<p><strong>ವಿಜಯಪುರ:</strong> ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಕೂರಿಸುವ ಪ್ರತಿ ಗಣೇಶನ ಮೂರ್ತಿ ಬಳಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಫೋಟೊ ಇಡಬೇಕು. ಫೋಟೊ ನಾನೇ ಕೊಡುತ್ತೇನೆ ಎಂದುಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.</p>.<p>ನಗರದ ಫ.ಗು.ಹಳಕಟ್ಟಿ ಸಭಾಭವನದಲ್ಲಿ ಭಾನುವಾರ ಸ್ವಾಮಿ ವಿವೇಕಾನಂದ ಸೇನೆ ಆಯೋಜಿದ್ದ ಶ್ರೀ ಗಜಾನನ ಮಹಾಮಂಡಳ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಅಂಡಮಾನ್ ಜೈಲಿನಲ್ಲಿ 10ವರ್ಷ ಜೈಲುವಾಸ ಅನುಭವಿಸುವುದು ಬೇಡ, ಹೊರಗೆ ಬಂದು ಈ ದೇಶಕ್ಕಾಗಿ ಏನಾದರೂ ಮಾಡೋಣ ಎಂಬ ಉದ್ದೇಶದಿಂದ ಸಾವರ್ಕರ್ ಬ್ರಿಟಿಷರ ಕ್ಷಮಾಪಣೆ ಕೇಳಿದ್ದರೇ ಹೊರತು ಶಿಕ್ಷೆ ಅನುಭವಿಸಲು ಹೆದರಿ ಅಲ್ಲ ಎಂದು ಹೇಳಿದರು.</p>.<p>ಮಸೀದಿ ಮೇಲಿನ ಮೈಕ್ ಬಂದ್ ಆಗುವವರಿಗೂ ಗಣಪತಿ ಪೆಂಡಾಲ್ನಲ್ಲಿ ಡಿಜೆ ಬಂದ್ ಮಾಡಲ್ಲ. ನಾನು ಒಂದು ವೇಳೆ ಸಿಎಂ ಆಗಿದ್ದರೇ ಗಣಪತಿ ಕೂರಿಸಲು ಯಾವುದೇ ಅನುಮತಿ ಪಡೆಯುವ ಅಗತ್ಯವೇ ಇರಲಿಲ್ಲ ಎಂದರು.</p>.<p>ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಗಣೇಶೋತ್ಸವ ಆಚರಣೆ ಸಾಧ್ಯವಾಗಿರಲಿಲ್ಲ. ಈ ವರ್ಷ ಎಲ್ಲರೂ ಭಕ್ತಿ,ಭಾವದಿಂದ ಗಣೇಶೋತ್ಸವ ಆಚರಿಸಬೇಕು. ಸಾರ್ವಜನಿಕ ಗಣೇಶೋತ್ಸವ ಆಚರಣೆ ವೇಳೆ ಸಂಘಟಕರು ಯಾವುದೇ ಕಾರಣಕ್ಕೂದಾರು ಕುಡಿಯುವುದು, ಕೋಳಿ ಕುರಿ ತಿನ್ನೋದು,ಇಸ್ಪೀಟು ಆಡೋದು ಬೇಡ ಎಂದರು.</p>.<p>ನಾಲ್ಕು ವರ್ಷದಿಂದ ವಿಜಯಪುರದಲ್ಲಿ ಯಾವುದೇ ಗಲಭೆ, ಗುಂಡಾಗಿರಿ ತೊಂದರೆ ಇಲ್ಲ.ಒಳ್ಳೆಯ ಅಧಿಕಾರಿಗಳು ನಗರದಲ್ಲಿ ಇರುವುದರಿಂದ ಯಾವುದೇ ಗಲಭೆ, ಗಲಾಟೆ ಆಗಿಲ್ಲ ಎಂದರು.</p>.<p>ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸುವವರಿಗೆ ಕನಿಷ್ಠ ₹5 ಸಾವಿರ ದೇಣಿಗೆ ನೀಡಲಾಗುವುದು. ಗಣೇಶೋತ್ಸವದಲ್ಲಿ ಯಾವುದೇ ಪ್ರಚೋದನೆಗೆ ಒಳಗಾಗಬೇಡಿ, ಭಕ್ತಿ ಗೀತೆ ಹಾಕಿ ಗೌರವದಿಂದ ಗಣೇಶೋತ್ಸವ ಆಚರಿಸಿ ಎಂದರು.