ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT
ADVERTISEMENT

ವಿಜಯಪುರ | ಹಳೆಯ, ತೂತುಬಿದ್ದ ಕಳಪೆ ಪರದೆ ಅಳವಡಿಕೆ

ಬಿಸಿಲಿನಿಂದ ರಕ್ಷಣೆಗೆ ವಿಜಯಪುರ ನಗರದ ಪ್ರಮುಖ ವೃತ್ತಗಳಲ್ಲಿ ನೆರಳಿನ ವ್ಯವಸ್ಥೆ
Published : 28 ಮಾರ್ಚ್ 2025, 6:39 IST
Last Updated : 28 ಮಾರ್ಚ್ 2025, 6:39 IST
ಫಾಲೋ ಮಾಡಿ
Comments
ವಿಜಯಪುರ ನಗರದ ಗಾಂಧಿ ಚೌಕಿಯಲ್ಲಿ ಗುರುವಾರ ಅಳವಡಿಸಿರುವ ಹಳೆಯ ಹಸಿರಿನ ಪರದೆ ತೂತು ಬಿದ್ದಿದೆ –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರ ನಗರದ ಗಾಂಧಿ ಚೌಕಿಯಲ್ಲಿ ಗುರುವಾರ ಅಳವಡಿಸಿರುವ ಹಳೆಯ ಹಸಿರಿನ ಪರದೆ ತೂತು ಬಿದ್ದಿದೆ –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ನೆರಳಿನ ವ್ಯವಸ್ಥೆಗಾಗಿ ₹15 ಲಕ್ಷ ವೆಚ್ಚ ಪ್ರಮುಖ ವೃತ್ತಗಳಲ್ಲಿ ನೆರಳಿನ ಪರದೆ ಗುತ್ತಿಗೆದಾರನ ಕರಾಮತ್ತು; ಕಾಟಾಚಾರಕ್ಕೆ ಅಳವಡಿಕೆ
ಕ್ರಮ ಕೈಗೊಳ್ಳುವೆ: ಮೆಕ್ಕಳಕಿ
ಕಳಪೆ ಗುಣಮಟ್ಟದ ಹಸಿರು ಪರದೆಗಳನ್ನು ಅಳವಡಿಸಿರುವುದು ನನ್ನ ಗಮನಕ್ಕೆ ಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಒಂದು ವೇಳೆ ಕಳಪೆಯಾಗಿದ್ದರೆ ಬದಲಿಸಲು ಗುತ್ತಿಗೆದಾರರಿಗೆ ಸೂಚಿಸುತ್ತೇನೆ’ ಎಂದು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್‌ ಮೆಕ್ಕಳಕಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ವಿಜಯಪುರ ನಗರದ ಕೋರ್ಟ್‌ ಸರ್ಕಲ್‌ ಕೇಂದ್ರ ಬಸ್‌ ನಿಲ್ದಾಣ ಗಾಂಧಿಚೌಕಿ ಬಸವೇಶ್ವರ ವೃತ್ತ ವಾಟರ್‌ ಟ್ಯಾಂಕ್‌ ಇಟಗಿ ಪೆಟ್ರೋಲ್‌ ಪಂ‍‍ಪ್‌ ಸರ್ಕಲ್‌ಗಳಲ್ಲಿ ಈ ಬೇಸಿಗೆಯಲ್ಲಿ ವಾಹನ ಸವಾರರಿಗೆ ಬಿಸಿಲಿನಿಂದ ರಕ್ಷಣೆ ಒದಗಿಸುವುದಕ್ಕಾಗಿ ₹15 ಲಕ್ಷ ಮೊತ್ತದ ಟೆಂಡರ್‌ ಅನ್ನು ತುಪ್ಪದ ಎಂಬುವವರಿಗೆ ಟೆಂಡರ್‌ ನೀಡಲಾಗಿದೆ’ ಎಂದರು. ‘ಕಳೆದ ವರ್ಷವೂ ತುಪ್ಪದ ಅವರೇ ನೆರಳಿನ ವ್ಯವಸ್ಥೆ ಮಾಡಿದ್ದರು. ಬಹಳ ಅಚ್ಚುಕಟ್ಟಾಗಿತ್ತು. ಹೀಗಾಗಿ ಈ ವರ್ಷವೂ ಅವರಿಗೆ ನೀಡಲಾಗಿದೆ. ಕಳಪೆಯಾಗಿದ್ದರೆ ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT