<p><strong>ಹೊಸಪೇಟೆ (ವಿಜಯನಗರ):</strong> ತುಂಗಭದ್ರಾ ಜಲಾಶಯ ನಿರ್ಮಾಣವಾದ ವೇಳೆ ಮುಳುಗಡೆಯದ ಪ್ರದೇಶಗಳ ರೈತರಿಗೆ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಲು ತಿಳಿಸಿ ಇದುವರೆಗೂ ಹಕ್ಕುಪತ್ರ ನೀಡದೆ ಇರುವ ಸರ್ಕಾರದ ಕ್ರಮವನ್ನು ವಿರೋಧಿಸಿ ನೂರಾರು ರೈತರು ಸೋಮವಾರ ಮರಿಯಮ್ಮನಹಳ್ಳಿಯಿಂದ ನಗರಕ್ಕೆ ಪಾದಯಾತ್ರೆ ನಡೆಸಿದರು.</p>.<p>ಕರ್ನಾಟಕ ರಾಜ್ಯ ರೈತ ಸಂಘದ ಮರಿಯಮ್ಮನಹಳ್ಳಿ ಹೋಬಳಿ ಸಮಿತಿಯ ನೇತೃತ್ವದಲ್ಲಿ ನಡೆದ ಈ ಪಾದಯಾತ್ರೆಯ ಕೊನೆಯಲ್ಲಿ  ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಕಳುಹಿಸಲಾಯಿತು.</p>.<p>‘ಮುಳುಗಡೆ ಪ್ರದೇಶದ ಜನರಿಗೆ ಬದಲಿ ಜಮೀನು ನೀಡಬೇಕಿರುವುದು ಸರ್ಕಾರದ ಕರ್ತವ್ಯ. ಆದರೆ ಕಳೆದ 73 ವರ್ಷಗಳಿಂದಲೂ ಜನರಿಗೆ ಸರ್ಕಾರಗಳು ವಂಚಿಸುತ್ತಲೇ ಬಂದಿವೆ. ಇದೀಗ ಪಟ್ಟಣ ಪಂಚಾಯಿತಿಯಿಂದ 3 ಕಿ.ಮೀ. ವ್ಯಾಪ್ತಿಯೊಳಗೆ ಹಕ್ಕುಪತ್ರ ನೀಡಲಾಗದು ಎಂದು ತಾಲ್ಲೂಕು ಆಡಳಿತ ಹೇಳುತ್ತಿದೆ, ಇದನ್ನು ಒಪ್ಪಲಾಗದು. ವಿಶೇಷ  ಪ್ರಸಂಗವೆಂದು ಪರಿಗಣಿಸಿ ಹಕ್ಕುಪತ್ರ ನೀಡಬೇಕು’ ಎಂದು ರೈತಸಂಘದ ರಾಜ್ಯ ಮುಖಂಡರಾದ ಮಂಜುಳಾ ಎಸ್.ಅಕ್ಕಿ ಹೇಳಿದರು.</p>.<p>‘ನಮ್ಮನ್ನು ಒಕ್ಕಲೆಬ್ಬಿಸಿದ್ದು ಸರ್ಕಾರ, ಬದಲಿ ನಿವೇಶನ ನೀಡಿದ್ದೂ ಸರ್ಕಾರ, ಇದೀಗ ಅದಕ್ಕೆ ಹಕ್ಕುಪತ್ರ ನೀಡಲು ಮೀನಮೇಷ ಎಣಿಸುವುದು ಸರಿಯಲ್ಲ. ಮುಖ್ಯಮಂತ್ರಿಗಳು ಜಿಲ್ಲೆಗೆ ಬಂದಿದ್ದಾಗ ನಾಲ್ಕು ಬಾರಿ ಈ ನಿಟ್ಟಿನಲ್ಲಿ ಮನವಿ ಕೊಟ್ಟಿದ್ದೇವೆ, ಆದರೂ ಸರ್ಕಾರ ನಮ್ಮ ಬೇಡಿಕೆ ಈಡೇರಿಸಿಲ್ಲ’ ಎಂದು ರೈತಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಗೋಣಿಬಸಪ್ಪ ಆರೋಪಿಸಿದರು.</p>.<p>ಎಚ್ಚರಿಕೆ: ಸರ್ಕಾರ ಕೂಡಲೇ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು, ಇಲ್ಲವಾದರೆ ನ.9ರಂದು ಕೂಡ್ಲಿಗಿಗೆ ಆಗಮಿಸಲಿರುವ ಮುಖ್ಯಮಂತ್ರಿ ಅವರ ಮುಂದೆ ಪ್ರತಿಭಟಿಸುವುದು ಅನಿವಾರ್ಯವಾಗಲಿದೆ ಹಾಗೂ ಹೆದ್ದಾರಿ ತಡೆದು ಪ್ರತಿಭಟಿಸುವ ನಿರ್ಧಾರಕ್ಕೂ ಬರಲಿದ್ದೇವೆ ಎಂದು ಅವರು ಎಚ್ಚರಿಸಿದರು.