<p><strong>ಶಹಾಪುರ(ಯಾದಗಿರಿ ಜಿಲ್ಲೆ):</strong> ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುವಾಗ ಗೋಗಿ ಠಾಣೆಯ ಪೊಲೀಸರು ದಾಳಿ ಮಾಡಿ 76 ಕ್ವಿಂಟಾಲ್, ಅಂದಾಜು ₹2.62 ಲಕ್ಷದ ಮೌಲ್ಯದ ಪಡಿತರ ಅಕ್ಕಿ ಬುಧವಾರ ಜಪ್ತಿ ಮಾಡಿದ್ದಾರೆ.</p>.<p>ತಾಲ್ಲೂಕಿನ ಚಂದಾಪುರ ಗ್ರಾಮದ ಕಡೆಯಿಂದ ಗೋಗಿ (ಕೆ) ಗ್ರಾಮದ ಮೂಲಕ ಗೂಡ್ಸ್ ವಾಹನದಲ್ಲಿ ಸಾಗಣೆ ಮಾಡುತ್ತಿರುವಾಗ ಗೋಗಿ(ಕೆ) ಗ್ರಾಮದ ಶಹಾಪುರ-ಸಿಂದಗಿ ರಸ್ತೆ ಬಳಿ ಪೊಲೀಸರು ದಾಳಿ ಮಾಡಿ, ಗೂಡ್ಸ್ ವಾಹನ ಜಪ್ತಿ ಮಾಡಲಾಗಿದೆ ಎಂದು ಆಹಾರ ನಿರೀಕ್ಷಕ ಸಂಜೀವ ಕವಲಿ ದೂರಿನಲ್ಲಿ ತಿಳಿಸಿದ್ದಾರೆ.</p>.<p>ವಾಹನ ಚಾಲಕ ಗುರುಮಿಠಕಲ್ ತಾಲ್ಲೂಕಿನ ಬೋರಬಂಡಾ ಗ್ರಾಮದ ರಾಜು ಸೋಮ್ಲಾ ನಾಯಕ ಪವಾರ ಅವರನ್ನು ಬಂಧಿಸಿದ್ದಾರೆ.</p>.<p>ಚಾಮನಾಳ ತಾಂಡಾದ ದೇವರಾಜ ಲೋಕೇಶ ರಾಠೋಡ ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಗೋಗಿ ಠಾಣೆಯಲ್ಲಿ ದೂರು ದಾಖಲಾಗಿದೆ.</p>.<h2><strong>ರಸ್ತೆ ಅಪಘಾತ: ಶಾಲಾ ವಿದ್ಯಾರ್ಥಿ ಸಾವು</strong></h2>.<p>ಶಹಾಪುರ: ತಾಲ್ಲೂಕಿನ ನಾಗನಟಗಿ ತಾಂಡಾದ ಬಳಿ ಬುಧವಾರ ಶಾಲಾ ವಿದ್ಯಾರ್ಥಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.<br><br> ತಾಂಡಾದ 6ನೇ ತರಗತಿ ವಿದ್ಯಾರ್ಥಿ ಮನೋಜ ನೀಲು (13) ಮೃತಪಟ್ಟ ಬಾಲಕ.</p>.<p>ಶಾಲೆಯಿಂದ ಮನೆಗೆ ತೆರಳುತ್ತಿದ್ದಾಗ ಹಿಂಬದಿಯಿಂದ ಟ್ರಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲಿಯೇ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.<br> ಗೋಗಿ ಠಾಣೆಯಲ್ಲಿ ದೂರು ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಹಾಪುರ(ಯಾದಗಿರಿ ಜಿಲ್ಲೆ):</strong> ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುವಾಗ ಗೋಗಿ ಠಾಣೆಯ ಪೊಲೀಸರು ದಾಳಿ ಮಾಡಿ 76 ಕ್ವಿಂಟಾಲ್, ಅಂದಾಜು ₹2.62 ಲಕ್ಷದ ಮೌಲ್ಯದ ಪಡಿತರ ಅಕ್ಕಿ ಬುಧವಾರ ಜಪ್ತಿ ಮಾಡಿದ್ದಾರೆ.</p>.<p>ತಾಲ್ಲೂಕಿನ ಚಂದಾಪುರ ಗ್ರಾಮದ ಕಡೆಯಿಂದ ಗೋಗಿ (ಕೆ) ಗ್ರಾಮದ ಮೂಲಕ ಗೂಡ್ಸ್ ವಾಹನದಲ್ಲಿ ಸಾಗಣೆ ಮಾಡುತ್ತಿರುವಾಗ ಗೋಗಿ(ಕೆ) ಗ್ರಾಮದ ಶಹಾಪುರ-ಸಿಂದಗಿ ರಸ್ತೆ ಬಳಿ ಪೊಲೀಸರು ದಾಳಿ ಮಾಡಿ, ಗೂಡ್ಸ್ ವಾಹನ ಜಪ್ತಿ ಮಾಡಲಾಗಿದೆ ಎಂದು ಆಹಾರ ನಿರೀಕ್ಷಕ ಸಂಜೀವ ಕವಲಿ ದೂರಿನಲ್ಲಿ ತಿಳಿಸಿದ್ದಾರೆ.</p>.<p>ವಾಹನ ಚಾಲಕ ಗುರುಮಿಠಕಲ್ ತಾಲ್ಲೂಕಿನ ಬೋರಬಂಡಾ ಗ್ರಾಮದ ರಾಜು ಸೋಮ್ಲಾ ನಾಯಕ ಪವಾರ ಅವರನ್ನು ಬಂಧಿಸಿದ್ದಾರೆ.</p>.<p>ಚಾಮನಾಳ ತಾಂಡಾದ ದೇವರಾಜ ಲೋಕೇಶ ರಾಠೋಡ ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಗೋಗಿ ಠಾಣೆಯಲ್ಲಿ ದೂರು ದಾಖಲಾಗಿದೆ.</p>.<h2><strong>ರಸ್ತೆ ಅಪಘಾತ: ಶಾಲಾ ವಿದ್ಯಾರ್ಥಿ ಸಾವು</strong></h2>.<p>ಶಹಾಪುರ: ತಾಲ್ಲೂಕಿನ ನಾಗನಟಗಿ ತಾಂಡಾದ ಬಳಿ ಬುಧವಾರ ಶಾಲಾ ವಿದ್ಯಾರ್ಥಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.<br><br> ತಾಂಡಾದ 6ನೇ ತರಗತಿ ವಿದ್ಯಾರ್ಥಿ ಮನೋಜ ನೀಲು (13) ಮೃತಪಟ್ಟ ಬಾಲಕ.</p>.<p>ಶಾಲೆಯಿಂದ ಮನೆಗೆ ತೆರಳುತ್ತಿದ್ದಾಗ ಹಿಂಬದಿಯಿಂದ ಟ್ರಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲಿಯೇ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.<br> ಗೋಗಿ ಠಾಣೆಯಲ್ಲಿ ದೂರು ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>