<p><strong>ಸುರಪುರ:</strong> ‘ಇಲ್ಲಿಯ ನ್ಯಾಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 1,145 ಪ್ರಕರಣ ಇತ್ಯರ್ಥ ಪಡಿಸಿ, ₹2,39,95,993 ಪರಿಹಾರ ಪಾವತಿಗೆ ಆದೇಶಿಸಲಾಗಿದೆ’ ಎಂದು ಹಿರಿಯ ಶ್ರೇಣಿಯ ನ್ಯಾಯಾಧೀಶೆ ಫಕೀರವ್ವ ಕೆಳಗೇರಿ ತಿಳಿಸಿದರು.</p>.<p>‘ಅಪರಾಧ, ಚೆಕ್ಬೌನ್ಸ್, ಮೋಟಾರು ಅಪಘಾತ ಸೇರಿದಂತೆ ಕಿರಿಯ ಶ್ರೇಣಿ ನ್ಯಾಯಾಲಯದ 860, ಪ್ರಧಾನ ಸಿವಿಲ್ ನ್ಯಾಯಾಲಯದ 698, ಹೆಚ್ಚುವರಿ ಸಿವಿಲ್ ನ್ಯಾಯಾಲಯದ 931 ಸೇರಿ ಮೂರು ಕೋರ್ಟ್ಗಳಲ್ಲಿ ಒಟ್ಟು 2,489 ಪ್ರಕರಣಗಳನ್ನು ವಿಚಾರಣೆ ನಡೆಸಲಾಗಿತ್ತು’ ಎಂದರು.</p>.<p>‘ಲೋಕ ಅದಾಲತ್ನಲ್ಲಿ ಸೋಲು–ಗೆಲುವಿನ ಪ್ರಶ್ನೆಯೇ ಬರಲ್ಲ. ಎರಡು ಕಡೆಯ ಕಕ್ಷಿದಾರರಿಗೆ ನ್ಯಾಯ ಸಿಗುತ್ತದೆ. ಸಮಯ, ಹಣ ಎರಡೂ ಉಳಿಯುತ್ತದೆ. ಅಲೆದಾಟವೂ ತಪ್ಪುತ್ತದೆ. ಕಕ್ಷಿದಾರರಿಗೆ ನೆಮ್ಮದಿ ದೊರಕುತ್ತದೆ’ ಎಂದರು.</p>.<p>ಹೆಚ್ಚುವರಿ ನ್ಯಾಯಾಧೀಶ ಬಸವರಾಜ ಅದಾಲತ್ ನಡೆಸಿದರು. ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಜ್ಯೋತಿ ನಾಯಕ, ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಶರಣಬಸಪ್ಪ ಕೆ., ಹೆಚ್ಚುವರಿ ನ್ಯಾಯಾಲಯದಲ್ಲಿ ಸಂತೋಷಕುಮಾರ ಗಾರಂಪಳ್ಳಿ ಸಂಧಾನಕಾರರಾಗಿ ಕೆಲಸ ನಿರ್ವಹಿಸಿದರು.</p>.<p>ವಕೀಲರಾದ ಬಿ.ಎಚ್.ಕಿಲ್ಲೆದಾರ. ಜಿ.ಆರ್.ಬನ್ನಾಳ, ಮಹಮ್ಮದ್ ಹುಸೇನ್, ದೇವಿಂದ್ರಪ್ಪ ಬೇವಿನಕಟ್ಟಿ, ಮನೋಹರ ಕುಂಟೋಜಿ, ಛಾಯಾ ಕುಂಟೋಜಿ, ಮಂಜುನಾಥ ಹುದ್ದಾರ, ಆದಪ್ಪ ಹೊಸಮನಿ, ಸುರೇಂದ್ರ ದೊಡ್ಮನಿ, ಎಂ.ಎಂ.