</p>.<p>ರೈತ ಮುಖಂಡರಾದ ಎಲ್.ಕೆ.ನಾಯ್ಡು, ಜಿ.ಮೆಹಬೂಬ್ ಸಾಬ್, ಗಂಟೆ ಸೋಮಶೇಖರ್, ಟಿ.ಹನುಮಂತಪ್ಪ, ಇಬ್ರಾಹಿಂ ಸಾಬ್, ಕಾಶಿಂ ಸಾಬ್, ಹುಸೇನ್ ಸಾಬ್, ದುರುಗಪ್ಪ, ಒಪ್ಪತೇಶ್ ಬಣಕಾರ್, ನಾಗರಾಜ್, ಮನ್ಸೂರ್, ತಳವಾರ್ ಹುಲುಗಪ್ಪ ಇತರರು ಇದ್ದರು.</p>.<p><strong>ರೈತರ ಹಕ್ಕೊತ್ತಾಯಗಳು</strong></p><p> *ನಾವು ಭೂಸಂತ್ರಸ್ತರು 73 ವರ್ಷಗಳಿಂದ ಉಳುಮೆ ಮಾಡುತ್ತಿದ್ದೇವೆ ಹಕ್ಕುಪತ್ರ ನೀಡಿ </p><p>* ಕೆಲವು ಜನರಿಗೆ ಹಕ್ಕುಪತ್ರ ಕೊಟ್ಟಿದ್ದರೂ ಸಹ ಕೆಐಎಡಿಬಿ ಮೂಲಕ ಮೂಲಕ ವಶಪಡಿಸಿಕೊಳ್ಳುವ ಹುನ್ನಾರ ನಡೆದಿದೆ ಅದನ್ನು ತಕ್ಷಣ ನಿಲ್ಲಿಸಬೇಕು </p><p>*ಪಟ್ಟಣ ಪಂಚಾಯಿತಿ 3 ಕಿ.ಮೀ.ವ್ಯಾಪ್ತಿಯ ನೆಪ ಹೇಳದೆ ವಿಶೇಷ ಸಂದರ್ಭ ಎಂದು ಪರಿಗಣಿಸಿ ಹಕ್ಕುಪತ್ರ ನೀಡಬೇಕು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ):</strong> ತುಂಗಭದ್ರಾ ಜಲಾಶಯ ನಿರ್ಮಾಣವಾದ ವೇಳೆ ಮುಳುಗಡೆಯದ ಪ್ರದೇಶಗಳ ರೈತರಿಗೆ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಲು ತಿಳಿಸಿ ಇದುವರೆಗೂ ಹಕ್ಕುಪತ್ರ ನೀಡದೆ ಇರುವ ಸರ್ಕಾರದ ಕ್ರಮವನ್ನು ವಿರೋಧಿಸಿ ನೂರಾರು ರೈತರು ಸೋಮವಾರ ಮರಿಯಮ್ಮನಹಳ್ಳಿಯಿಂದ ನಗರಕ್ಕೆ ಪಾದಯಾತ್ರೆ ನಡೆಸಿದರು.</p>.<p>ಕರ್ನಾಟಕ ರಾಜ್ಯ ರೈತ ಸಂಘದ ಮರಿಯಮ್ಮನಹಳ್ಳಿ ಹೋಬಳಿ ಸಮಿತಿಯ ನೇತೃತ್ವದಲ್ಲಿ ನಡೆದ ಈ ಪಾದಯಾತ್ರೆಯ ಕೊನೆಯಲ್ಲಿ  ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಕಳುಹಿಸಲಾಯಿತು.</p>.<p>‘ಮುಳುಗಡೆ ಪ್ರದೇಶದ ಜನರಿಗೆ ಬದಲಿ ಜಮೀನು ನೀಡಬೇಕಿರುವುದು ಸರ್ಕಾರದ ಕರ್ತವ್ಯ. ಆದರೆ ಕಳೆದ 73 ವರ್ಷಗಳಿಂದಲೂ ಜನರಿಗೆ ಸರ್ಕಾರಗಳು ವಂಚಿಸುತ್ತಲೇ ಬಂದಿವೆ. ಇದೀಗ ಪಟ್ಟಣ ಪಂಚಾಯಿತಿಯಿಂದ 3 ಕಿ.