<p><strong>ಬಳಿಚಕ್ರ (ಸೈದಾಪುರ):</strong> ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಮಳೆ ನೀರುದ್ದು, ಮನೆಯಂಗಳದಲ್ಲಿ ನೀರು ಸಂಗ್ರಹಗೊಂಡು ಕೆರೆಯಂತೆ ಪರಿವರ್ತೆನೆಯಾಗಿದೆ. ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜನರು ಬದುಕುವ ಸ್ಥಿತಿ ನಿರ್ಮಾಣವಾಗಿದೆ. </p>.<p>ಬಳಿಚಕ್ರ ಗ್ರಾಮದ ಮುಖ್ಯ ರಸ್ತೆ ಪಕ್ಕದಲ್ಲಿರುವ ಸರ್ಕಾರಿ ಪ್ರೌಢ ಶಾಲೆ ಹಿಂಭಾಗದಲ್ಲಿ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ಜನ ಜಾನುವಾರುಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.</p>.<p>ಮನೆಯಲ್ಲಿನ ದವಸ ಧಾನ್ಯಗಳು, ಮಕ್ಕಳ ಶಾಲಾ ಸಾಮಾಗ್ರಿಗಳು, ಅಗತ್ಯ ವಸ್ತುಗಳು ಹಾಗೂ ಜಾನುವಾರುಗಳಿಗೆ ಶೇಖರಣೆ ಮಾಡಿದ ಮೇವು ಸಂಪೂರ್ಣ ನೀರು ಪಾಲಾಗಿದೆ., ಅಲ್ಲಿನ ಜನರು ಸಂಬಂಧಿಕರ ಮನೆ, ದೇವಸ್ಥಾನ ಹಾಗೂ ಸರ್ಕಾರಿ ಶಾಲೆಗಳಲ್ಲಿ ಕಾಲ ಕಳೆಯುವಂತಾಗಿದೆ.</p>.<p><strong>ಸಾಂಕ್ರಾಮಿಕ ರೋಗಗಳ ಭೀತಿ: </strong></p><p>ಮಳೆ ನಿಂತರು ಜನರಲ್ಲಿ ಸಾಂಕ್ರಾಮಿಕ ರೋಗಗಳು ಭೀತಿ ಕಾಡುತ್ತಿದೆ. ಮಳೆ ನೀರಿನಲ್ಲಿ ಹರಿದುಕೊಂಡು ಬಂದ ಕಸ ತಿಪ್ಪೆಗುಂಡಿಯಂತಾಗಿ ಮಾರ್ಪಟ್ಟಿದೆ. ನೀರು ನಿಂತಿರುವುದರಿಂದ ಸೊಳ್ಳೆಗಳ ತಾಣವಾಗಿದೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ.</p>.<p>ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಇದರಿಂದ ಮಳೆಗಾಲದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗುವುದು ಸಾಮಾನ್ಯವಾಗಿದೆ. ಆದರೂ ಸಂಬಂಧಿಸಿದ ಅಧಿಕಾರಿಗಳು ಶಾಶ್ವತ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಡಿಸಿದರು. </p>.<p><strong>ಚರಂಡಿ ನಿರ್ಮಾಣಕ್ಕೆ ಕೆಲ ಸ್ಥಳೀಯರ ವಿರೋಧ:</strong> </p><p>ಹಲವು ವರ್ಷಗಳ ಹಿಂದೆ ಮನೆಗಳಿಗೆ ಚರಂಡಿ ನಿರ್ಮಾಣ ಮಾಡಲು ಗ್ರಾಮ ಪಂಚಾಯಿತಿ ಮುಂದಾಗಿತ್ತು. ಆದರೆ ಕೆಲವರು ನನ್ನ ಜಾಗದಲ್ಲಿ ಬೇಡ ಎಂದು ವಿರೋಧ ಮಾಡುವುದರಿಂದ ಮುಂದೂಡಲ್ಪಡುತ್ತಿದೆ.</p>.<p>ಮಳೆ ಬಂದಾಗ ಸಂಗ್ರಹಗೊಂಡ ನೀರು ಪಂಚಾಯಿತಿ ಸಿಬ್ಬಂದಿ ಮೋಟರ್ ಮೂಲಕ ಹೊರ ಹಾಕುತ್ತಾರೆ. ಮಳೆ ಬಂದರೆ ಮತ್ತೆ ಯಥಾಸ್ಥಿತಿ ಎನ್ನುತ್ತಾರೆ ಸ್ಥಳಿಯರು.