<p><strong>ಯಾದಗಿರಿ: </strong>ಜಿಲ್ಲೆಯ ಹುಣಸಗಿ ತಾಲ್ಲೂಕಿನ ಹಗರಟಗಿ ಗ್ರಾಮದಲ್ಲಿ 101 ದೇವಸ್ಥಾನ, ಅದರ ಪಕ್ಕದಲ್ಲಿ 101 ಬಾವಿಗಳಿರುವುದು ವಿಶೇಷವಾಗಿದೆ. ಪುರಾಣ ಪ್ರಸಿದ್ಧವಾದ ಈ ಗ್ರಾಮದಲ್ಲಿ ಚಾಲುಕ್ಯರ ಶೈಲಿಯ ದೇವಸ್ಥಾನ,<br />ಅವರಿಗೆ ಸಂಬಂಧಿಸಿದ ಲಾಂಛನ ಇರುವುದನ್ನು ಕಾಣಬಹುದಾಗಿದೆ.</p>.<p>ದೇವಸ್ಥಾನಗಳನ್ನು ಕಲ್ಲು, ಮಣ್ಣಿನಿಂದ ನಿರ್ಮಿಸಲಾಗಿದೆ. ದೇಗುಲಕ್ಕೆ ನೀರಿನ ಅವಶ್ಯಕತೆ ಇರುವುದರಿಂದ ದೇಗುಲ ಕಟ್ಟುವ ಜಾಗದಲ್ಲಿ ಬಾವಿ ತೊಡಲಾಗಿದೆ. ಹೀಗಾಗಿ ದೇವಸ್ಥಾನಗಳ ಪಕ್ಕದಲ್ಲಿ ಬಾವಿಗಳಿವೆ. ಗ್ರಾಮದಲ್ಲಿ 101 ಕೆರೆಗಳೂ ಇದ್ದವು ಎನ್ನುತ್ತಾರೆ ಗ್ರಾಮಸ್ಥರು.</p>.<p>‘ನಮ್ಮ ಹಿರಿಯರು ಅಂತರ್ಜಲ ಮೂಲವನ್ನು ತಿಳಿದುಕೊಂಡಿದ್ದರು. ಹೀಗಾಗಿ ಬಾವಿ, ಕೆರೆ ಕಟ್ಟಿ ಗ್ರಾಮಕ್ಕೆ ನೀರಿನ ವ್ಯವಸ್ಥೆ ಮಾಡಿದ್ದರು ಎನ್ನುತ್ತಾರೆ’ ಗ್ರಾಮಸ್ಥರಾದ ಕಾಶಿನಾಥ, ಶಿವಕುಮಾರ.</p>.<p class="Subhead">ಪಂಚ ಪಾಂಡವರ ದೇಗುಲ: ಗ್ರಾಮದಲ್ಲಿ ಪಂಚ ಪಾಂಡವರ ದೇಗುಲಗಳೂ ಇವೆ. ಧರ್ಮರಾಯ, ಅರ್ಜುನ, ಭೀಮ, ನಕುಲ, ಸಹದೇವ, ಕುಂತಿ ದೇವಿ ದೇವಸ್ಥಾನ ಇದೆ. ಪಾಂಡವರು ವನವಾಸದ ವೇಳೆ ಈ ಮಾರ್ಗವಾಗಿ ಬಂದಿದ್ದರು. ಹೀಗಾಗಿ ಪಾಂಡವರ ದೇಗುಲ ನಿರ್ಮಿಸಿರಬೇಕು ಎಂಬುದು ಗ್ರಾಮಸ್ಥರ ಅನಿಸಿಕೆ.</p>.<p>ಪ್ರತಿ ವರ್ಷ ಗ್ರಾಮದಲ್ಲಿ ಯುಗಾದಿ ವೇಳೆ ಧರ್ಮರಾಯನ ಜಾತ್ರೆ ನಡೆಯುತ್ತದೆ. ಚಿಕ್ಕ ರಥವನ್ನು ಮಹಿಳೆಯರು ಎಳೆದರೆ, ದೊಡ್ಡ ರಥವನ್ನು ಪುರುಷರು ಎಳೆಯುತ್ತಾರೆ. ಇದರಿಂದ ಇಲ್ಲಿ ಸ್ತ್ರೀಯರಿಗೂ ರಥ ಎಳೆಯುವ ಧಾರ್ಮಿಕ<br />ಕೈಂಕರ್ಯವನ್ನು ಕಲ್ಪಿಸಿಕೊಡಲಾಗಿದೆ.</p>.