ಮೀ. ವ್ಯಾಪ್ತಿಯೊಳಗೆ ಹಕ್ಕುಪತ್ರ ನೀಡಲಾಗದು ಎಂದು ತಾಲ್ಲೂಕು ಆಡಳಿತ ಹೇಳುತ್ತಿದೆ, ಇದನ್ನು ಒಪ್ಪಲಾಗದು. ವಿಶೇಷ  ಪ್ರಸಂಗವೆಂದು ಪರಿಗಣಿಸಿ ಹಕ್ಕುಪತ್ರ ನೀಡಬೇಕು’ ಎಂದು ರೈತಸಂಘದ ರಾಜ್ಯ ಮುಖಂಡರಾದ ಮಂಜುಳಾ ಎಸ್.ಅಕ್ಕಿ ಹೇಳಿದರು.</p>.<p>‘ನಮ್ಮನ್ನು ಒಕ್ಕಲೆಬ್ಬಿಸಿದ್ದು ಸರ್ಕಾರ, ಬದಲಿ ನಿವೇಶನ ನೀಡಿದ್ದೂ ಸರ್ಕಾರ, ಇದೀಗ ಅದಕ್ಕೆ ಹಕ್ಕುಪತ್ರ ನೀಡಲು ಮೀನಮೇಷ ಎಣಿಸುವುದು ಸರಿಯಲ್ಲ. ಮುಖ್ಯಮಂತ್ರಿಗಳು ಜಿಲ್ಲೆಗೆ ಬಂದಿದ್ದಾಗ ನಾಲ್ಕು ಬಾರಿ ಈ ನಿಟ್ಟಿನಲ್ಲಿ ಮನವಿ ಕೊಟ್ಟಿದ್ದೇವೆ, ಆದರೂ ಸರ್ಕಾರ ನಮ್ಮ ಬೇಡಿಕೆ ಈಡೇರಿಸಿಲ್ಲ’ ಎಂದು ರೈತಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಗೋಣಿಬಸಪ್ಪ ಆರೋಪಿಸಿದರು.</p>.<p>ಎಚ್ಚರಿಕೆ: ಸರ್ಕಾರ ಕೂಡಲೇ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು, ಇಲ್ಲವಾದರೆ ನ.9ರಂದು ಕೂಡ್ಲಿಗಿಗೆ ಆಗಮಿಸಲಿರುವ ಮುಖ್ಯಮಂತ್ರಿ ಅವರ ಮುಂದೆ ಪ್ರತಿಭಟಿಸುವುದು ಅನಿವಾರ್ಯವಾಗಲಿದೆ ಹಾಗೂ ಹೆದ್ದಾರಿ ತಡೆದು ಪ್ರತಿಭಟಿಸುವ ನಿರ್ಧಾರಕ್ಕೂ ಬರಲಿದ್ದೇವೆ ಎಂದು ಅವರು ಎಚ್ಚರಿಸಿದರು.</p>.<p>ರೈತ ಮುಖಂಡರಾದ ಎಲ್.ಕೆ.ನಾಯ್ಡು, ಜಿ.ಮೆಹಬೂಬ್ ಸಾಬ್, ಗಂಟೆ ಸೋಮಶೇಖರ್, ಟಿ.ಹನುಮಂತಪ್ಪ, ಇಬ್ರಾಹಿಂ ಸಾಬ್, ಕಾಶಿಂ ಸಾಬ್, ಹುಸೇನ್ ಸಾಬ್, ದುರುಗಪ್ಪ, ಒಪ್ಪತೇಶ್ ಬಣಕಾರ್, ನಾಗರಾಜ್, ಮನ್ಸೂರ್, ತಳವಾರ್ ಹುಲುಗಪ್ಪ ಇತರರು ಇದ್ದರು.</p>.<p><strong>ರೈತರ ಹಕ್ಕೊತ್ತಾಯಗಳು</strong></p><p> *ನಾವು ಭೂಸಂತ್ರಸ್ತರು 73 ವರ್ಷಗಳಿಂದ ಉಳುಮೆ ಮಾಡುತ್ತಿದ್ದೇವೆ ಹಕ್ಕುಪತ್ರ ನೀಡಿ </p><p>* ಕೆಲವು ಜನರಿಗೆ ಹಕ್ಕುಪತ್ರ ಕೊಟ್ಟಿದ್ದರೂ ಸಹ ಕೆಐಎಡಿಬಿ ಮೂಲಕ ಮೂಲಕ ವಶಪಡಿಸಿಕೊಳ್ಳುವ ಹುನ್ನಾರ ನಡೆದಿದೆ ಅದನ್ನು ತಕ್ಷಣ ನಿಲ್ಲಿಸಬೇಕು </p><p>*ಪಟ್ಟಣ ಪಂಚಾಯಿತಿ 3 ಕಿ.ಮೀ.ವ್ಯಾಪ್ತಿಯ ನೆಪ ಹೇಳದೆ ವಿಶೇಷ ಸಂದರ್ಭ ಎಂದು ಪರಿಗಣಿಸಿ ಹಕ್ಕುಪತ್ರ ನೀಡಬೇಕು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>