<p><strong>ಯಾದಗಿರಿ</strong>: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದ ಮೆಣಸಿನಕಾಯಿ ಈ ಬಾರಿ ಘಾಟು ಕಳೆದುಕೊಂಡಿದ್ದು, ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ.</p>.<p>ಜಿಲ್ಲೆಯಲ್ಲಿ 2,812 ಹೆಕ್ಟೇರ್ನಲ್ಲಿ ಮೆಣಸಿಕಾಯಿ ಬೆಳೆ ಇದೆ. ಶಹಾಪುರ ತಾಲ್ಲೂಕಿನಲ್ಲಿ ಅಂದಾಜು 2,000 ಹೆಕ್ಟೇರ್, ಸುರಪುರ, ಹುಣಸಗಿ ತಾಲ್ಲೂಕಿನಲ್ಲಿ 800 ಹೆಕ್ಟೇರ್ ಮೆಣಸಿನಕಾಯಿ ಬೆಳೆ ಇದೆ. 2,241 ಕ್ವಿಂಟಲ್ ಅಂದಾಜು ಉತ್ಪಾದನೆ ಇದೆ.</p>.<p>ಗುಂಟೂರು ಖಾರದ ಮೆಣಸಿನಕಾಯಿ ಹಾಗೂ ಬ್ಯಾಡಗಿ ಮೆಣಸಿನಕಾಯಿ ಬೆಳೆಗಾರರು ಪ್ರತಿವರ್ಷ ಲಕ್ಷಾಂತರ ರೂಪಾಯಿ ಲಾಭ ಪಡೆಯುತ್ತಿದ್ದರು. ಈ ವರ್ಷ ಬೆಳೆ ಇಳಿಕೆಯಿಂದ ಜಂಘಾಬಲವೇ ಉಡುಗಿ ಹೋಗಿದೆ.</p>.<p>ಪಕ್ಕದ ರಾಜ್ಯಕ್ಕೆ ಮಾರಾಟ</p>.<p>ಜಿಲ್ಲೆಯಲ್ಲಿ ಬೆಳೆಯುವ ಬ್ಯಾಡಗಿ, ಗುಂಟೂರು ಮೆಣಸಿನಕಾಯಿಯನ್ನು ಹಾವೇರಿ ಜಿಲ್ಲೆ ಬ್ಯಾಡಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಸಾಮಾನ್ಯ. ಆದರೆ, ಈ ಬಾರಿ ಬೆಲೆ ಇಲ್ಲದ ಕಾರಣ ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಮಾರಾಟ ಮಾಡುತ್ತಿದ್ದಾರೆ.</p>.<p>ಶಹಾಪುರ ತಾಲ್ಲೂಕಿನ ಮೂಡಬೂಳ ಗ್ರಾಮದ ಬೆಳೆಗಾರರು ಕಳೆದ ಕೆಲವು ದಿನಗಳಿಂದ ಸೊಲ್ಲಾಪುರ ಮಾರುಕಟ್ಟೆಗೆ ಬೆಳೆ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ, ಪ್ರತಿ ಕ್ವಿಂಟಲ್ಗೆ ₹12 ಸಾವಿರ ಇದ್ದ ಬೆಲೆ ₹8ಸಾವಿರಕ್ಕೆ ಇಳಿಕೆಯಾಗಿದೆ. ದರ ಬರುವ ವರೆಗೆ ದಾಸ್ತಾನು ಇಡಲು ಸೂಕ್ತ ಶೀಥಲೀಕರಣ ವ್ಯವಸ್ಥೆ ಇಲ್ಲ. ಎಕರೆಗೆ ಕನಿಷ್ಠ ₹1.25 ಲಕ್ಷ ಖರ್ಚು ಮಾಡಿದ ಬೆಳೆಗಾರರ ಗೋಳು ಕೇಳುವವರು ಇಲ್ಲದಂತಾಗಿದೆ ಎನ್ನುತ್ತಾರೆ ಬೆಳೆಗಾರರು.