<p>'ಈಗ ಗ್ರಾಮದಲ್ಲಿ 101 ದೇವಸ್ಥಾನವೂ ಇಲ್ಲ, ಬಾವಿಗಳೂ ಇಲ್ಲ. ನಿಧಿ ಆಸೆಗಾಗಿ ದೇಗುಲವನ್ನು ಹಾಳುಗಡೆವಿದ್ದಾರೆ. ಇದರಿಂದ ಹಲವಾರು ದೇಗುಲಗಳು ಶಿಥಿಲಗೊಂಡಿವೆ. ಹೆಸರಿಗೆ ಮಾತ್ರ ಹೇಳಿಕೊಳ್ಳಲು ದೇಗುಲ, ಬಾವಿ, ಕೆರೆಗಳಿವೆ' ಎನ್ನುತ್ತಾರೆ ಗ್ರಾಮದ ಮುಖಂಡ ಅರುಣಕುಮಾರ ಮಲ್ಕಾಪುರ.</p>.<p>ಇಲ್ಲಿಯ ಮತ್ತೊಂದು ವಿಶೇಷವೆಂದರೆ ಧರ್ಮರಾಯನ ಗರ್ಭಗುಡಿಯಲ್ಲಿರುವ ಲಿಂಗವು ಎಡಗಡೆ ಮುಖ ಹೊಂದಿದೆ. ಬೇರೆ ದೇವಸ್ಥಾನಗಳಲ್ಲಿ ಬಲಗಡೆ ಮುಖ ಹೊಂದಿದೆ. ಇಂಥ<br />ಚರಿತ್ರೆ ಹೊಂದಿರುವ ಗ್ರಾಮದ ದೇವಸ್ಥಾನ, ಬಾವಿಗಳನ್ನು<br />ಸಂರಕ್ಷಿಸಬೇಕಾಗಿದೆ.</p>.<p>***</p>.<p>ಭೀಮನ ದೇವಸ್ಥಾನದ ಕಂಬಗಳಲ್ಲಿ ತಣ್ಣನೆಯ ನೀರು ಜಿನುಗಿದಂತೆ ಭಾಸವಾಗುತ್ತದೆ. ಇಲ್ಲಿ ಎಲ್ಲ ಕಾಲದಲ್ಲಿ ತಂಪಿನ ವಾತಾವರಣ ಇರುತ್ತದೆ</p>.<p>ಗುರು ಬಂಡಿ, ಗ್ರಾಮಸ್ಥ</p>.<p>***</p>.<p>ಗ್ರಾಮವೂ ಐತಿಹಾಸಿಕ ಸ್ಥಳಗಳನ್ನು ಹೊಂದಿದೆ. ಇವುಗಳನ್ನು ಪುರಾತತ್ವ ಇಲಾಖೆ ಸಂರಕ್ಷಣೆ ಮಾಡಬೇಕು ಅರುಣಕುಮಾರ ಮಲ್ಕಾಪುರ,ಗ್ರಾಮಸ್ಥ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: </strong>ಜಿಲ್ಲೆಯ ಹುಣಸಗಿ ತಾಲ್ಲೂಕಿನ ಹಗರಟಗಿ ಗ್ರಾಮದಲ್ಲಿ 101 ದೇವಸ್ಥಾನ, ಅದರ ಪಕ್ಕದಲ್ಲಿ 101 ಬಾವಿಗಳಿರುವುದು ವಿಶೇಷವಾಗಿದೆ. ಪುರಾಣ ಪ್ರಸಿದ್ಧವಾದ ಈ ಗ್ರಾಮದಲ್ಲಿ ಚಾಲುಕ್ಯರ ಶೈಲಿಯ ದೇವಸ್ಥಾನ,<br />ಅವರಿಗೆ ಸಂಬಂಧಿಸಿದ ಲಾಂಛನ ಇರುವುದನ್ನು ಕಾಣಬಹುದಾಗಿದೆ.</p>.<p>ದೇವಸ್ಥಾನಗಳನ್ನು ಕಲ್ಲು, ಮಣ್ಣಿನಿಂದ ನಿರ್ಮಿಸಲಾಗಿದೆ. ದೇಗುಲಕ್ಕೆ ನೀರಿನ ಅವಶ್ಯಕತೆ ಇರುವುದರಿಂದ ದೇಗುಲ ಕಟ್ಟುವ ಜಾಗದಲ್ಲಿ ಬಾವಿ ತೊಡಲಾಗಿದೆ. ಹೀಗಾಗಿ ದೇವಸ್ಥಾನಗಳ ಪಕ್ಕದಲ್ಲಿ ಬಾವಿಗಳಿವೆ. ಗ್ರಾಮದಲ್ಲಿ 101 ಕೆರೆಗಳೂ ಇದ್ದವು ಎನ್ನುತ್ತಾರೆ ಗ್ರಾಮಸ್ಥರು.</p>.<p>‘ನಮ್ಮ ಹಿರಿಯರು ಅಂತರ್ಜಲ ಮೂಲವನ್ನು ತಿಳಿದುಕೊಂಡಿದ್ದರು. ಹೀಗಾಗಿ ಬಾವಿ, ಕೆರೆ ಕಟ್ಟಿ ಗ್ರಾಮಕ್ಕೆ ನೀರಿನ ವ್ಯವಸ್ಥೆ ಮಾಡಿದ್ದರು ಎನ್ನುತ್ತಾರೆ’ ಗ್ರಾಮಸ್ಥರಾದ ಕಾಶಿನಾಥ, ಶಿವಕುಮಾರ.