</p>.<p>ಮಾಚರಡ್ಡಿ ಬೋಯಿನ್, ಗುಂಜಲಪ್ಪ, ದೇವಿಂದ್ರ ಬೋಮ್ಮಣ್, ಹಣಮಂತ ಧೋತ್ರೆ, ಬಸವರಾಜ ಬೋಳಿ, ಸಿದ್ದಪ್ಪಗೌಡ, ಯಂಕಪ್ಪ ಬೇಳಿಗೇರಿ, ಭೀಮಣ್ಣ ಭಜಂತ್ರಿ, ನಿಂಗಪ್ಪ ಪೂಜಾರಿ, ವೆಂಕಟೇಶ್ ನಾಯಕ್, ತಾಯಪ್ಪ ಬಿಳ್ಹಾರ್, ಮಶಪ್ಪ ಸಂಜೀವಿನಿ, ಬಸವರಾಜ ನಾಯಕ್, ಮಶಪ್ಪ, ಸಾಬಣ್ಣ, ನರಸಪ್ಪ ಅನೇಕರಿದ್ದರು.</p>.<div><blockquote>ಅಧಿಕಾರಿಗಳು 24 ಗಂಟೆ ಒಳಗೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸದಿದ್ದರೆ ಮುಖ್ಯ ರಸ್ತೆ ತಡೆದು ಹೋರಾಟ ಮಾಡಬೇಕಾಗುತ್ತದೆ </blockquote><span class="attribution">ಉಮೇಶ್. ಕೆ ಮುದ್ನಾಳ ಸಾಮಾಜಿಕ ಹೋರಾಟಗಾರ</span></div>.<div><blockquote>ಚರಂಡಿ ನಿರ್ಮಾಣಕ್ಕೆ ಕೆಲ ಸ್ಥಳೀಯರ ವಿರೋಧದಿಂದ ಮನೆಗಳಿಗೆ ನೀರು ನುಗ್ಗುತ್ತಿವೆ. ಇದಕ್ಕೆ ಅಧಿಕಾರಿಗಳು ಶಾಶ್ವತ ಪರಿಹಾರ ನೀಡಬೇಕು. </blockquote><span class="attribution">ಹನುಮಂತ ಬೋಯಿನ್ ಸ್ಥಳೀಯ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳಿಚಕ್ರ (ಸೈದಾಪುರ):</strong> ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಮಳೆ ನೀರುದ್ದು, ಮನೆಯಂಗಳದಲ್ಲಿ ನೀರು ಸಂಗ್ರಹಗೊಂಡು ಕೆರೆಯಂತೆ ಪರಿವರ್ತೆನೆಯಾಗಿದೆ. ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜನರು ಬದುಕುವ ಸ್ಥಿತಿ ನಿರ್ಮಾಣವಾಗಿದೆ. </p>.<p>ಬಳಿಚಕ್ರ ಗ್ರಾಮದ ಮುಖ್ಯ ರಸ್ತೆ ಪಕ್ಕದಲ್ಲಿರುವ ಸರ್ಕಾರಿ ಪ್ರೌಢ ಶಾಲೆ ಹಿಂಭಾಗದಲ್ಲಿ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ಜನ ಜಾನುವಾರುಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.</p>.<p>ಮನೆಯಲ್ಲಿನ ದವಸ ಧಾನ್ಯಗಳು, ಮಕ್ಕಳ ಶಾಲಾ ಸಾಮಾಗ್ರಿಗಳು, ಅಗತ್ಯ ವಸ್ತುಗಳು ಹಾಗೂ ಜಾನುವಾರುಗಳಿಗೆ ಶೇಖರಣೆ ಮಾಡಿದ ಮೇವು ಸಂಪೂರ್ಣ ನೀರು ಪಾಲಾಗಿದೆ., ಅಲ್ಲಿನ ಜನರು ಸಂಬಂಧಿಕರ ಮನೆ, ದೇವಸ್ಥಾನ ಹಾಗೂ ಸರ್ಕಾರಿ ಶಾಲೆಗಳಲ್ಲಿ ಕಾಲ ಕಳೆಯುವಂತಾಗಿದೆ.</p>.