<p><strong>ವಿಜಯಪುರ:</strong> ‘ಬಿಹಾರದಲ್ಲಿ ಕೆಲಸ ಸಿಗಲಿಲ್ಲ. ಕೂಲಿಗೆಲಸ ಸಿಕ್ಕರೂ ಪರವಾಗಿಲ್ಲ ಎಂದು ಸ್ನೇಹಿತರಿಂದ ಸಾಲ ಪಡೆದು ವಿಜಯಪುರಕ್ಕೆ ಬಂದೆವು. ಬಡತನದ ಮಧ್ಯೆಯೇ ಬದುಕು ಕಟ್ಟಿಕೊಂಡೆವು. ಆದರೆ,<br>ನಮ್ಮೊಂದಿಗೆ ಬಂದವರೇ ಕಣ್ಣೆದುರೇ ಪ್ರಾಣ ಕಳೆದುಕೊಂಡಿದ್ದಾರೆ. ಏನು ಮಾಡಬೇಕೆಂದು ದಿಕ್ಕೇ ತೋಚುತ್ತಿಲ್ಲ’.</p><p>ನಗರದ ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿನ ‘ರಾಜ್ ಗುರು ಫುಡ್ಸ್’ ಗೋದಾಮಿನಲ್ಲಿ ಮೆಕ್ಕೆಜೋಳದ ರಾಶಿಯಲ್ಲಿ ಸಿಲುಕಿ ಸಾವನ್ನಪ್ಪಿದ ಏಳು ಕಾರ್ಮಿಕರ ಆಪ್ತರು ವ್ಯಕ್ತಪಡಿಸಿದ ನೋವು ಇದು.</p>.ವಿಜಯಪುರ ಗೋದಾಮು ದುರಂತ: ಏಳು ಸಾವು– ಮೃತರ ಕುಟುಂಬಗಳಿಗೆ ತಲಾ ₹7 ಲಕ್ಷ ಪರಿಹಾರ.ವಿಜಯಪುರ: ಗೋದಾಮು ಮಾಲೀಕನ ಬಂಧನಕ್ಕೆ ಆಗ್ರಹ. <p>ಆ ಗೋದಾಮಿನಲ್ಲಿ ದುಡಿಯುವ ಬಿಹಾರದ 150ಕ್ಕೂ ಹೆಚ್ಚು ಕಾರ್ಮಿಕರಲ್ಲಿ ಬಹುತೇಕರು 20 ರಿಂದ 35 ವರ್ಷ ವಯಸ್ಸಿನವರು. ಹತ್ತಾರು ವರ್ಷಗಳಿಂದ ಇಲ್ಲೇ ಕೂಲಿ ಮಾಡಿ, ಬದುಕು ಕಟ್ಟಿಕೊಂಡವರು.</p><p>ಊಟ ಮಾಡದೇ ಮತ್ತು ನೀರು ಕುಡಿಯದೇ ರಾತ್ರಿಯಿಡೀ ಅಲ್ಲಿ ಜಮಾವಣೆಗೊಂಡಿದ್ದ ಕಾರ್ಮಿಕರು, ‘ನಮ್ಮ ಆಪ್ತರು ಬದುಕಿ ಬರಲಿ. ಅವರಿಗೆ ಯಾವ ಸಮಸ್ಯೆಯೂ ಕಾಡದಿರಲಿ’ ಎಂದು ಪ್ರಾರ್ಥಿಸಿದರು.</p><p>‘ಮೃತರ ಕುಟುಂಬದವರಿಗೆ ಏನೆಂದು ಹೇಳಿ ಸಂತೈಸಬೇಕು ಎಂಬುದು ತಿಳಿಯುತ್ತಿಲ್ಲ. ಜೊತೆಗೆ ನಮ್ಮ ಮನೆಯಲ್ಲೂ ವಾಪಸ್ ಊರಿಗೆ ಬನ್ನಿ, ಹೇಗಾದರೂ ಮಾಡಿ ಇಲ್ಲಿಯೇ ಬದುಕಿದರಾಯಿತು ಎಂದು ಒಂದೇ ಸಮನೆ ಗೋಳಿಡುತ್ತಿದ್ದಾರೆ’ ಎಂದು ಕೂಲಿಕಾರ್ಮಿಕ ಸಿಯಾರಾಮ್ ಮುಖಿಯಾ ‘ಪ್ರಜಾವಾಣಿ’ಗೆ ತಿಳಿಸಿದರು.