</p>.<p>ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷರಾಘವ ಅಣ್ಣಿಗೇರಿ ಮಾತನಾಡಿ,ಯತ್ನಾಳ ಶಾಸಕರಾದ ಬಳಿಕ ನಗರದಲ್ಲಿ ಯಾವುದೇ ಗಲಭೆ, ಗಲಾಟೆಗಳು ಆಗಿಲ್ಲ. ಹೀಗಾಗಿ ಶಾಂತಿಯಿಂದ ಗಣೇಶೋತ್ಸವ ಆಚರಿಸಬೇಕು.ಯಾವುದೇ ಕೋಮಿನವರಿಗೆ ತೊಂದರೆಯಾಗದಂತೆ ಅಚರಿಸಬೇಕು ಎಂದರು.</p>.<p>ಏಳು ದಿನ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಉತ್ಸವ ಆಚರಿಸಬೇಕು ಎಂದರು.</p>.<p>ತಾಜ್ ಬಾವಡಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಬೇಡ. ಅದರ ಹೊರಗಡೆ ಪಾಲಿಕೆಯಿಂದ ಕೃತಕ ಹೊಂಡ ನಿರ್ಮಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.</p>.<p>ಎಲ್ಲ ಗಣೇಶ ಮೂರ್ತಿಗಳ ಮೆರವಣಿಗೆ ಸಿದ್ದೇಶ್ವರ ಗುಡಿ ಎದುರು ಹಾದು ಹೋಗಲು ವ್ಯವಸ್ಥೆ ಮಾಡಲಾಗುವುದು. ಅತ್ಯುತ್ತಮವಾಗಿ ಡೆಕೋರೇಷನ್ ಮಾಡಿರುವ ಗಣಪತಿ ಮಂಡಳಿಗೆ ಪ್ರಶಸ್ತಿ, ಸನ್ಮಾನ ಮಾಡಲಾಗುವುದು ಎಂದರು.</p>.<p>ಡಿವೈ ಎಸ್ಪಿ ಸಿದ್ದೇಶ್ವರ ಮಾತನಾಡಿ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಶಾಸಕರಿಗೆ ಕೆಟ್ಟ ಹೆಸರು ಬರದಂತೆ ಸುಪ್ರೀಂ ಕೋರ್ಟ್ ಆದೇಶದಂತೆ ಗಣೇಶೋತ್ಸವವನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ಹೇಳಿದರು.</p>.<p>ತಹಶೀಲ್ದಾರ್ ಸಿದ್ದರಾಮ ಬೋಸಗಿ, ಹೆಸ್ಕಾಂ ಎಇ ರಾಜಶೇಖರ ಹಂಡಿ, ಬಸಯ್ಯ ಹಿರೇಮಠ, ಪೊಲೀಸ್ ಅಧಿಕಾರಿ ಆರೀಫ್ ಮುಶ್ರೀಫ್, ಪರಶುರಾಮ ರಜಪೂತ, ಸಿದ್ದರಾಪ್ಪ ಉಪ್ಪಿನ ಇದ್ದರು.</p>.<p>ಶ್ರೀ ಗಜಾನನ ಮಹಾಮಂಡಳಿ ಅಧ್ಯಕ್ಷರನ್ನಾಗಿ ಪ್ರಶಾಂತ ಬಡಿಗೇರಿ ಸೇರಿದಂತೆ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.</p>.<p><strong>****</strong></p>.<p>ಸಾವರ್ಕರ್ ಚಪ್ಪಲಿ ಕಿಮ್ಮತ್ತು ಇಲ್ಲದವರು ಅವರ ಬಗ್ಗೆ ಮಾತನಾಡುತ್ತಾರೆ.ಅವರನ್ನು ಟೀಕಸುವವರು ಕೇವಲ ಒಂದು ವಾರ ಹೋಗಿ ಅಂಡಮಾನ್ ಜೈಲಿನಲ್ಲಿ ಇದ್ದು ಬನ್ನಿ</p>.