<p><strong>ವಿಜಯಪುರ</strong>: ನಗರದಲ್ಲಿ ಬುಧವಾರ ಕ್ರೈಸ್ತರು ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಸಡಗರದಿಂದ ಕ್ರಿಸ್ಮಸ್ ಆಚರಿಸಿದರು.</p>.<p>ನಗರದ ಗಾಂಧಿ ವೃತ್ತದ ಬಳಿ ಇರುವ ಸೇಂಟ್ ಆ್ಯನ್ಸ್ ಚರ್ಚ್ ಹಾಗೂ ಕೇಂದ್ರ ಬಸ್ ನಿಲ್ದಾಣದ ಬಳಿ ಇರುವ ಸಿಎಸ್ಐ ಚರ್ಚ್, ಕೆಕೆಜಿಎಸ್ ಬಳಿ ಇರುವ ಚರ್ಚ್ಗಳನ್ನು ಕ್ರಿಸ್ಮಸ್ ಪ್ರಯುಕ್ತ ವಿಶೇಷವಾಗಿ ಆಲಂಕರಿಸಲಾಗಿತ್ತು. ಬಾಲ ಯೇಸುವಿನ ಜನಿಸಿದ ದಿನದ ಸ್ಮರಣೆಗಾಗಿ ಗೋದಲಿಗಳನ್ನು ಸಿದ್ಧಪಡಿಸಿ, ವಿದ್ಯುತ್ ದೀಪಗಳಿಂದ ಆಲಂಕರಿಸಲಾಗಿತ್ತು. ಚರ್ಚ್ಗಳ ಎದುರು ಆಲಂಕೃತ ಕ್ರಿಸ್ಮಸ್ ಟ್ರೀ ಗಮನ ಸೆಳೆಯಿತು.</p>.<p>ಚರ್ಚ್ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಕ್ಯಾಂಡಲ್ ಬೆಳಗಿದರು. ಸಾಮೂಹಿಕವಾಗಿ ಏಸುಗೀತೆಗಳನ್ನು ಹಾಡಿದರು ಹಾಗೂ ಬೈಬಲ್ ಅನ್ನು ಪಠಿಸಿದರು. ಧರ್ಮಗುರುಗಳ ಆಶೀರ್ವಾದ ಪಡೆದರು. ಪರಸ್ಪರ ಕ್ರಿಸ್ ಮಸ್ ಶುಭಾಶಯ ವಿನಿಮಯ ಮಾಡಿಕೊಂಡರು. ಸಾಂತಾಕ್ಲಾಸ್ ವೇಷದಲ್ಲಿ ಮಕ್ಕಳು ಗಮನ ಸೆಳೆದರು. ಚರ್ಚ್ ಎದುರು ಬಂದುಗಳು, ಸ್ನೇಹಿತರೊಂದಿಗೆ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು. </p>.<p>ಫಾದರ್ ಜೋಸೆಫ್, ಫಾ.ಪ್ರಾನ್ಸಿಸ್ ಮಿನೇಜಸ್, ಫಾ. ಟಿಯೋಲ್ ಮಚಾದೋ, ಫಾ.ಕಿರಣ್, ಫಾ.ಅಂಥೋನಿ, ಫಾ.ಸಂತೋಷ, ಫಾ.ಲ್ಯಾನ್ಸಿ, ಫಾ.ಸಂತೋಷ ಫರ್ನಾಂಡಿಸ್, ಫಾ.ಜೀವನ್, ಫಾ.ಟಾಮ್, ಫಾ.ಸುಮನ್ ಮೊದಲಾದ ಧರ್ಮಗುರುಗಳು ಆಗಮಿಸಿದ ಭಕ್ತರಿಗೆ ಬೋಧನೆ ಹಾಗೂ ಆಶೀರ್ವಾದ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ನಗರದಲ್ಲಿ ಬುಧವಾರ ಕ್ರೈಸ್ತರು ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಸಡಗರದಿಂದ ಕ್ರಿಸ್ಮಸ್ ಆಚರಿಸಿದರು.</p>.<p>ನಗರದ ಗಾಂಧಿ ವೃತ್ತದ ಬಳಿ ಇರುವ ಸೇಂಟ್ ಆ್ಯನ್ಸ್ ಚರ್ಚ್ ಹಾಗೂ ಕೇಂದ್ರ ಬಸ್ ನಿಲ್ದಾಣದ ಬಳಿ ಇರುವ ಸಿಎಸ್ಐ ಚರ್ಚ್, ಕೆಕೆಜಿಎಸ್ ಬಳಿ ಇರುವ ಚರ್ಚ್ಗಳನ್ನು ಕ್ರಿಸ್ಮಸ್ ಪ್ರಯುಕ್ತ ವಿಶೇಷವಾಗಿ ಆಲಂಕರಿಸಲಾಗಿತ್ತು. ಬಾಲ ಯೇಸುವಿನ ಜನಿಸಿದ ದಿನದ ಸ್ಮರಣೆಗಾಗಿ ಗೋದಲಿಗಳನ್ನು ಸಿದ್ಧಪಡಿಸಿ, ವಿದ್ಯುತ್ ದೀಪಗಳಿಂದ ಆಲಂಕರಿಸಲಾಗಿತ್ತು. ಚರ್ಚ್ಗಳ ಎದುರು ಆಲಂಕೃತ ಕ್ರಿಸ್ಮಸ್ ಟ್ರೀ ಗಮನ ಸೆಳೆಯಿತು.</p>.<p>ಚರ್ಚ್ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಕ್ಯಾಂಡಲ್ ಬೆಳಗಿದರು. ಸಾಮೂಹಿಕವಾಗಿ ಏಸುಗೀತೆಗಳನ್ನು ಹಾಡಿದರು ಹಾಗೂ ಬೈಬಲ್ ಅನ್ನು ಪಠಿಸಿದರು. ಧರ್ಮಗುರುಗಳ ಆಶೀರ್ವಾದ ಪಡೆದರು. ಪರಸ್ಪರ ಕ್ರಿಸ್ ಮಸ್ ಶುಭಾಶಯ ವಿನಿಮಯ ಮಾಡಿಕೊಂಡರು. ಸಾಂತಾಕ್ಲಾಸ್ ವೇಷದಲ್ಲಿ ಮಕ್ಕಳು ಗಮನ ಸೆಳೆದರು. ಚರ್ಚ್ ಎದುರು ಬಂದುಗಳು, ಸ್ನೇಹಿತರೊಂದಿಗೆ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು. </p>.<p>ಫಾದರ್ ಜೋಸೆಫ್, ಫಾ.ಪ್ರಾನ್ಸಿಸ್ ಮಿನೇಜಸ್, ಫಾ. ಟಿಯೋಲ್ ಮಚಾದೋ, ಫಾ.ಕಿರಣ್, ಫಾ.ಅಂಥೋನಿ, ಫಾ.ಸಂತೋಷ, ಫಾ.ಲ್ಯಾನ್ಸಿ, ಫಾ.ಸಂತೋಷ ಫರ್ನಾಂಡಿಸ್, ಫಾ.ಜೀವನ್, ಫಾ.ಟಾಮ್, ಫಾ.ಸುಮನ್ ಮೊದಲಾದ ಧರ್ಮಗುರುಗಳು ಆಗಮಿಸಿದ ಭಕ್ತರಿಗೆ ಬೋಧನೆ ಹಾಗೂ ಆಶೀರ್ವಾದ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>