<p><strong>ಸಿಂದಗಿ</strong>: ಮುಖ್ಯಮಂತ್ರಿ ₹50 ಕೋಟಿ ಅನುದಾನವನ್ನು ಪ್ರತಿಯೊಂದು ಮತಕ್ಷೇತ್ರದ ಶಾಸಕ ನಿಧಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ನಮ್ಮ ಮತಕ್ಷೇತ್ರಕ್ಕೆ ಬರಬಹುದಾದ ₹ 50 ಕೋಟಿ ಅನುದಾನದಲ್ಲಿ ₹ 29 ಕೋಟಿಯನ್ನು ಪಟ್ಟಣದ ಅಭಿವೃದ್ಧಿಗಾಗಿ ಕಾಯ್ದಿರಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.</p>.<p>ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಆವರಣದಲ್ಲಿ ಭಾನುವಾರ ₹ 2 ಕೋಟಿ ವೆಚ್ಚದ ಭವನದ ಮುಂದುವರೆದ ಕಾಮಗಾರಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.</p>.<p>ಪಟ್ಟಣದ 15 ಮತ್ತು 16ನೆಯ ವಾರ್ಡ್ ಪರಿಶಿಷ್ಟ ನಿವಾಸಿ ಕಾಲೊನಿಗಳಲ್ಲಿ ₹1 ಕೋಟಿ ವೆಚ್ಚದಲ್ಲಿ ರಸ್ತೆ ಫೆವರ್ಸ್ ಕಾಮಗಾರಿ ಪೂರ್ಣಗೊಂಡಿದೆ. ಎಸ್ಸಿಟಿಪಿ ಯೋಜನೆಯಡಿ ಪರಿಶಿಷ್ಟ ನಿವಾಸಿಗಳ ಕಾಲೊನಿಗಳಲ್ಲಿ ಸಿ.ಸಿ ರಸ್ತೆಗಳಿಗಾಗಿ ತಾಂಬಾ ಗ್ರಾಮದಲ್ಲಿ ₹ 1 ಕೋಟಿ , ಕುಮಸಗಿ ಗ್ರಾಮದಲ್ಲಿ ₹ 50 ಲಕ್ಷ, ನಾಗಾವಿ ಬಿ.ಕೆ, ಬಂಟನೂರ ಗ್ರಾಮಗಳಲ್ಲಿ ₹ 50 ಲಕ್ಷ ಅನುದಾನ ಬಿಡುಗಡೆಗೊಂಡಿದೆ. ಇಡೀ ದೇಶದಲ್ಲಿಯೇ ಎಸ್ಸಿಎಸ್ಟಿಟಿಪಿ ಯೋಜನೆ ಜಾರಿಗೆ ತಂದಿರುವ ಏಕಮೇವ ರಾಜ್ಯ ನಮ್ಮದಾಗಿದೆ. ಈ ಅನುದಾನ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದೆ ಎಂಬ ವಿರೋಧ ಪಕ್ಷದ ಟೀಕೆ ಸತ್ಯಕ್ಕೆ ದೂರ ಎಂದು ಸ್ಪಷ್ಟನೆ ನೀಡಿದರು.</p>.<p>ಸಿಂದಗಿ ನಗರಸಭೆಯಾಗಿ ಮೇಲ್ದರ್ಜೆಗೇರಿದೆ. ಇನ್ನು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೊಳ್ಳುತ್ತದೆ. ಎಲ್ಲ 23 ವಾರ್ಡ್ಗಳನ್ನು ಮಾದರಿಯಾಗಿ ಅಭಿವೃದ್ದಿ ಪ್ರಾರಂಭಗೊಳ್ಳುತ್ತವೆ ಎಂದು ತಿಳಿಸಿದರು.</p>.<p>ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಇಲ್ಲಿಯ ಅಂಬೇಡ್ಕರ್ ಭವನ ನಿರ್ಮಾಣಗೊಂಡು ಹತ್ತು ವರ್ಷಗಳು ಪೂರ್ಣಗೊಂಡಿದ್ದು, ಹಿಂದಿನ ಶಾಸಕ ರಮೇಶ ಭೂಸನೂರ ₹ 1 ಕೋಟಿ ಅನುದಾನ ನೀಡಿದ್ದಾರೆ. ಸಿಂದಗಿಯಲ್ಲಿ ನಿರ್ಮಾಣಗೊಳ್ಳುವ ಬುದ್ಧ ವಿಹಾರಕ್ಕೆ ₹4 ಕೋಟಿ ಅನುದಾನ ಶಾಸಕರು ಬಿಡುಗಡೆಗೊಳಸುವಂತೆ ಅವರು ಮನವಿ ಮಾಡಿಕೊಂಡರು.