<p><strong>ಸುರಪುರ (ಯಾದಗಿರಿ ಜಿಲ್ಲೆ):</strong> ಇಲ್ಲಿನ ನಗರಸಭೆಯ ಕಿರಿಯ ಎಂಜಿನಿಯರ್ (ಜೆಇ) ಮಹೇಶ ಶಿವಾನಂದ ಅವರ ಮನೆ ಅಲ್ಮೇರಾದಲ್ಲಿ ಇರಿಸಿದ್ದ ₹ 40 ಸಾವಿರ ನಗದು, ₹ 46.11 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿದೆ.</p>.<p>ಮಹೇಶ ತನ್ನ ಸಹೋದರನ ಜೊತೆಗೂಡಿ ಸತ್ಯಂಪೇಟೆ ರಸ್ತೆ ಸಮೀಪ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ‘ಮಂಗಳವಾರ ರಾತ್ರಿ ನಗರ ದಿವಳಗುಡ್ಡದ ಮರಗಮ್ಮ ದೇವಿಯ ಜಾತ್ರೆಗಾಗಿ ಕುಟುಂಬದ ಸದಸ್ಯರು ತೆರಳಿದ್ದರು.</p>.<p>‘ಬಾಗಿಲಿನ ಕೀಲಿ ಕೊಂಡಿ ಮುರಿದು ಕೃತ್ಯ ಎಸಗಿದ್ದು ₹ 40 ಸಾವಿರ ನಗದು, 642 ಗ್ರಾಂ ತೂಕದ ಚಿನ್ನದ ಆಭರಣ, 1,295 ಗ್ರಾಂ ಬೆಳ್ಳಿ ಆಭರಣ ಕಳುವಾಗಿದೆ’ ಎಂದು ಸುರಪುರ ಠಾಣೆಗೆ ದೂರು ನೀಡಲಾಗಿದೆ.</p>
<p><strong>ಸುರಪುರ (ಯಾದಗಿರಿ ಜಿಲ್ಲೆ):</strong> ಇಲ್ಲಿನ ನಗರಸಭೆಯ ಕಿರಿಯ ಎಂಜಿನಿಯರ್ (ಜೆಇ) ಮಹೇಶ ಶಿವಾನಂದ ಅವರ ಮನೆ ಅಲ್ಮೇರಾದಲ್ಲಿ ಇರಿಸಿದ್ದ ₹ 40 ಸಾವಿರ ನಗದು, ₹ 46.11 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿದೆ.</p>.<p>ಮಹೇಶ ತನ್ನ ಸಹೋದರನ ಜೊತೆಗೂಡಿ ಸತ್ಯಂಪೇಟೆ ರಸ್ತೆ ಸಮೀಪ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ‘ಮಂಗಳವಾರ ರಾತ್ರಿ ನಗರ ದಿವಳಗುಡ್ಡದ ಮರಗಮ್ಮ ದೇವಿಯ ಜಾತ್ರೆಗಾಗಿ ಕುಟುಂಬದ ಸದಸ್ಯರು ತೆರಳಿದ್ದರು.</p>.<p>‘ಬಾಗಿಲಿನ ಕೀಲಿ ಕೊಂಡಿ ಮುರಿದು ಕೃತ್ಯ ಎಸಗಿದ್ದು ₹ 40 ಸಾವಿರ ನಗದು, 642 ಗ್ರಾಂ ತೂಕದ ಚಿನ್ನದ ಆಭರಣ, 1,295 ಗ್ರಾಂ ಬೆಳ್ಳಿ ಆಭರಣ ಕಳುವಾಗಿದೆ’ ಎಂದು ಸುರಪುರ ಠಾಣೆಗೆ ದೂರು ನೀಡಲಾಗಿದೆ.</p>