ಬಡಿಗೇರ, ಮಲ್ಲು ಬೋವಿ, ಹಯ್ಯಾಳಪ್ಪ ಕಿಲ್ಲೇದಾರ, ರವಿ ನಾಯಕ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ:</strong> ‘ಇಲ್ಲಿಯ ನ್ಯಾಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 1,145 ಪ್ರಕರಣ ಇತ್ಯರ್ಥ ಪಡಿಸಿ, ₹2,39,95,993 ಪರಿಹಾರ ಪಾವತಿಗೆ ಆದೇಶಿಸಲಾಗಿದೆ’ ಎಂದು ಹಿರಿಯ ಶ್ರೇಣಿಯ ನ್ಯಾಯಾಧೀಶೆ ಫಕೀರವ್ವ ಕೆಳಗೇರಿ ತಿಳಿಸಿದರು.</p>.<p>‘ಅಪರಾಧ, ಚೆಕ್ಬೌನ್ಸ್, ಮೋಟಾರು ಅಪಘಾತ ಸೇರಿದಂತೆ ಕಿರಿಯ ಶ್ರೇಣಿ ನ್ಯಾಯಾಲಯದ 860, ಪ್ರಧಾನ ಸಿವಿಲ್ ನ್ಯಾಯಾಲಯದ 698, ಹೆಚ್ಚುವರಿ ಸಿವಿಲ್ ನ್ಯಾಯಾಲಯದ 931 ಸೇರಿ ಮೂರು ಕೋರ್ಟ್ಗಳಲ್ಲಿ ಒಟ್ಟು 2,489 ಪ್ರಕರಣಗಳನ್ನು ವಿಚಾರಣೆ ನಡೆಸಲಾಗಿತ್ತು’ ಎಂದರು.</p>.<p>‘ಲೋಕ ಅದಾಲತ್ನಲ್ಲಿ ಸೋಲು–ಗೆಲುವಿನ ಪ್ರಶ್ನೆಯೇ ಬರಲ್ಲ. ಎರಡು ಕಡೆಯ ಕಕ್ಷಿದಾರರಿಗೆ ನ್ಯಾಯ ಸಿಗುತ್ತದೆ. ಸಮಯ, ಹಣ ಎರಡೂ ಉಳಿಯುತ್ತದೆ. ಅಲೆದಾಟವೂ ತಪ್ಪುತ್ತದೆ. ಕಕ್ಷಿದಾರರಿಗೆ ನೆಮ್ಮದಿ ದೊರಕುತ್ತದೆ’ ಎಂದರು.</p>.<p>ಹೆಚ್ಚುವರಿ ನ್ಯಾಯಾಧೀಶ ಬಸವರಾಜ ಅದಾಲತ್ ನಡೆಸಿದರು. ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಜ್ಯೋತಿ ನಾಯಕ, ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಶರಣಬಸಪ್ಪ ಕೆ., ಹೆಚ್ಚುವರಿ ನ್ಯಾಯಾಲಯದಲ್ಲಿ ಸಂತೋಷಕುಮಾರ ಗಾರಂಪಳ್ಳಿ ಸಂಧಾನಕಾರರಾಗಿ ಕೆಲಸ ನಿರ್ವಹಿಸಿದರು.</p>.<p>ವಕೀಲರಾದ ಬಿ.ಎಚ್.ಕಿಲ್ಲೆದಾರ. ಜಿ.ಆರ್.ಬನ್ನಾಳ, ಮಹಮ್ಮದ್ ಹುಸೇನ್, ದೇವಿಂದ್ರಪ್ಪ ಬೇವಿನಕಟ್ಟಿ, ಮನೋಹರ ಕುಂಟೋಜಿ, ಛಾಯಾ ಕುಂಟೋಜಿ, ಮಂಜುನಾಥ ಹುದ್ದಾರ, ಆದಪ್ಪ ಹೊಸಮನಿ, ಸುರೇಂದ್ರ ದೊಡ್ಮನಿ, ಎಂ.ಎಂ.ಬಡಿಗೇರ, ಮಲ್ಲು ಬೋವಿ, ಹಯ್ಯಾಳಪ್ಪ ಕಿಲ್ಲೇದಾರ, ರವಿ ನಾಯಕ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>