<p><strong>ಸುರಪುರ:</strong> ‘ಚಲನಚಿತ್ರಗಳು ಮನೋರಂಜನೆ ಜೊತೆಗೆ ಸಮಾಜದ ಜನತೆಯ ಮನೋಧರ್ಮ ಸಹ ಪರಿಣಾಮಕಾರಿಯಾಗಿ ಬದಲಾಯಿಸಬಲ್ಲವು’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ಧರಾಮ ಹೊನ್ಕಲ್ ಪ್ರತಿಪಾದಿಸಿದರು.</p>.<p>ಬರಗೂರ ರಾಮಚಂದ್ರಪ್ಪ ಅವರ ‘ಸ್ವಪ್ನಮಂಟಪ’ ಚಲನಚಿತ್ರದ ಸಮುದಾಯದತ್ತ ಸಿನಿಮಾ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಈ ಚಲನಚಿತ್ರ ಚಾರಿತ್ರಿಕ ಘಟನೆಯನ್ನು ವಾಸ್ತವದ ಹಿನ್ನೆಲೆಯಲ್ಲಿ ಸಮೀಕರಿಸಿ ಸುಂದರವಾಗಿ ಮತ್ತು ಮನೋಜ್ಞವಾಗಿ ನಿರ್ಮಿಸಿದ್ದಾರೆ. ಪ್ರೀತಿ, ಪ್ರೇಮದ ಸೌಹಾರ್ದತೆಯ ಮನಸು ಒಡೆಯುವ ದುಷ್ಟ ಶಕ್ತಿಗಳನ್ನು ಜನ ಸಂಘಟನೆಯ ಮೂಲಕ ಹಿಮ್ಮೆಟ್ಟಿಸುವ ನೈತಿಕ ಶಕ್ತಿ ನೀಡುವ ಸಾರಾಂಶ ಹೊಂದಿದೆ’ ಎಂದು ವಿವರಿಸಿದರು.</p>.<p>‘ನಾಡು ನುಡಿ ಪ್ರೇಮದ ಜೊತೆಗೆ ಸಾಮಾಜಿಕ ಕಾಳಜಿ ಸಹ ಬರಗೂರ ಅವರು ಈ ಚಿತ್ರದಲ್ಲಿ ಅನನ್ಯವಾಗಿ ಅಳವಡಿಸಿದ್ದಾರೆ. ಈ ಚಿತ್ರ ವೀಕ್ಷಕರಿಗೆ ಹೊಸ ಸಂವೇದನೆ ನೀಡುತ್ತದೆ. ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಈ ಚಲನಚಿತ್ರದ ಪ್ರದರ್ಶನ ನಡೆಸಲಾಗುವುದು’ ಎಂದರು.</p>.<p>‘ಈಗ ಗ್ರಾಮೀಣ ಭಾಗದಲ್ಲಿ ಅದರಲ್ಲೂ ಯಾದಗಿರಿ ಜಿಲ್ಲೆಯಲ್ಲಿ ಶಹಾಪುರ ನಗರ ಬಿಟ್ಟರೆ ಉಳೆದೆಡೆ ಚಿತ್ರಮಂದಿರಗಳು ಇಲ್ಲ. ಹೀಗಾಗಿ ಈ ಭಾಗದ ಜನರು ಉತ್ತಮ ಚಿತ್ರಗಳ ವೀಕ್ಷಣೆಯಿಂದ ವಂಚಿರಾಗುತ್ತಿದ್ದಾರೆ. ಇದನ್ನು ಗಮನಿಸಿ ಬರಗೂರ್ ಅವರು ಈ ಹೊಸ ಹೆಜ್ಜೆ ಇಟ್ಟಿದ್ದಾರೆ’ ಎಂದರು.</p>.<p>ಪ್ರಾಂಶುಪಾಲ ಬಲಭೀಮರಾಯ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಗುರುರಾಜ ನಾಗಲೀಕರ, ಎಂ.ಎಂ. ವಗ್ಗರ, ದೇವಿಂದ್ರಪ್ಪ ಪಾಟೀಲ, ದೇವು ಹೆಬ್ಬಾಳ ವೇದಿಕೆಯಲ್ಲಿದ್ದರು.