</p><p>‘ಮನೆಯಲ್ಲಿ ವಯಸ್ಸಾದ ಅಪ್ಪ, ಅಮ್ಮ, ನನ್ನನ್ನೇ ನಂಬಿರುವ ಪತ್ನಿ, ಮಕ್ಕಳನ್ನು ಸಾಕಲು ರಜೆಯನ್ನೂ ಪಡೆಯದೇ ದುಡಿಯುತ್ತಿರುವೆ. ಇಲ್ಲಿನ ದುರ್ಘಟನೆ ದಿಕ್ಕೇ ತೋಚುತ್ತಿಲ್ಲ. ಇಲ್ಲಿಯೇ ಇರಬೇಕೆ ಅಥವಾ ಊರಿಗೆ ಹೋಗಬಿಡಲೇ ಎಂಬ ಚಿಂತೆ ಕಾಡುತ್ತಿದೆ’ ಎಂದರು.</p><p><strong>ಧ್ವನಿ ಕೇಳಿಸುತ್ತಿತ್ತು: </strong></p><p><strong>ಘಟನೆಯನ್ನು ನೆನಪಿಸಿಕೊಂಡ ಬಿಹಾರದ ಸಮಸ್ತಿಪುರ ಜಿಲ್ಲೆಯ ಪಟಡ್ದಿಹಾ ಗ್ರಾಮದ ಕೂಲಿಕಾರ್ಮಿಕ ಮುಖೇಶ್ ಯಾದವ್, ‘ಮೆಕ್ಕೆಜೋಳದ ರಾಶಿಯಲ್ಲಿ ಸಿಲುಕಿದವರು ರಕ್ಷಿಸುವಂತೆ ಅಂಗಲಾಚುತ್ತಿದ್ದರು. ಆದರೆ, ಅಷ್ಟರಲ್ಲಿ ಟನ್ಗಟ್ಟಲೇ ಮೆಕ್ಕೆಜೋಳ ಬಿದ್ದು, ಉಸಿರು ಚೆಲ್ಲಿದರು’ ಎಂದರು.</strong></p><p>‘ಘಟನೆ ನಡೆದ ಕ್ಷಣ ಎಲ್ಲರೂ ಹೊರಗೆ ಓಡಿ ಜೀವ ಉಳಿಸಿಕೊಂಡಿದ್ದೇವೆ. ರಾಶಿಯಲ್ಲಿ ಸಿಲುಕಿದ್ದ ನಾಲ್ವರ ಕೈ, ಕಾಲು, ತಲೆ ಎಳೆದು ರಕ್ಷಿಸಿದ್ದೇವೆ’ ಎಂದರು.</p><p>‘ಮುಂಜಾನೆ 9 ರಿಂದ ರಾತ್ರಿ 12ರವರೆಗೆ ಗೋದಾಮಿನಲ್ಲಿ ಪ್ರತಿ ದಿನ ದುಡಿದರೆ, ₹500 ರಿಂದ ₹600 ಕೂಲಿ ಸಿಗುತ್ತದೆ. ಅದರಲ್ಲಿ ₹ 100 ಪ್ರತಿದಿನ ಊಟ, ಉಪಾಹಾರಕ್ಕೆ ಖರ್ಚಾಗುತ್ತದೆ. ಉಳಿದ ಹಣವನ್ನು ಕೂಡಿಸಿಟ್ಟು, ಊರಿನಲ್ಲಿರುವ ಕುಟುಂಬಕ್ಕೆ ಕಳುಹಿಸುತ್ತೇವೆ’ ಎಂದರು.</p><p>‘ವರ್ಷದಲ್ಲಿ ಒಂದೆರಡು ಬಾರಿ ಮಾತ್ರ ಊರಿಗೆ ಹೋಗಿ ಬರುತ್ತೇವೆ. ಊರಲ್ಲಿ ಯಾವುದೇ ಕೆಲಸ ಇಲ್ಲ. ಅಲ್ಲಿ ಕೂಲಿ ಕೆಲಸವೂ ಇಲ್ಲ. ಒಂದು ವೇಳೆ ಸಿಕ್ಕರೂ ₹ 200 ರಿಂದ ₹ 300 ಮಾತ್ರ. ಊರಿನಲ್ಲಿ ಅರ್ಧ ಎಕರೆ ಜಮೀನು ಇದೆ. ನಾಲ್ವರು ಸಹೋದರರು ಇದ್ದಾರೆ, ಬದುಕುವುದು ಹೇಗೆ? ಊರಲ್ಲಿ ಇದ್ದರೆ ಏನೂ ಪ್ರಯೋಜನವಿಲ್ಲ, ಕೂಲಿಗಾಗಿ ಇಲ್ಲಿಗೆ ಬಂದಿದ್ದೇವೆ’ ಎಂದು ಕಾರ್ಮಿಕ ಗಜೇಂದ್ರ ಯಾದವ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ‘ಬಿಹಾರದಲ್ಲಿ ಕೆಲಸ ಸಿಗಲಿಲ್ಲ. ಕೂಲಿಗೆಲಸ ಸಿಕ್ಕರೂ ಪರವಾಗಿಲ್ಲ ಎಂದು ಸ್ನೇಹಿತರಿಂದ ಸಾಲ ಪಡೆದು ವಿಜಯಪುರಕ್ಕೆ ಬಂದೆವು. ಬಡತನದ ಮಧ್ಯೆಯೇ ಬದುಕು ಕಟ್ಟಿಕೊಂಡೆವು. ಆದರೆ,<br>ನಮ್ಮೊಂದಿಗೆ ಬಂದವರೇ ಕಣ್ಣೆದುರೇ ಪ್ರಾಣ ಕಳೆದುಕೊಂಡಿದ್ದಾರೆ. ಏನು ಮಾಡಬೇಕೆಂದು ದಿಕ್ಕೇ ತೋಚುತ್ತಿಲ್ಲ’.</p><p>ನಗರದ ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿನ ‘ರಾಜ್ ಗುರು ಫುಡ್ಸ್’ ಗೋದಾಮಿನಲ್ಲಿ ಮೆಕ್ಕೆಜೋಳದ ರಾಶಿಯಲ್ಲಿ ಸಿಲುಕಿ ಸಾವನ್ನಪ್ಪಿದ ಏಳು ಕಾರ್ಮಿಕರ ಆಪ್ತರು ವ್ಯಕ್ತಪಡಿಸಿದ ನೋವು ಇದು.</p>.ವಿಜಯಪುರ ಗೋದಾಮು ದುರಂತ: ಏಳು ಸಾವು– ಮೃತರ ಕುಟುಂಬಗಳಿಗೆ ತಲಾ ₹7 ಲಕ್ಷ ಪರಿಹಾರ.ವಿಜಯಪುರ: ಗೋದಾಮು ಮಾಲೀಕನ ಬಂಧನಕ್ಕೆ ಆಗ್ರಹ. <p>ಆ ಗೋದಾಮಿನಲ್ಲಿ ದುಡಿಯುವ ಬಿಹಾರದ 150ಕ್ಕೂ ಹೆಚ್ಚು ಕಾರ್ಮಿಕರಲ್ಲಿ ಬಹುತೇಕರು 20 ರಿಂದ 35 ವರ್ಷ ವಯಸ್ಸಿನವರು. ಹತ್ತಾರು ವರ್ಷಗಳಿಂದ ಇಲ್ಲೇ ಕೂಲಿ ಮಾಡಿ, ಬದುಕು ಕಟ್ಟಿಕೊಂಡವರು.</p><p>ಊಟ ಮಾಡದೇ ಮತ್ತು ನೀರು ಕುಡಿಯದೇ ರಾತ್ರಿಯಿಡೀ ಅಲ್ಲಿ ಜಮಾವಣೆಗೊಂಡಿದ್ದ ಕಾರ್ಮಿಕರು, ‘ನಮ್ಮ ಆಪ್ತರು ಬದುಕಿ ಬರಲಿ. ಅವರಿಗೆ ಯಾವ ಸಮಸ್ಯೆಯೂ ಕಾಡದಿರಲಿ’ ಎಂದು ಪ್ರಾರ್ಥಿಸಿದರು.</p><p>‘ಮೃತರ ಕುಟುಂಬದವರಿಗೆ ಏನೆಂದು ಹೇಳಿ ಸಂತೈಸಬೇಕು ಎಂಬುದು ತಿಳಿಯುತ್ತಿಲ್ಲ. ಜೊತೆಗೆ ನಮ್ಮ ಮನೆಯಲ್ಲೂ ವಾಪಸ್ ಊರಿಗೆ ಬನ್ನಿ, ಹೇಗಾದರೂ ಮಾಡಿ ಇಲ್ಲಿಯೇ ಬದುಕಿದರಾಯಿತು ಎಂದು ಒಂದೇ ಸಮನೆ ಗೋಳಿಡುತ್ತಿದ್ದಾರೆ’ ಎಂದು ಕೂಲಿಕಾರ್ಮಿಕ ಸಿಯಾರಾಮ್ ಮುಖಿಯಾ ‘ಪ್ರಜಾವಾಣಿ’ಗೆ ತಿಳಿಸಿದರು.