</p>.<p>‘ಶಹಾಪುರ ತಾಲ್ಲೂಕಿನ ರೈತರು ಸೊಲ್ಲಾಪುರ ಕಡೆ ತೆಗೆದುಕೊಂಡು ಹೋಗುತ್ತಿದ್ದಾರೆ. ಸಂಗ್ರಹಣೆ ಮಾಡಿಕೊಳ್ಳಲು ಶೀಥಲೀಕರಣ ಇಲ್ಲದಿರುವುದು ಕೂಡ ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ’ ಎನ್ನುತ್ತಾರೆ ಪ್ರಗತಿಪರ ರೈತ ಅಶೋಕ ಮಲ್ಲಾಬಾದಿ.</p>.<p>ಗುಂಟೂರು ಖಾರದ ಮೆಣಸಿನಕಾಯಿ ಬೆಳೆಗೆ ಕ್ಟಿಂಟಲ್ಗೆ ಉತ್ಪಾದನಾ ವೆಚ್ಚವನ್ನು ₹12,675 ದರ ನಿಗದಿ ಪಡಿಸಿದೆ. ಆದರೆ, ಸರ್ಕಾರವಾಗಲಿ, ವ್ಯಾಪಾರಿಗಳಾಗಲಿ ದರದಲ್ಲಿ ಯಾರೂ ಈ ದರಕ್ಕೆ ಖರೀದಿಸುತ್ತಿಲ್ಲ. ಪಕ್ಕದ ರಾಜ್ಯ ಆಂಧ್ರ ಪ್ರದೇಶದಲ್ಲಿ ರೈತರು ಬೆಳೆದ ಮೆಣಸಿನ ಕಾಯಿಬೆಳೆಗೆ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುತ್ತಿದೆ. ಉತ್ಪಾದನೆಯ ಶೇ 25ರಷ್ಟು ಕೆಂಪು ಮೆಣಸಿನಕಾಯಿ ಕ್ಟಿಂಟಲ್ಗೆ ₹11,781 ಕನಿಷ್ಠ ದರ ನಿಗದಿ ಪಡಿಸಿದೆ. ಈ ಸೌಲಭ್ಯವನ್ನು ಕರ್ನಾಟಕ ವಿಸ್ತರಿಸಬೇಕು ಬೇಕು ಎನ್ನುವುದು ಬೆಳೆಗಾರರ ಆಗ್ರಹವಾಗಿದೆ.</p>.<p>ಬಾಡಗಿ ಕ್ವಿಂಟಲ್ಗೆ ₹14–22 ಸಾವಿರ ಬ್ಯಾಡಗಿ ಡಬ್ಬಿ ₹30–36 ಸಾವಿರ ಬ್ಯಾಡಗಿ ಕಡ್ಡಿ ₹10 ರಿಂದ 30 ಸಾವಿರ ಗುಂಟೂರು ₹10 ರಿಂದ 17 ಸಾವಿರ ಇತರೆ ₹8 ಸಾವಿರ ಬೆಲೆ ಇದೆ. ಅಂದಾಜು 700 ಬೆಳೆಗಾರರಿದ್ದಾರೆ</p><p>–ರಾಘವೇಂದ್ರ ಉಕ್ಕನಾಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕ</p>.<p>ಮೆಣಸಿನಕಾಯಿ ಕ್ವಿಂಟಲ್ಗೆ ₹8 ರಿಂದ 9ಸಾವಿರಗೆ ಮಾರಾಟವಾಗುತ್ತಿದ್ದು ರೈತರಿಗೆ ₹3–4 ಲಕ್ಷ ನಷ್ಟವಾಗುತ್ತಿದೆ. ಬ್ಯಾಡಗಿ ಮಾರುಕಟ್ಟೆಗೆ ಮೆಣಸಿನಕಾಯಿ ತರಬೇಡಿ ಎಂದು ಹೇಳುತ್ತಿದ್ದಾರೆ</p><p>–ಅಶೋಕ ಮಲ್ಲಾಬಾದಿ ಪ್ರಗತಿಪರ ರೈತ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ</strong>: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದ ಮೆಣಸಿನಕಾಯಿ ಈ ಬಾರಿ ಘಾಟು ಕಳೆದುಕೊಂಡಿದ್ದು, ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ.</p>.<p>ಜಿಲ್ಲೆಯಲ್ಲಿ 2,812 ಹೆಕ್ಟೇರ್ನಲ್ಲಿ ಮೆಣಸಿಕಾಯಿ ಬೆಳೆ ಇದೆ. ಶಹಾಪುರ ತಾಲ್ಲೂಕಿನಲ್ಲಿ ಅಂದಾಜು 2,000 ಹೆಕ್ಟೇರ್, ಸುರಪುರ, ಹುಣಸಗಿ ತಾಲ್ಲೂಕಿನಲ್ಲಿ 800 ಹೆಕ್ಟೇರ್ ಮೆಣಸಿನಕಾಯಿ ಬೆಳೆ ಇದೆ. 2,241 ಕ್ವಿಂಟಲ್ ಅಂದಾಜು ಉತ್ಪಾದನೆ ಇದೆ.</p>.<p>ಗುಂಟೂರು ಖಾರದ ಮೆಣಸಿನಕಾಯಿ ಹಾಗೂ ಬ್ಯಾಡಗಿ ಮೆಣಸಿನಕಾಯಿ ಬೆಳೆಗಾರರು ಪ್ರತಿವರ್ಷ ಲಕ್ಷಾಂತರ ರೂಪಾಯಿ ಲಾಭ ಪಡೆಯುತ್ತಿದ್ದರು. ಈ ವರ್ಷ ಬೆಳೆ ಇಳಿಕೆಯಿಂದ ಜಂಘಾಬಲವೇ ಉಡುಗಿ ಹೋಗಿದೆ.</p>.<p>ಪಕ್ಕದ ರಾಜ್ಯಕ್ಕೆ ಮಾರಾಟ</p>.<p>ಜಿಲ್ಲೆಯಲ್ಲಿ ಬೆಳೆಯುವ ಬ್ಯಾಡಗಿ, ಗುಂಟೂರು ಮೆಣಸಿನಕಾಯಿಯನ್ನು ಹಾವೇರಿ ಜಿಲ್ಲೆ ಬ್ಯಾಡಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಸಾಮಾನ್ಯ. ಆದರೆ, ಈ ಬಾರಿ ಬೆಲೆ ಇಲ್ಲದ ಕಾರಣ ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಮಾರಾಟ ಮಾಡುತ್ತಿದ್ದಾರೆ.</p>.<p>ಶಹಾಪುರ ತಾಲ್ಲೂಕಿನ ಮೂಡಬೂಳ ಗ್ರಾಮದ ಬೆಳೆಗಾರರು ಕಳೆದ ಕೆಲವು ದಿನಗಳಿಂದ ಸೊಲ್ಲಾಪುರ ಮಾರುಕಟ್ಟೆಗೆ ಬೆಳೆ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ, ಪ್ರತಿ ಕ್ವಿಂಟಲ್ಗೆ ₹12 ಸಾವಿರ ಇದ್ದ ಬೆಲೆ ₹8ಸಾವಿರಕ್ಕೆ ಇಳಿಕೆಯಾಗಿದೆ. ದರ ಬರುವ ವರೆಗೆ ದಾಸ್ತಾನು ಇಡಲು ಸೂಕ್ತ ಶೀಥಲೀಕರಣ ವ್ಯವಸ್ಥೆ ಇಲ್ಲ. ಎಕರೆಗೆ ಕನಿಷ್ಠ ₹1.25 ಲಕ್ಷ ಖರ್ಚು ಮಾಡಿದ ಬೆಳೆಗಾರರ ಗೋಳು ಕೇಳುವವರು ಇಲ್ಲದಂತಾಗಿದೆ ಎನ್ನುತ್ತಾರೆ ಬೆಳೆಗಾರರು.