ದುರ್ಗಪ್ಪ ಬಡ ರೈತರಿದ್ದು ಕುರಿ ಸಾಕಾಣೆ ಮಾಡುತ್ತಿದ್ದರು. ಊರ ಪಕ್ಕದಲ್ಲಿ ಅವರ ಜಮೀನಿದ್ದು, ಅಲ್ಲಿ 25 ಕುರಿ ಮರಿಗಳನ್ನು ಬಿಟ್ಟು ಸುತ್ತಲೂ ಬೇಲಿ ಹಾಕಿ ದೊಡ್ಡ ಕುರಿಗಳನ್ನು ಮೇಯಿಸಲು ಹೋಗಿದ್ದರು. ಏಕಾಏಕಿ 5-6 ಬೀದಿ ನಾಯಿಗಳು ದಾಳಿ ಮಾಡಿ ಕುರಿ ಮರಿಗಳನ್ನು ಕಚ್ಚಿ ಸಾಯಿಸಿವೆ. ಅಷ್ಟರಲ್ಲಿ ಆ ಮಾರ್ಗದಲ್ಲಿ ಹೋಗುತ್ತಿದ್ದ ರೈತರು ನಾಯಿಗಳನ್ನು ಓಡಿಸಿದ್ದಾರೆ. ಉಳಿದ 13 ಕುರಿ ಮರಿಗಳು ಪಾರಾಗಿವೆ.