<p><strong>–ಬಸನಗೌಡ ಪಾಟೀಲ ಯತ್ನಾಳ,ಶಾಸಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಕೂರಿಸುವ ಪ್ರತಿ ಗಣೇಶನ ಮೂರ್ತಿ ಬಳಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಫೋಟೊ ಇಡಬೇಕು. ಫೋಟೊ ನಾನೇ ಕೊಡುತ್ತೇನೆ ಎಂದುಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.</p>.<p>ನಗರದ ಫ.ಗು.ಹಳಕಟ್ಟಿ ಸಭಾಭವನದಲ್ಲಿ ಭಾನುವಾರ ಸ್ವಾಮಿ ವಿವೇಕಾನಂದ ಸೇನೆ ಆಯೋಜಿದ್ದ ಶ್ರೀ ಗಜಾನನ ಮಹಾಮಂಡಳ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಅಂಡಮಾನ್ ಜೈಲಿನಲ್ಲಿ 10ವರ್ಷ ಜೈಲುವಾಸ ಅನುಭವಿಸುವುದು ಬೇಡ, ಹೊರಗೆ ಬಂದು ಈ ದೇಶಕ್ಕಾಗಿ ಏನಾದರೂ ಮಾಡೋಣ ಎಂಬ ಉದ್ದೇಶದಿಂದ ಸಾವರ್ಕರ್ ಬ್ರಿಟಿಷರ ಕ್ಷಮಾಪಣೆ ಕೇಳಿದ್ದರೇ ಹೊರತು ಶಿಕ್ಷೆ ಅನುಭವಿಸಲು ಹೆದರಿ ಅಲ್ಲ ಎಂದು ಹೇಳಿದರು.</p>.<p>ಮಸೀದಿ ಮೇಲಿನ ಮೈಕ್ ಬಂದ್ ಆಗುವವರಿಗೂ ಗಣಪತಿ ಪೆಂಡಾಲ್ನಲ್ಲಿ ಡಿಜೆ ಬಂದ್ ಮಾಡಲ್ಲ. ನಾನು ಒಂದು ವೇಳೆ ಸಿಎಂ ಆಗಿದ್ದರೇ ಗಣಪತಿ ಕೂರಿಸಲು ಯಾವುದೇ ಅನುಮತಿ ಪಡೆಯುವ ಅಗತ್ಯವೇ ಇರಲಿಲ್ಲ ಎಂದರು.</p>.<p>ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಗಣೇಶೋತ್ಸವ ಆಚರಣೆ ಸಾಧ್ಯವಾಗಿರಲಿಲ್ಲ. ಈ ವರ್ಷ ಎಲ್ಲರೂ ಭಕ್ತಿ,ಭಾವದಿಂದ ಗಣೇಶೋತ್ಸವ ಆಚರಿಸಬೇಕು. ಸಾರ್ವಜನಿಕ ಗಣೇಶೋತ್ಸವ ಆಚರಣೆ ವೇಳೆ ಸಂಘಟಕರು ಯಾವುದೇ ಕಾರಣಕ್ಕೂದಾರು ಕುಡಿಯುವುದು, ಕೋಳಿ ಕುರಿ ತಿನ್ನೋದು,ಇಸ್ಪೀಟು ಆಡೋದು ಬೇಡ ಎಂದರು.</p>.<p>ನಾಲ್ಕು ವರ್ಷದಿಂದ ವಿಜಯಪುರದಲ್ಲಿ ಯಾವುದೇ ಗಲಭೆ, ಗುಂಡಾಗಿರಿ ತೊಂದರೆ ಇಲ್ಲ.ಒಳ್ಳೆಯ ಅಧಿಕಾರಿಗಳು ನಗರದಲ್ಲಿ ಇರುವುದರಿಂದ ಯಾವುದೇ ಗಲಭೆ, ಗಲಾಟೆ ಆಗಿಲ್ಲ ಎಂದರು.</p>.<p>ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸುವವರಿಗೆ ಕನಿಷ್ಠ ₹5 ಸಾವಿರ ದೇಣಿಗೆ ನೀಡಲಾಗುವುದು. ಗಣೇಶೋತ್ಸವದಲ್ಲಿ ಯಾವುದೇ ಪ್ರಚೋದನೆಗೆ ಒಳಗಾಗಬೇಡಿ, ಭಕ್ತಿ ಗೀತೆ ಹಾಕಿ ಗೌರವದಿಂದ ಗಣೇಶೋತ್ಸವ ಆಚರಿಸಿ ಎಂದರು.</p>.