದಿದ್ದರೆ ಮೂರ್ನಾಲ್ಕು ತಿಂಗಳು ಮೀನುಗಾರಿಕೆಗೆ ಅನುಕೂಲ ಆಗುತ್ತಿತ್ತು’ ಎನ್ನುತ್ತಾರೆ ಬಸರಕೋಡು ತಾಂಡಾದ ಮೀನುಗಾರ ಮಂಜುನಾಯ್ಕ.