ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಗೆ ಸೋಲಿನ ಭೀತಿ ಫಲಿತಾಂಶ ಬರುವ ಮುಂಚೆಯೇ ಕಾಡುತ್ತಿದೆ. ಸುಳ್ಳು ಹೇಳಿ ಗೆಲವು ಸಾಧಿಸಲು ಸಾಧ್ಯವಿಲ್ಲ ಎಂದು ಮನವರಿಕೆಯಾದ ಬಳಿಕ ರಾಜ್ಯದಲ್ಲಿ ರಾಜಕೀಯ ರಾಡಿ ಎಬ್ಬಿಸುವ ಕೆಲಸಕ್ಕೆ ಮುಂದಾಗಿದೆ. ಎಲ್ಲಿ ಹೋಯಿತು ರಾಜ್ಯದಲ್ಲಿ 28 ಸ್ಥಾನ ಪಡೆಯುತ್ತೇವೆ ಎಂಬ ಬಿಜೆಪಿ ಮುತ್ಸದ್ದಿಗಳ ಮಾತು. ರಾಜ್ಯದಲ್ಲಿ ಮತದಾನದ ನಂತರ ಬಿಜೆಪಿಯ ಬಣ್ಣದ ನಾಟಕದ ಮಾತು ಬದಲಾಗುತ್ತಲಿವೆ’ ಎಂದು ಛೇಡಿಸಿದರು.