</p>.<p>‘ಸಮಾಜಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹಾದೇವಪ್ಪ ಅವರು ಬಿಡುಗಡೆಗೊಳಿಸಿದ ₹ 2 ಕೋಟಿ ಅನುದಾನದಲ್ಲಿ ಪಟ್ಟಣದ ಅಂಬೇಡ್ಕರ್ ಭವನದ ಆವರಣದಲ್ಲಿ ಅಂಬೇಡ್ಕರ್ ಗ್ಲಾಸ್ ಹೌಸ್ ನಿರ್ಮಾಣಕ್ಕಾಗಿ ₹1.50 ಕೋಟಿ ಜೊತೆಗೆ ₹ 50 ಲಕ್ಷ ವೆಚ್ಚದಲ್ಲಿ ಭವನ ನವೀಕರಣಗೊಳಿಸಲಾಗುವುದು’ ಎಂದು ತಿಳಿಸಿದರು.</p>.<p>ಪುರಸಭೆ ಮಾಜಿ ಅಧ್ಯಕ್ಷ ಶಾಂತವೀರ ಬಿರಾದಾರ, ಸದಸ್ಯರಾದ ರಾಜಣ್ಣ ನಾರಾಯಣಕರ, ಬಸವರಾಜ ಯರನಾಳ ಹಾಗೂ ಯಮನಪ್ಪ ಹೊಸಮನಿ, ಚಂದ್ರಾಮ ಜಾಬನ್ನವರ, ವಿಠ್ಠಲ ಹೊಸಮನಿ, ಶರಣಪ್ಪ ಸುಲ್ಪಿ, ದೇವಕಿ ಮಣೂರ, ನಿರ್ಮಿತಿ ಕೇಂದ್ರದ ಎಇಇ ಅರವಿಂದ ದನಗೊಂಡ, ಬಾಲಕೃಷ್ಣ ಛಲವಾದಿ ವೇದಿಕೆಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂದಗಿ</strong>: ಮುಖ್ಯಮಂತ್ರಿ ₹50 ಕೋಟಿ ಅನುದಾನವನ್ನು ಪ್ರತಿಯೊಂದು ಮತಕ್ಷೇತ್ರದ ಶಾಸಕ ನಿಧಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ನಮ್ಮ ಮತಕ್ಷೇತ್ರಕ್ಕೆ ಬರಬಹುದಾದ ₹ 50 ಕೋಟಿ ಅನುದಾನದಲ್ಲಿ ₹ 29 ಕೋಟಿಯನ್ನು ಪಟ್ಟಣದ ಅಭಿವೃದ್ಧಿಗಾಗಿ ಕಾಯ್ದಿರಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.</p>.<p>ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಆವರಣದಲ್ಲಿ ಭಾನುವಾರ ₹ 2 ಕೋಟಿ ವೆಚ್ಚದ ಭವನದ ಮುಂದುವರೆದ ಕಾಮಗಾರಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.</p>.<p>ಪಟ್ಟಣದ 15 ಮತ್ತು 16ನೆಯ ವಾರ್ಡ್ ಪರಿಶಿಷ್ಟ ನಿವಾಸಿ ಕಾಲೊನಿಗಳಲ್ಲಿ ₹1 ಕೋಟಿ ವೆಚ್ಚದಲ್ಲಿ ರಸ್ತೆ ಫೆವರ್ಸ್ ಕಾಮಗಾರಿ ಪೂರ್ಣಗೊಂಡಿದೆ. ಎಸ್ಸಿಟಿಪಿ ಯೋಜನೆಯಡಿ ಪರಿಶಿಷ್ಟ ನಿವಾಸಿಗಳ ಕಾಲೊನಿಗಳಲ್ಲಿ ಸಿ.