<p><strong>ವಿಜಯಪುರ:</strong> ಯುಪಿಎಸ್ಇ, ಕೆಪಿಎಸ್ಸಿ ಪರೀಕ್ಷೆಗಳಿಗೆ ತರಬೇತಿ ಪಡೆಯಲು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್ ಮಧ್ಯೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.</p>.<p>ಬಿ.ಎಲ್.ಡಿ.ಇ ಸಂಸ್ಥೆಯ ಪರವಾಗಿ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹಾಗೂ ಸಾಧನಾ ಕೋಚಿಂಗ್ ಸೆಂಟರ್ ಪರವಾಗಿ ನಿರ್ದೇಶಕಿ ಜ್ಯೋತಿ ಒಡಂಬಡಿಕೆಗೆ ಬುಧವಾರ ಪರಸ್ಪರ ಸಹಿ ಹಾಕಿದರು.</p>.<p>ಈ ಕುರಿತು ಮಾತನಾಡಿದ ಸುನೀಲಗೌಡ ಪಾಟೀಲ, ಬಿ.ಎಲ್.ಡಿ.ಇ ಸಂಸ್ಥೆಯು ಈ ಭಾಗ ಜನರಿಗೆ ಕಲೆ, ವಿಜ್ಞಾನ, ವಾಣಿಜ್ಯ, ವೃತ್ತಿ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಮಖ ಪಾತ್ರವಹಿಸಿದೆ. ಇದೀಗ ಲೋಕಸೇವಾ ಆಯೋಗದ ಪರೀಕ್ಷೆಗಳಿಗೆ ಈ ಭಾಗದ ವಿದ್ಯಾರ್ಥಿಗಳಿಗೆ ತರಬೇತಿ ಒದಗಿಸಲು ಮುಂದಾಗಿದೆ ಎಂದರು.</p>.<p>ಸಾಧನಾ ಕೋಚಿಂಗ್ ಸೆಂಟರ್ ನ ಪರಿಣಿತ ಶಿಕ್ಷಕರು ಮತ್ತು ಅವರು ಸಂಗ್ರಹಿಸಿರುವ ಪರೀಕ್ಷೆಗೆ ಪೂರಕವಾಗಿರುವ ಸಾಹಿತ್ಯ ಸಂಗ್ರಹ, ಅಧ್ಯಯನ ಸಾಮಗ್ರಿಗಳು, ಪರೀಕ್ಷಾ ಸರಣಿಯ ಉತ್ತರ ಪ್ರತಿಗಳ ಜೊತೆಗೆ ಸತತ ಮಾರ್ಗದರ್ಶನ ಮಾಡುತ್ತ ನಿರಂತರವಾಗಿ ಸಂಪರ್ಕದಲ್ಲಿರಲಿದ್ದಾರೆ. ಬಿ.ಎಲ್.ಡಿಇ ಸಂಸ್ಥೆ ಇದಕ್ಕೆ ಪೂರಕವಾಗಿ ಶೈಕ್ಷಣಿಕ ಮೂಲಸೌಲಭ್ಯ ಒದಗಿಸಲಿದೆ ಎಂದರು.</p>.<p>ವಿದ್ಯಾರ್ಥಿಗಳು ಏಕಕಾಲದಲ್ಲಿ ಪದವಿಯ ಓದುವುದರ ಜೊತೆಗೆ ಪ್ರಾರಂಭದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್ಇ ಮತ್ತು ಕೆಪಿಎಸ್ಇ ಪರೀಕ್ಷೆಗಳ ತರಬೇತಿಯನ್ನೂ ಪಡೆಯಲಿದ್ದಾರೆ. ಈ ತರಬೇತಿಯಲ್ಲಿ ವ್ಯಕ್ತಿತ್ವ ವಿಕಸನ, ಚರ್ಚಾಗಳು, ಗುಂಪು ಚರ್ಚೆ, ಅಣಕು ಸಂದರ್ಶನಗಳು ನಡೆಯಲಿವೆ. ಇದರಿಂದ ಪದವಿ ನಂತರ ತರಬೇತಿ ಪಡೆಯುವ ಒತ್ತಡ ಕಡಿಮೆಯಾಗಿ ಸಮಯದ ಉಳಿತಾಯವಾಗಲಿದೆ. ಅಲ್ಲದೇ, ಪದವಿ ಪಡೆದ ತಕ್ಷಣವೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲು ಅವವಕಾಶ ಸಿಗಲಿದೆ. ಪ್ರಾರಂಭಿಕ ಹಂತದಲ್ಲಿಯೇ ಯುವಕರು ತಮ್ಮ ಕನಸು ನನಸು ಮಾಡಲು ಅನುಕೂಲವಾಗಲಿದೆ ಎಂದು ಹೇಳಿದರು.</p>.<p>ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್ ನಿರ್ದೇಶಕಿ ಡಾ. ಜ್ಯೋತಿ ಮಾತನಾಡಿ, ರಾಜ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕ್ಷೇತ್ರದಲ್ಲಿ ತಮ್ಮ ಕೇಂದ್ರ 14 ವರ್ಷಗಳನ್ನು ಪೂರೈಸಿದೆ. ಈಗಾಗಲೇ ರಾಜ್ಯದ ಪ್ರಮುಖ ಶಿಕ್ಷಣ ಸಂಸ್ಥೆಗಳೊಂದಿಗೆ ಕೈಜೋಡಿಸಿ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದೆ ಎಂದು ತಿಳಿಸಿದರು. <br><br>ನಮ್ಮ ಕೋಚಿಂಗ್ ಸೆಂಟರ್ ನಲ್ಲಿ ತರಬೇತಿ ಪಡೆದಿರುವ ಹಲವಾರು ಜನರು ಈಗಾಗಲೇ ಯುಪಿಎಸ್ಇ, ಕೆಪಿಎಸ್ಇ ಸೇರಿದಂತೆ ನಾನಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.</p>.<p>ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ ಉಪಸ್ಥಿತರಿದ್ದರು. </p>.<div><blockquote>ಐಎಎಸ್ ಐಪಿಎಸ್ ಸೇರಿದಂತೆ ವಿವಿಧ ಸರ್ಕಾರಿ ಪ್ರಮುಖ ಹುದ್ದೆಗಳಿಗೆ ಪ್ರಯತ್ನಿಸುತ್ತಿರುವ ಯುವ ಜನರಿಗೆ ಬಿಎಲ್ಡಿಇ ತರಬೇತಿ ಸಂಸ್ಥೆಯಿಂದ ಅನುಕೂಲವಾಗಲಿದೆ.</blockquote><span class="attribution">ಸುನೀಲಗೌಡ ಪಾಟೀಲಪ್ರಧಾನ ಕಾರ್ಯದರ್ಶಿ ಬಿ.ಎಲ್.ಡಿ.ಇ ಸಂಸ್ಥೆ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ಯುಪಿಎಸ್ಇ, ಕೆಪಿಎಸ್ಸಿ ಪರೀಕ್ಷೆಗಳಿಗೆ ತರಬೇತಿ ಪಡೆಯಲು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್ ಮಧ್ಯೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.</p>.<p>ಬಿ.ಎಲ್.ಡಿ.ಇ ಸಂಸ್ಥೆಯ ಪರವಾಗಿ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹಾಗೂ ಸಾಧನಾ ಕೋಚಿಂಗ್ ಸೆಂಟರ್ ಪರವಾಗಿ ನಿರ್ದೇಶಕಿ ಜ್ಯೋತಿ ಒಡಂಬಡಿಕೆಗೆ ಬುಧವಾರ ಪರಸ್ಪರ ಸಹಿ ಹಾಕಿದರು.</p>.<p>ಈ ಕುರಿತು ಮಾತನಾಡಿದ ಸುನೀಲಗೌಡ ಪಾಟೀಲ, ಬಿ.ಎಲ್.ಡಿ.ಇ ಸಂಸ್ಥೆಯು ಈ ಭಾಗ ಜನರಿಗೆ ಕಲೆ, ವಿಜ್ಞಾನ, ವಾಣಿಜ್ಯ, ವೃತ್ತಿ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಮಖ ಪಾತ್ರವಹಿಸಿದೆ. ಇದೀಗ ಲೋಕಸೇವಾ ಆಯೋಗದ ಪರೀಕ್ಷೆಗಳಿಗೆ ಈ ಭಾಗದ ವಿದ್ಯಾರ್ಥಿಗಳಿಗೆ ತರಬೇತಿ ಒದಗಿಸಲು ಮುಂದಾಗಿದೆ ಎಂದರು.</p>.<p>ಸಾಧನಾ ಕೋಚಿಂಗ್ ಸೆಂಟರ್ ನ ಪರಿಣಿತ ಶಿಕ್ಷಕರು ಮತ್ತು ಅವರು ಸಂಗ್ರಹಿಸಿರುವ ಪರೀಕ್ಷೆಗೆ ಪೂರಕವಾಗಿರುವ ಸಾಹಿತ್ಯ ಸಂಗ್ರಹ, ಅಧ್ಯಯನ ಸಾಮಗ್ರಿಗಳು, ಪರೀಕ್ಷಾ ಸರಣಿಯ ಉತ್ತರ ಪ್ರತಿಗಳ ಜೊತೆಗೆ ಸತತ ಮಾರ್ಗದರ್ಶನ ಮಾಡುತ್ತ ನಿರಂತರವಾಗಿ ಸಂಪರ್ಕದಲ್ಲಿರಲಿದ್ದಾರೆ. ಬಿ.