</p>.<p>‘ಶಹಾಪುರ ತಾಲ್ಲೂಕಿನ ರೈತರು ಸೊಲ್ಲಾಪುರ ಕಡೆ ತೆಗೆದುಕೊಂಡು ಹೋಗುತ್ತಿದ್ದಾರೆ. ಸಂಗ್ರಹಣೆ ಮಾಡಿಕೊಳ್ಳಲು ಶೀಥಲೀಕರಣ ಇಲ್ಲದಿರುವುದು ಕೂಡ ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ’ ಎನ್ನುತ್ತಾರೆ ಪ್ರಗತಿಪರ ರೈತ ಅಶೋಕ ಮಲ್ಲಾಬಾದಿ.</p>.<p>ಗುಂಟೂರು ಖಾರದ ಮೆಣಸಿನಕಾಯಿ ಬೆಳೆಗೆ ಕ್ಟಿಂಟಲ್ಗೆ ಉತ್ಪಾದನಾ ವೆಚ್ಚವನ್ನು ₹12,675 ದರ ನಿಗದಿ ಪಡಿಸಿದೆ. ಆದರೆ, ಸರ್ಕಾರವಾಗಲಿ, ವ್ಯಾಪಾರಿಗಳಾಗಲಿ ದರದಲ್ಲಿ ಯಾರೂ ಈ ದರಕ್ಕೆ ಖರೀದಿಸುತ್ತಿಲ್ಲ. ಪಕ್ಕದ ರಾಜ್ಯ ಆಂಧ್ರ ಪ್ರದೇಶದಲ್ಲಿ ರೈತರು ಬೆಳೆದ ಮೆಣಸಿನ ಕಾಯಿಬೆಳೆಗೆ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುತ್ತಿದೆ. ಉತ್ಪಾದನೆಯ ಶೇ 25ರಷ್ಟು ಕೆಂಪು ಮೆಣಸಿನಕಾಯಿ ಕ್ಟಿಂಟಲ್ಗೆ ₹11,781 ಕನಿಷ್ಠ ದರ ನಿಗದಿ ಪಡಿಸಿದೆ. ಈ ಸೌಲಭ್ಯವನ್ನು ಕರ್ನಾಟಕ ವಿಸ್ತರಿಸಬೇಕು ಬೇಕು ಎನ್ನುವುದು ಬೆಳೆಗಾರರ ಆಗ್ರಹವಾಗಿದೆ.</p>.<p>ಬಾಡಗಿ ಕ್ವಿಂಟಲ್ಗೆ ₹14–22 ಸಾವಿರ ಬ್ಯಾಡಗಿ ಡಬ್ಬಿ ₹30–36 ಸಾವಿರ ಬ್ಯಾಡಗಿ ಕಡ್ಡಿ ₹10 ರಿಂದ 30 ಸಾವಿರ ಗುಂಟೂರು ₹10 ರಿಂದ 17 ಸಾವಿರ ಇತರೆ ₹8 ಸಾವಿರ ಬೆಲೆ ಇದೆ. ಅಂದಾಜು 700 ಬೆಳೆಗಾರರಿದ್ದಾರೆ</p><p>–ರಾಘವೇಂದ್ರ ಉಕ್ಕನಾಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕ</p>.<p>ಮೆಣಸಿನಕಾಯಿ ಕ್ವಿಂಟಲ್ಗೆ ₹8 ರಿಂದ 9ಸಾವಿರಗೆ ಮಾರಾಟವಾಗುತ್ತಿದ್ದು ರೈತರಿಗೆ ₹3–4 ಲಕ್ಷ ನಷ್ಟವಾಗುತ್ತಿದೆ. ಬ್ಯಾಡಗಿ ಮಾರುಕಟ್ಟೆಗೆ ಮೆಣಸಿನಕಾಯಿ ತರಬೇಡಿ ಎಂದು ಹೇಳುತ್ತಿದ್ದಾರೆ</p><p>–ಅಶೋಕ ಮಲ್ಲಾಬಾದಿ ಪ್ರಗತಿಪರ ರೈತ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>