<p>ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷರಾಘವ ಅಣ್ಣಿಗೇರಿ ಮಾತನಾಡಿ,ಯತ್ನಾಳ ಶಾಸಕರಾದ ಬಳಿಕ ನಗರದಲ್ಲಿ ಯಾವುದೇ ಗಲಭೆ, ಗಲಾಟೆಗಳು ಆಗಿಲ್ಲ. ಹೀಗಾಗಿ ಶಾಂತಿಯಿಂದ ಗಣೇಶೋತ್ಸವ ಆಚರಿಸಬೇಕು.ಯಾವುದೇ ಕೋಮಿನವರಿಗೆ ತೊಂದರೆಯಾಗದಂತೆ ಅಚರಿಸಬೇಕು ಎಂದರು.</p>.<p>ಏಳು ದಿನ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಉತ್ಸವ ಆಚರಿಸಬೇಕು ಎಂದರು.</p>.<p>ತಾಜ್ ಬಾವಡಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಬೇಡ. ಅದರ ಹೊರಗಡೆ ಪಾಲಿಕೆಯಿಂದ ಕೃತಕ ಹೊಂಡ ನಿರ್ಮಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.</p>.<p>ಎಲ್ಲ ಗಣೇಶ ಮೂರ್ತಿಗಳ ಮೆರವಣಿಗೆ ಸಿದ್ದೇಶ್ವರ ಗುಡಿ ಎದುರು ಹಾದು ಹೋಗಲು ವ್ಯವಸ್ಥೆ ಮಾಡಲಾಗುವುದು. ಅತ್ಯುತ್ತಮವಾಗಿ ಡೆಕೋರೇಷನ್ ಮಾಡಿರುವ ಗಣಪತಿ ಮಂಡಳಿಗೆ ಪ್ರಶಸ್ತಿ, ಸನ್ಮಾನ ಮಾಡಲಾಗುವುದು ಎಂದರು.</p>.<p>ಡಿವೈ ಎಸ್ಪಿ ಸಿದ್ದೇಶ್ವರ ಮಾತನಾಡಿ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಶಾಸಕರಿಗೆ ಕೆಟ್ಟ ಹೆಸರು ಬರದಂತೆ ಸುಪ್ರೀಂ ಕೋರ್ಟ್ ಆದೇಶದಂತೆ ಗಣೇಶೋತ್ಸವವನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ಹೇಳಿದರು.</p>.<p>ತಹಶೀಲ್ದಾರ್ ಸಿದ್ದರಾಮ ಬೋಸಗಿ, ಹೆಸ್ಕಾಂ ಎಇ ರಾಜಶೇಖರ ಹಂಡಿ, ಬಸಯ್ಯ ಹಿರೇಮಠ, ಪೊಲೀಸ್ ಅಧಿಕಾರಿ ಆರೀಫ್ ಮುಶ್ರೀಫ್, ಪರಶುರಾಮ ರಜಪೂತ, ಸಿದ್ದರಾಪ್ಪ ಉಪ್ಪಿನ ಇದ್ದರು.</p>.<p>ಶ್ರೀ ಗಜಾನನ ಮಹಾಮಂಡಳಿ ಅಧ್ಯಕ್ಷರನ್ನಾಗಿ ಪ್ರಶಾಂತ ಬಡಿಗೇರಿ ಸೇರಿದಂತೆ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.</p>.<p><strong>****</strong></p>.<p>ಸಾವರ್ಕರ್ ಚಪ್ಪಲಿ ಕಿಮ್ಮತ್ತು ಇಲ್ಲದವರು ಅವರ ಬಗ್ಗೆ ಮಾತನಾಡುತ್ತಾರೆ.ಅವರನ್ನು ಟೀಕಸುವವರು ಕೇವಲ ಒಂದು ವಾರ ಹೋಗಿ ಅಂಡಮಾನ್ ಜೈಲಿನಲ್ಲಿ ಇದ್ದು ಬನ್ನಿ</p>.<p><strong>–ಬಸನಗೌಡ ಪಾಟೀಲ ಯತ್ನಾಳ,ಶಾಸಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>