ಎಲ್.ಡಿಇ ಸಂಸ್ಥೆ ಇದಕ್ಕೆ ಪೂರಕವಾಗಿ ಶೈಕ್ಷಣಿಕ ಮೂಲಸೌಲಭ್ಯ ಒದಗಿಸಲಿದೆ ಎಂದರು.</p>.<p>ವಿದ್ಯಾರ್ಥಿಗಳು ಏಕಕಾಲದಲ್ಲಿ ಪದವಿಯ ಓದುವುದರ ಜೊತೆಗೆ ಪ್ರಾರಂಭದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್ಇ ಮತ್ತು ಕೆಪಿಎಸ್ಇ ಪರೀಕ್ಷೆಗಳ ತರಬೇತಿಯನ್ನೂ ಪಡೆಯಲಿದ್ದಾರೆ. ಈ ತರಬೇತಿಯಲ್ಲಿ ವ್ಯಕ್ತಿತ್ವ ವಿಕಸನ, ಚರ್ಚಾಗಳು, ಗುಂಪು ಚರ್ಚೆ, ಅಣಕು ಸಂದರ್ಶನಗಳು ನಡೆಯಲಿವೆ. ಇದರಿಂದ ಪದವಿ ನಂತರ ತರಬೇತಿ ಪಡೆಯುವ ಒತ್ತಡ ಕಡಿಮೆಯಾಗಿ ಸಮಯದ ಉಳಿತಾಯವಾಗಲಿದೆ. ಅಲ್ಲದೇ, ಪದವಿ ಪಡೆದ ತಕ್ಷಣವೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲು ಅವವಕಾಶ ಸಿಗಲಿದೆ. ಪ್ರಾರಂಭಿಕ ಹಂತದಲ್ಲಿಯೇ ಯುವಕರು ತಮ್ಮ ಕನಸು ನನಸು ಮಾಡಲು ಅನುಕೂಲವಾಗಲಿದೆ ಎಂದು ಹೇಳಿದರು.</p>.<p>ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್ ನಿರ್ದೇಶಕಿ ಡಾ. ಜ್ಯೋತಿ ಮಾತನಾಡಿ, ರಾಜ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕ್ಷೇತ್ರದಲ್ಲಿ ತಮ್ಮ ಕೇಂದ್ರ 14 ವರ್ಷಗಳನ್ನು ಪೂರೈಸಿದೆ. ಈಗಾಗಲೇ ರಾಜ್ಯದ ಪ್ರಮುಖ ಶಿಕ್ಷಣ ಸಂಸ್ಥೆಗಳೊಂದಿಗೆ ಕೈಜೋಡಿಸಿ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದೆ ಎಂದು ತಿಳಿಸಿದರು. <br><br>ನಮ್ಮ ಕೋಚಿಂಗ್ ಸೆಂಟರ್ ನಲ್ಲಿ ತರಬೇತಿ ಪಡೆದಿರುವ ಹಲವಾರು ಜನರು ಈಗಾಗಲೇ ಯುಪಿಎಸ್ಇ, ಕೆಪಿಎಸ್ಇ ಸೇರಿದಂತೆ ನಾನಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.</p>.<p>ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ ಉಪಸ್ಥಿತರಿದ್ದರು. </p>.<div><blockquote>ಐಎಎಸ್ ಐಪಿಎಸ್ ಸೇರಿದಂತೆ ವಿವಿಧ ಸರ್ಕಾರಿ ಪ್ರಮುಖ ಹುದ್ದೆಗಳಿಗೆ ಪ್ರಯತ್ನಿಸುತ್ತಿರುವ ಯುವ ಜನರಿಗೆ ಬಿಎಲ್ಡಿಇ ತರಬೇತಿ ಸಂಸ್ಥೆಯಿಂದ ಅನುಕೂಲವಾಗಲಿದೆ.</blockquote><span class="attribution">ಸುನೀಲಗೌಡ ಪಾಟೀಲಪ್ರಧಾನ ಕಾರ್ಯದರ್ಶಿ ಬಿ.ಎಲ್.ಡಿ.ಇ ಸಂಸ್ಥೆ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>