ಸಿ ರಸ್ತೆಗಳಿಗಾಗಿ ತಾಂಬಾ ಗ್ರಾಮದಲ್ಲಿ ₹ 1 ಕೋಟಿ , ಕುಮಸಗಿ ಗ್ರಾಮದಲ್ಲಿ ₹ 50 ಲಕ್ಷ, ನಾಗಾವಿ ಬಿ.ಕೆ, ಬಂಟನೂರ ಗ್ರಾಮಗಳಲ್ಲಿ ₹ 50 ಲಕ್ಷ ಅನುದಾನ ಬಿಡುಗಡೆಗೊಂಡಿದೆ. ಇಡೀ ದೇಶದಲ್ಲಿಯೇ ಎಸ್ಸಿಎಸ್ಟಿಟಿಪಿ ಯೋಜನೆ ಜಾರಿಗೆ ತಂದಿರುವ ಏಕಮೇವ ರಾಜ್ಯ ನಮ್ಮದಾಗಿದೆ. ಈ ಅನುದಾನ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದೆ ಎಂಬ ವಿರೋಧ ಪಕ್ಷದ ಟೀಕೆ ಸತ್ಯಕ್ಕೆ ದೂರ ಎಂದು ಸ್ಪಷ್ಟನೆ ನೀಡಿದರು.</p>.<p>ಸಿಂದಗಿ ನಗರಸಭೆಯಾಗಿ ಮೇಲ್ದರ್ಜೆಗೇರಿದೆ. ಇನ್ನು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೊಳ್ಳುತ್ತದೆ. ಎಲ್ಲ 23 ವಾರ್ಡ್ಗಳನ್ನು ಮಾದರಿಯಾಗಿ ಅಭಿವೃದ್ದಿ ಪ್ರಾರಂಭಗೊಳ್ಳುತ್ತವೆ ಎಂದು ತಿಳಿಸಿದರು.</p>.<p>ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಇಲ್ಲಿಯ ಅಂಬೇಡ್ಕರ್ ಭವನ ನಿರ್ಮಾಣಗೊಂಡು ಹತ್ತು ವರ್ಷಗಳು ಪೂರ್ಣಗೊಂಡಿದ್ದು, ಹಿಂದಿನ ಶಾಸಕ ರಮೇಶ ಭೂಸನೂರ ₹ 1 ಕೋಟಿ ಅನುದಾನ ನೀಡಿದ್ದಾರೆ. ಸಿಂದಗಿಯಲ್ಲಿ ನಿರ್ಮಾಣಗೊಳ್ಳುವ ಬುದ್ಧ ವಿಹಾರಕ್ಕೆ ₹4 ಕೋಟಿ ಅನುದಾನ ಶಾಸಕರು ಬಿಡುಗಡೆಗೊಳಸುವಂತೆ ಅವರು ಮನವಿ ಮಾಡಿಕೊಂಡರು.</p>.<p>‘ಸಮಾಜಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹಾದೇವಪ್ಪ ಅವರು ಬಿಡುಗಡೆಗೊಳಿಸಿದ ₹ 2 ಕೋಟಿ ಅನುದಾನದಲ್ಲಿ ಪಟ್ಟಣದ ಅಂಬೇಡ್ಕರ್ ಭವನದ ಆವರಣದಲ್ಲಿ ಅಂಬೇಡ್ಕರ್ ಗ್ಲಾಸ್ ಹೌಸ್ ನಿರ್ಮಾಣಕ್ಕಾಗಿ ₹1.50 ಕೋಟಿ ಜೊತೆಗೆ ₹ 50 ಲಕ್ಷ ವೆಚ್ಚದಲ್ಲಿ ಭವನ ನವೀಕರಣಗೊಳಿಸಲಾಗುವುದು’ ಎಂದು ತಿಳಿಸಿದರು.</p>.<p>ಪುರಸಭೆ ಮಾಜಿ ಅಧ್ಯಕ್ಷ ಶಾಂತವೀರ ಬಿರಾದಾರ, ಸದಸ್ಯರಾದ ರಾಜಣ್ಣ ನಾರಾಯಣಕರ, ಬಸವರಾಜ ಯರನಾಳ ಹಾಗೂ ಯಮನಪ್ಪ ಹೊಸಮನಿ, ಚಂದ್ರಾಮ ಜಾಬನ್ನವರ, ವಿಠ್ಠಲ ಹೊಸಮನಿ, ಶರಣಪ್ಪ ಸುಲ್ಪಿ, ದೇವಕಿ ಮಣೂರ, ನಿರ್ಮಿತಿ ಕೇಂದ್ರದ ಎಇಇ ಅರವಿಂದ ದನಗೊಂಡ, ಬಾಲಕೃಷ್ಣ ಛಲವಾದಿ ವೇದಿಕೆಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>