ನಗರಕ್ಕೆ ದೊಡ್ಡ ರಾಜಕಾರಣಿಗಳು ಬಂದಾಗ ಯಾದಗಿರಿ ಐತಿಹಾಸಿಕ ಬೆಟ್ಟವನ್ನು ಜಿಲ್ಲಾಡಳಿತದ ಮೇಲಧಿಕಾರಿಗಳು ವೀಕ್ಷಣೆಗೆ ಕರೆದುಕೊಂಡು ಹೋಗುತ್ತಾರೆ. ಆದರೆ, ಅಲ್ಲಿ ಇದ್ದ ತೋಪುಗಳು ಇನ್ನಿತರ ವಸ್ತುಗಳು ರಕ್ಷಣೆ ಮಾಡುತ್ತಿಲ್ಲ. ಇದಕ್ಕೆ ನೇರ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.