<br /> ಜಗದೀಶಕುಮಾರ ನಿರ್ವಹಿಸಿ ಚಲನಚಿತ್ರದ ಪ್ರದರ್ಶನದ ವ್ಯವಸ್ಥೆ ಮಾಡಿದ್ದರು. ಉಪನ್ಯಾಸಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಚಲನಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ:</strong> ‘ಚಲನಚಿತ್ರಗಳು ಮನೋರಂಜನೆ ಜೊತೆಗೆ ಸಮಾಜದ ಜನತೆಯ ಮನೋಧರ್ಮ ಸಹ ಪರಿಣಾಮಕಾರಿಯಾಗಿ ಬದಲಾಯಿಸಬಲ್ಲವು’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ಧರಾಮ ಹೊನ್ಕಲ್ ಪ್ರತಿಪಾದಿಸಿದರು.</p>.<p>ಬರಗೂರ ರಾಮಚಂದ್ರಪ್ಪ ಅವರ ‘ಸ್ವಪ್ನಮಂಟಪ’ ಚಲನಚಿತ್ರದ ಸಮುದಾಯದತ್ತ ಸಿನಿಮಾ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಈ ಚಲನಚಿತ್ರ ಚಾರಿತ್ರಿಕ ಘಟನೆಯನ್ನು ವಾಸ್ತವದ ಹಿನ್ನೆಲೆಯಲ್ಲಿ ಸಮೀಕರಿಸಿ ಸುಂದರವಾಗಿ ಮತ್ತು ಮನೋಜ್ಞವಾಗಿ ನಿರ್ಮಿಸಿದ್ದಾರೆ. ಪ್ರೀತಿ, ಪ್ರೇಮದ ಸೌಹಾರ್ದತೆಯ ಮನಸು ಒಡೆಯುವ ದುಷ್ಟ ಶಕ್ತಿಗಳನ್ನು ಜನ ಸಂಘಟನೆಯ ಮೂಲಕ ಹಿಮ್ಮೆಟ್ಟಿಸುವ ನೈತಿಕ ಶಕ್ತಿ ನೀಡುವ ಸಾರಾಂಶ ಹೊಂದಿದೆ’ ಎಂದು ವಿವರಿಸಿದರು.</p>.<p>‘ನಾಡು ನುಡಿ ಪ್ರೇಮದ ಜೊತೆಗೆ ಸಾಮಾಜಿಕ ಕಾಳಜಿ ಸಹ ಬರಗೂರ ಅವರು ಈ ಚಿತ್ರದಲ್ಲಿ ಅನನ್ಯವಾಗಿ ಅಳವಡಿಸಿದ್ದಾರೆ. ಈ ಚಿತ್ರ ವೀಕ್ಷಕರಿಗೆ ಹೊಸ ಸಂವೇದನೆ ನೀಡುತ್ತದೆ. ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಈ ಚಲನಚಿತ್ರದ ಪ್ರದರ್ಶನ ನಡೆಸಲಾಗುವುದು’ ಎಂದರು.</p>.<p>‘ಈಗ ಗ್ರಾಮೀಣ ಭಾಗದಲ್ಲಿ ಅದರಲ್ಲೂ ಯಾದಗಿರಿ ಜಿಲ್ಲೆಯಲ್ಲಿ ಶಹಾಪುರ ನಗರ ಬಿಟ್ಟರೆ ಉಳೆದೆಡೆ ಚಿತ್ರಮಂದಿರಗಳು ಇಲ್ಲ. ಹೀಗಾಗಿ ಈ ಭಾಗದ ಜನರು ಉತ್ತಮ ಚಿತ್ರಗಳ ವೀಕ್ಷಣೆಯಿಂದ ವಂಚಿರಾಗುತ್ತಿದ್ದಾರೆ. ಇದನ್ನು ಗಮನಿಸಿ ಬರಗೂರ್ ಅವರು ಈ ಹೊಸ ಹೆಜ್ಜೆ ಇಟ್ಟಿದ್ದಾರೆ’ ಎಂದರು.</p>.<p>ಪ್ರಾಂಶುಪಾಲ ಬಲಭೀಮರಾಯ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಗುರುರಾಜ ನಾಗಲೀಕರ, ಎಂ.ಎಂ. ವಗ್ಗರ, ದೇವಿಂದ್ರಪ್ಪ ಪಾಟೀಲ, ದೇವು ಹೆಬ್ಬಾಳ ವೇದಿಕೆಯಲ್ಲಿದ್ದರು.<br /> ಜಗದೀಶಕುಮಾರ ನಿರ್ವಹಿಸಿ ಚಲನಚಿತ್ರದ ಪ್ರದರ್ಶನದ ವ್ಯವಸ್ಥೆ ಮಾಡಿದ್ದರು. ಉಪನ್ಯಾಸಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಚಲನಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>