<p><strong>ಯಾದಗಿರಿ</strong>: ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಜಿಲ್ಲೆಯ ಸುರಪುರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕಗೆ ಸೇರಿದ ಐದು ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ಮಾಡಿ ಹಣ, ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.</p><p>ಯಾದಗಿರಿ ಲೋಕಾಯುಕ್ತ ಡಿವೈಎಸ್ಪಿ ಜೆ.ಎಚ್.ಇನಾಂದಾರ ನೇತೃತ್ವದಲ್ಲಿ ಟಿಎಚ್ಒ ಕಚೇರಿ, ಅದಿತಿ ಹೊಟೇಲ್, ಪೆಟ್ರೋಲ್ ಬಂಕ್, ಖಾಸಗಿ ಆಸ್ಪತ್ರೆ ಸೇರಿ ಐದು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸುರಪುರ ನಗರದಲ್ಲಿರುವ ಡಾ.ಆರ್.ವಿ.ನಾಯಕ ಮನೆ, ಕಲಬುರಗಿಯ ಮನೆ ಮೇಲೂ ದಾಳಿ ಮಾಡಲಾಗಿದೆ. </p><p><strong>ಭರ್ಜರಿ ಬೇಟೆ:</strong></p><p>ಲೋಕಾಯುಕ್ತರ ದಾಳಿ ವೇಳೆ ಸುರಪುರ ನಗರದ ಮನೆಯಲ್ಲೇ ಇದ್ದ ಡಾ.ಆರ್.ವಿ.ನಾಯಕ, ಅಂದಾಜು ಸ್ಥಿರ ಆಸ್ತಿಗಳ ಮೌಲ್ಯ ₹11.5 ಕೋಟಿ ಆಗಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ. </p><p>11 ನಿವೇಶನಗಳ ಮೌಲ್ಯ ₹45 ಲಕ್ಷ, 2 ಮನೆಗಳಿದ್ದು, ₹3 ಕೋಟಿ ಮೌಲ್ಯ ಹೊಂದಿವೆ. 13 ಎಕರೆ ಕೃಷಿ ಭೂಮಿ ಇದ್ದು, ₹20 ಲಕ್ಷ ಮೌಲ್ಯ ಹೊಂದಿವೆ. </p><p>ಇದರ ಜೊತೆಗೆ ₹40 ಮೌಲ್ಯದ ಒಂದು ಪೆಟ್ರೋಲ್ ಬಂಕ್, ಖಾಸಗಿ ನರ್ಸಿಂಗ್ ಹೋಂ ₹1.5 ಕೋಟಿ, ಖಾಸಗಿ ಲಾಡ್ಜ್ ಮತ್ತು ಬಾರ್ ಮೌಲ್ಯ ₹5.5 ಕೋಟಿ, ಚರ ಆಸ್ತಿ ₹1.54 ಕೋಟಿ, ದಾಳಿ ವೇಳೆ ₹4.10 ಲಕ್ಷ, ₹60 ಲಕ್ಷ ಮೌಲ್ಯದ ಆಭರಣಗಳು, ₹70 ಲಕ್ಷ ಮೌಲ್ಯದ ಕಾರು ಸೇರಿದಂತೆ ಇತರೆ ₹20 ಲಕ್ಷ ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ.</p><p>ಡಾ.ಆರ್.ವಿ.ನಾಯಕ ಒಟ್ಟು ₹ 9.87 ಕೋಟಿ, ಶೇ 274.3ರಷ್ಟು ಆಸ್ತಿ ಹೊಂದಿದ್ದಾರೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ. </p><p>ದಾಳಿ ವೇಳೆ ಡಿವೈಎಸ್ಪಿ ಎಸ್.