</p><p>‘ಮನೆಯಲ್ಲಿ ವಯಸ್ಸಾದ ಅಪ್ಪ, ಅಮ್ಮ, ನನ್ನನ್ನೇ ನಂಬಿರುವ ಪತ್ನಿ, ಮಕ್ಕಳನ್ನು ಸಾಕಲು ರಜೆಯನ್ನೂ ಪಡೆಯದೇ ದುಡಿಯುತ್ತಿರುವೆ. ಇಲ್ಲಿನ ದುರ್ಘಟನೆ ದಿಕ್ಕೇ ತೋಚುತ್ತಿಲ್ಲ. ಇಲ್ಲಿಯೇ ಇರಬೇಕೆ ಅಥವಾ ಊರಿಗೆ ಹೋಗಬಿಡಲೇ ಎಂಬ ಚಿಂತೆ ಕಾಡುತ್ತಿದೆ’ ಎಂದರು.</p><p><strong>ಧ್ವನಿ ಕೇಳಿಸುತ್ತಿತ್ತು: </strong></p><p><strong>ಘಟನೆಯನ್ನು ನೆನಪಿಸಿಕೊಂಡ ಬಿಹಾರದ ಸಮಸ್ತಿಪುರ ಜಿಲ್ಲೆಯ ಪಟಡ್ದಿಹಾ ಗ್ರಾಮದ ಕೂಲಿಕಾರ್ಮಿಕ ಮುಖೇಶ್ ಯಾದವ್, ‘ಮೆಕ್ಕೆಜೋಳದ ರಾಶಿಯಲ್ಲಿ ಸಿಲುಕಿದವರು ರಕ್ಷಿಸುವಂತೆ ಅಂಗಲಾಚುತ್ತಿದ್ದರು. ಆದರೆ, ಅಷ್ಟರಲ್ಲಿ ಟನ್ಗಟ್ಟಲೇ ಮೆಕ್ಕೆಜೋಳ ಬಿದ್ದು, ಉಸಿರು ಚೆಲ್ಲಿದರು’ ಎಂದರು.</strong></p><p>‘ಘಟನೆ ನಡೆದ ಕ್ಷಣ ಎಲ್ಲರೂ ಹೊರಗೆ ಓಡಿ ಜೀವ ಉಳಿಸಿಕೊಂಡಿದ್ದೇವೆ. ರಾಶಿಯಲ್ಲಿ ಸಿಲುಕಿದ್ದ ನಾಲ್ವರ ಕೈ, ಕಾಲು, ತಲೆ ಎಳೆದು ರಕ್ಷಿಸಿದ್ದೇವೆ’ ಎಂದರು.</p><p>‘ಮುಂಜಾನೆ 9 ರಿಂದ ರಾತ್ರಿ 12ರವರೆಗೆ ಗೋದಾಮಿನಲ್ಲಿ ಪ್ರತಿ ದಿನ ದುಡಿದರೆ, ₹500 ರಿಂದ ₹600 ಕೂಲಿ ಸಿಗುತ್ತದೆ. ಅದರಲ್ಲಿ ₹ 100 ಪ್ರತಿದಿನ ಊಟ, ಉಪಾಹಾರಕ್ಕೆ ಖರ್ಚಾಗುತ್ತದೆ. ಉಳಿದ ಹಣವನ್ನು ಕೂಡಿಸಿಟ್ಟು, ಊರಿನಲ್ಲಿರುವ ಕುಟುಂಬಕ್ಕೆ ಕಳುಹಿಸುತ್ತೇವೆ’ ಎಂದರು.</p><p>‘ವರ್ಷದಲ್ಲಿ ಒಂದೆರಡು ಬಾರಿ ಮಾತ್ರ ಊರಿಗೆ ಹೋಗಿ ಬರುತ್ತೇವೆ. ಊರಲ್ಲಿ ಯಾವುದೇ ಕೆಲಸ ಇಲ್ಲ. ಅಲ್ಲಿ ಕೂಲಿ ಕೆಲಸವೂ ಇಲ್ಲ. ಒಂದು ವೇಳೆ ಸಿಕ್ಕರೂ ₹ 200 ರಿಂದ ₹ 300 ಮಾತ್ರ. ಊರಿನಲ್ಲಿ ಅರ್ಧ ಎಕರೆ ಜಮೀನು ಇದೆ. ನಾಲ್ವರು ಸಹೋದರರು ಇದ್ದಾರೆ, ಬದುಕುವುದು ಹೇಗೆ? ಊರಲ್ಲಿ ಇದ್ದರೆ ಏನೂ ಪ್ರಯೋಜನವಿಲ್ಲ, ಕೂಲಿಗಾಗಿ ಇಲ್ಲಿಗೆ ಬಂದಿದ್ದೇವೆ’ ಎಂದು ಕಾರ್ಮಿಕ ಗಜೇಂದ್ರ ಯಾದವ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>