<p><strong>ಸಾಂಕ್ರಾಮಿಕ ರೋಗಗಳ ಭೀತಿ: </strong></p><p>ಮಳೆ ನಿಂತರು ಜನರಲ್ಲಿ ಸಾಂಕ್ರಾಮಿಕ ರೋಗಗಳು ಭೀತಿ ಕಾಡುತ್ತಿದೆ. ಮಳೆ ನೀರಿನಲ್ಲಿ ಹರಿದುಕೊಂಡು ಬಂದ ಕಸ ತಿಪ್ಪೆಗುಂಡಿಯಂತಾಗಿ ಮಾರ್ಪಟ್ಟಿದೆ. ನೀರು ನಿಂತಿರುವುದರಿಂದ ಸೊಳ್ಳೆಗಳ ತಾಣವಾಗಿದೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ.</p>.<p>ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಇದರಿಂದ ಮಳೆಗಾಲದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗುವುದು ಸಾಮಾನ್ಯವಾಗಿದೆ. ಆದರೂ ಸಂಬಂಧಿಸಿದ ಅಧಿಕಾರಿಗಳು ಶಾಶ್ವತ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಡಿಸಿದರು. </p>.<p><strong>ಚರಂಡಿ ನಿರ್ಮಾಣಕ್ಕೆ ಕೆಲ ಸ್ಥಳೀಯರ ವಿರೋಧ:</strong> </p><p>ಹಲವು ವರ್ಷಗಳ ಹಿಂದೆ ಮನೆಗಳಿಗೆ ಚರಂಡಿ ನಿರ್ಮಾಣ ಮಾಡಲು ಗ್ರಾಮ ಪಂಚಾಯಿತಿ ಮುಂದಾಗಿತ್ತು. ಆದರೆ ಕೆಲವರು ನನ್ನ ಜಾಗದಲ್ಲಿ ಬೇಡ ಎಂದು ವಿರೋಧ ಮಾಡುವುದರಿಂದ ಮುಂದೂಡಲ್ಪಡುತ್ತಿದೆ.</p>.<p>ಮಳೆ ಬಂದಾಗ ಸಂಗ್ರಹಗೊಂಡ ನೀರು ಪಂಚಾಯಿತಿ ಸಿಬ್ಬಂದಿ ಮೋಟರ್ ಮೂಲಕ ಹೊರ ಹಾಕುತ್ತಾರೆ. ಮಳೆ ಬಂದರೆ ಮತ್ತೆ ಯಥಾಸ್ಥಿತಿ ಎನ್ನುತ್ತಾರೆ ಸ್ಥಳಿಯರು.</p>.<p>ಮಾಚರಡ್ಡಿ ಬೋಯಿನ್, ಗುಂಜಲಪ್ಪ, ದೇವಿಂದ್ರ ಬೋಮ್ಮಣ್, ಹಣಮಂತ ಧೋತ್ರೆ, ಬಸವರಾಜ ಬೋಳಿ, ಸಿದ್ದಪ್ಪಗೌಡ, ಯಂಕಪ್ಪ ಬೇಳಿಗೇರಿ, ಭೀಮಣ್ಣ ಭಜಂತ್ರಿ, ನಿಂಗಪ್ಪ ಪೂಜಾರಿ, ವೆಂಕಟೇಶ್ ನಾಯಕ್, ತಾಯಪ್ಪ ಬಿಳ್ಹಾರ್, ಮಶಪ್ಪ ಸಂಜೀವಿನಿ, ಬಸವರಾಜ ನಾಯಕ್, ಮಶಪ್ಪ, ಸಾಬಣ್ಣ, ನರಸಪ್ಪ ಅನೇಕರಿದ್ದರು.</p>.<div><blockquote>ಅಧಿಕಾರಿಗಳು 24 ಗಂಟೆ ಒಳಗೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸದಿದ್ದರೆ ಮುಖ್ಯ ರಸ್ತೆ ತಡೆದು ಹೋರಾಟ ಮಾಡಬೇಕಾಗುತ್ತದೆ </blockquote><span class="attribution">ಉಮೇಶ್. ಕೆ ಮುದ್ನಾಳ ಸಾಮಾಜಿಕ ಹೋರಾಟಗಾರ</span></div>.<div><blockquote>ಚರಂಡಿ ನಿರ್ಮಾಣಕ್ಕೆ ಕೆಲ ಸ್ಥಳೀಯರ ವಿರೋಧದಿಂದ ಮನೆಗಳಿಗೆ ನೀರು ನುಗ್ಗುತ್ತಿವೆ. ಇದಕ್ಕೆ ಅಧಿಕಾರಿಗಳು ಶಾಶ್ವತ ಪರಿಹಾರ ನೀಡಬೇಕು. </blockquote><span class="attribution">ಹನುಮಂತ ಬೋಯಿನ್ ಸ್ಥಳೀಯ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>