ಹೊಸಮನಿ, ಪಿಐಗಳಾದ ಬಾಬಾಸಾಹೇಬ ಪಾಟೀಲ, ರಾಜಶೇಖರ ಹಲಗೋಡಿ, ಸಂತೋಷ ರಾಠೋಡ, ಸಿದ್ದಯ್ಯ ಬೈರೋಗಿ, ಸಂಗಮೇಶ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ</strong>: ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಜಿಲ್ಲೆಯ ಸುರಪುರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕಗೆ ಸೇರಿದ ಐದು ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ಮಾಡಿ ಹಣ, ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.</p><p>ಯಾದಗಿರಿ ಲೋಕಾಯುಕ್ತ ಡಿವೈಎಸ್ಪಿ ಜೆ.ಎಚ್.ಇನಾಂದಾರ ನೇತೃತ್ವದಲ್ಲಿ ಟಿಎಚ್ಒ ಕಚೇರಿ, ಅದಿತಿ ಹೊಟೇಲ್, ಪೆಟ್ರೋಲ್ ಬಂಕ್, ಖಾಸಗಿ ಆಸ್ಪತ್ರೆ ಸೇರಿ ಐದು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸುರಪುರ ನಗರದಲ್ಲಿರುವ ಡಾ.ಆರ್.ವಿ.ನಾಯಕ ಮನೆ, ಕಲಬುರಗಿಯ ಮನೆ ಮೇಲೂ ದಾಳಿ ಮಾಡಲಾಗಿದೆ. </p><p><strong>ಭರ್ಜರಿ ಬೇಟೆ:</strong></p><p>ಲೋಕಾಯುಕ್ತರ ದಾಳಿ ವೇಳೆ ಸುರಪುರ ನಗರದ ಮನೆಯಲ್ಲೇ ಇದ್ದ ಡಾ.ಆರ್.ವಿ.ನಾಯಕ, ಅಂದಾಜು ಸ್ಥಿರ ಆಸ್ತಿಗಳ ಮೌಲ್ಯ ₹11.5 ಕೋಟಿ ಆಗಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ. </p><p>11 ನಿವೇಶನಗಳ ಮೌಲ್ಯ ₹45 ಲಕ್ಷ, 2 ಮನೆಗಳಿದ್ದು, ₹3 ಕೋಟಿ ಮೌಲ್ಯ ಹೊಂದಿವೆ. 13 ಎಕರೆ ಕೃಷಿ ಭೂಮಿ ಇದ್ದು, ₹20 ಲಕ್ಷ ಮೌಲ್ಯ ಹೊಂದಿವೆ. </p><p>ಇದರ ಜೊತೆಗೆ ₹40 ಮೌಲ್ಯದ ಒಂದು ಪೆಟ್ರೋಲ್ ಬಂಕ್, ಖಾಸಗಿ ನರ್ಸಿಂಗ್ ಹೋಂ ₹1.5 ಕೋಟಿ, ಖಾಸಗಿ ಲಾಡ್ಜ್ ಮತ್ತು ಬಾರ್ ಮೌಲ್ಯ ₹5.5 ಕೋಟಿ, ಚರ ಆಸ್ತಿ ₹1.54 ಕೋಟಿ, ದಾಳಿ ವೇಳೆ ₹4.10 ಲಕ್ಷ, ₹60 ಲಕ್ಷ ಮೌಲ್ಯದ ಆಭರಣಗಳು, ₹70 ಲಕ್ಷ ಮೌಲ್ಯದ ಕಾರು ಸೇರಿದಂತೆ ಇತರೆ ₹20 ಲಕ್ಷ ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ.</p><p>ಡಾ.ಆರ್.ವಿ.ನಾಯಕ ಒಟ್ಟು ₹ 9.87 ಕೋಟಿ, ಶೇ 274.3ರಷ್ಟು ಆಸ್ತಿ ಹೊಂದಿದ್ದಾರೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ. </p><p>ದಾಳಿ ವೇಳೆ ಡಿವೈಎಸ್ಪಿ ಎಸ್.ಹೊಸಮನಿ, ಪಿಐಗಳಾದ ಬಾಬಾಸಾಹೇಬ ಪಾಟೀಲ, ರಾಜಶೇಖರ ಹಲಗೋಡಿ, ಸಂತೋಷ ರಾಠೋಡ, ಸಿದ್ದಯ್ಯ ಬೈರೋಗಿ, ಸಂಗಮೇಶ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>