ಐತಿಹಾಸಿಕ ಈ ದೇವಸ್ಥಾನಗಳ ಸಮುಚ್ಛಯವನ್ನು ಮುಂದಿನ ಪೀಳಿಗೆಗೆ ರಕ್ಷಿಸಬೇಕು, ಸಂಪೂರ್ಣ ಪಾಳು ಬಿದ್ದಿರುವ ಭ್ರಮರಾಂಭ ದೇವಸ್ಥಾನ ಸೇರಿ ದೇವಸ್ಥಾನಗಳ ಜೀರ್ಣೋದ್ಧಾರದ ಬಾಕಿ ಕಾಮಗಾರಿ ಪೂರ್ಣಗೊಳಿಸಬೇಕು, ಶಿಖರ ನಿರ್ಮಿಸಬೇಕು, ಸ್ಥಳದ ಐತಿಹಾಸಿಕ ಹಿನ್ನಲೆ, ಶಾಸನದ ಬಗ್ಗೆ ನಾಮಫಲಕ ಅಳವಡಿಸಬೇಕು, ದೇವಸ್ಥಾನಕ್ಕೆ ಪ್ರಚಾರ ಸಿಗಬೇಕು ಎಂದು ಗ್ರಾಮದ ರಾಮನಗೌಡ ಪಾಟೀಲ, ಮಹಾಂತೇಶ ಒಣರೊಟ್ಟಿ ಒತ್ತಾಯಿಸಿದರು.