ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ಸೂರ್ಯನು ಪಡುವಣದತ್ತ ಪವಡಿಸಿದ ಕ್ಷಣದಲ್ಲಿ ಹೊಂಬಣ್ಣವು ಗಗನದಲ್ಲಿ ಚೆಲ್ಲಿದ ಕ್ಷಣ
ಪ್ರಜಾವಾಣಿ ಚಿತ್ರ/ರಂಗಸ್ವಾಮಿ

ಮಳೆಗಾಲ ಮುಗಿದ ನಂತರ ಅಬ್ಬಿ ಫಾಲ್ಸ್ನಲ್ಲಿ ಶಾಂತಚಿತ್ತದಿಂದ ಜಲಧಾರೆ ಧುಮ್ಮಿಕ್ಕುತ್ತಿರುವ ಸೊಬಗು ಈಚೆಗೆ ಕಂಡು ಬಂತು
ಪ್ರಸಕ್ತ ಸಮಯ ಹವಾಮಾನ ನಿಜಕ್ಕೂ ಚೆನ್ನಾಗಿದೆ. ಪರಿಸರವನ್ನು ಸುಸ್ಥಿತಿಯಲ್ಲಿಡುವ ಉದ್ದೇಶ ಇಟ್ಟುಕೊಂಡು ಪ್ರವಾಸಿಗರು ಬರಬೇಕು. ಮದ್ಯಸೇವನೆ, ಮೋಜು, ಮಸ್ತಿಗಾಗಿ ಪ್ರವಾಸ ಬೇಡ. ಜವಾಬ್ದಾರಿಯುತವಾದ ಪ್ರವಾಸ ಇರಬೇಕು. ತಮ್ಮ ಪ್ರವಾಸದ ಕಾಲದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ಪರಿಸರದ ಉಳಿವಿಗೆ ನಾನೂ ಸಹ ಕೈಜೋಡಿಸುವೆ ಎಂಬ ಮನೋಭಾವದಲ್ಲೇ ಬಂದು ಪ್ರವಾಸಿ ಸ್ಥಳವನ್ನು ವೀಕ್ಷಿಸಿ ಸುಂದರ ನೆನಪುಗಳೊಂದಿಗೆ ವಾಪಸ್ ತೆರಳುವುದು ಉತ್ತಮ.ಗೀತಾ ಗಿರೀಶ್, ಆರ್ಥಿಕ ಸಲಹೆಗಾರರು ಮತ್ತು ಯೋಗ ತರಬೇತುದಾರರು.
ಕ್ರಿಸ್ಮಸ್ ಹಾಗೂ ವರ್ಷಾಂತ್ಯದಲ್ಲಿ ಪ್ರವಾಸಿಗರು ಹೆಚ್ಚಾಗಿ ಬರುವ ನಿರೀಕ್ಷೆ ಇದೆ. ಈಗಾಗಲೇ ಬುಕಿಂಗ್ಗಳು ಆರಂಭವಾಗಿವೆ. ಶೇ 70ರಷ್ಟು ಬುಕಿಂಗ್ ಮುಗಿದಿದೆ. ಕೊಡಗಿನ ಹವಾಗುಣ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ.ಈ ವರ್ಷವೂ ಹೆಚ್ಚಿನ ಪ್ರವಾಸಿಗರು ಬರುವ ನಿರೀಕ್ಷೆ ಇದೆ.ನಾಗೇಂದ್ರಪ್ರಸಾದ್, ಕೂರ್ಗ್ ಹೋಟೆಲ್, ರೆಸಾರ್ಟ್ ಅಸೋಸಿಯೇಷನ್ನ ಮುಖ್ಯ ಸಲಹೆಗಾರರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.