</p>.<p class="Subhead">ಪಂಚ ಪಾಂಡವರ ದೇಗುಲ: ಗ್ರಾಮದಲ್ಲಿ ಪಂಚ ಪಾಂಡವರ ದೇಗುಲಗಳೂ ಇವೆ. ಧರ್ಮರಾಯ, ಅರ್ಜುನ, ಭೀಮ, ನಕುಲ, ಸಹದೇವ, ಕುಂತಿ ದೇವಿ ದೇವಸ್ಥಾನ ಇದೆ. ಪಾಂಡವರು ವನವಾಸದ ವೇಳೆ ಈ ಮಾರ್ಗವಾಗಿ ಬಂದಿದ್ದರು. ಹೀಗಾಗಿ ಪಾಂಡವರ ದೇಗುಲ ನಿರ್ಮಿಸಿರಬೇಕು ಎಂಬುದು ಗ್ರಾಮಸ್ಥರ ಅನಿಸಿಕೆ.</p>.<p>ಪ್ರತಿ ವರ್ಷ ಗ್ರಾಮದಲ್ಲಿ ಯುಗಾದಿ ವೇಳೆ ಧರ್ಮರಾಯನ ಜಾತ್ರೆ ನಡೆಯುತ್ತದೆ. ಚಿಕ್ಕ ರಥವನ್ನು ಮಹಿಳೆಯರು ಎಳೆದರೆ, ದೊಡ್ಡ ರಥವನ್ನು ಪುರುಷರು ಎಳೆಯುತ್ತಾರೆ. ಇದರಿಂದ ಇಲ್ಲಿ ಸ್ತ್ರೀಯರಿಗೂ ರಥ ಎಳೆಯುವ ಧಾರ್ಮಿಕ<br />ಕೈಂಕರ್ಯವನ್ನು ಕಲ್ಪಿಸಿಕೊಡಲಾಗಿದೆ.</p>.<p>'ಈಗ ಗ್ರಾಮದಲ್ಲಿ 101 ದೇವಸ್ಥಾನವೂ ಇಲ್ಲ, ಬಾವಿಗಳೂ ಇಲ್ಲ. ನಿಧಿ ಆಸೆಗಾಗಿ ದೇಗುಲವನ್ನು ಹಾಳುಗಡೆವಿದ್ದಾರೆ. ಇದರಿಂದ ಹಲವಾರು ದೇಗುಲಗಳು ಶಿಥಿಲಗೊಂಡಿವೆ. ಹೆಸರಿಗೆ ಮಾತ್ರ ಹೇಳಿಕೊಳ್ಳಲು ದೇಗುಲ, ಬಾವಿ, ಕೆರೆಗಳಿವೆ' ಎನ್ನುತ್ತಾರೆ ಗ್ರಾಮದ ಮುಖಂಡ ಅರುಣಕುಮಾರ ಮಲ್ಕಾಪುರ.</p>.<p>ಇಲ್ಲಿಯ ಮತ್ತೊಂದು ವಿಶೇಷವೆಂದರೆ ಧರ್ಮರಾಯನ ಗರ್ಭಗುಡಿಯಲ್ಲಿರುವ ಲಿಂಗವು ಎಡಗಡೆ ಮುಖ ಹೊಂದಿದೆ. ಬೇರೆ ದೇವಸ್ಥಾನಗಳಲ್ಲಿ ಬಲಗಡೆ ಮುಖ ಹೊಂದಿದೆ. ಇಂಥ<br />ಚರಿತ್ರೆ ಹೊಂದಿರುವ ಗ್ರಾಮದ ದೇವಸ್ಥಾನ, ಬಾವಿಗಳನ್ನು<br />ಸಂರಕ್ಷಿಸಬೇಕಾಗಿದೆ.</p>.<p>***</p>.<p>ಭೀಮನ ದೇವಸ್ಥಾನದ ಕಂಬಗಳಲ್ಲಿ ತಣ್ಣನೆಯ ನೀರು ಜಿನುಗಿದಂತೆ ಭಾಸವಾಗುತ್ತದೆ. ಇಲ್ಲಿ ಎಲ್ಲ ಕಾಲದಲ್ಲಿ ತಂಪಿನ ವಾತಾವರಣ ಇರುತ್ತದೆ</p>.<p>ಗುರು ಬಂಡಿ, ಗ್ರಾಮಸ್ಥ</p>.<p>***</p>.<p>ಗ್ರಾಮವೂ ಐತಿಹಾಸಿಕ ಸ್ಥಳಗಳನ್ನು ಹೊಂದಿದೆ. ಇವುಗಳನ್ನು ಪುರಾತತ್ವ ಇಲಾಖೆ ಸಂರಕ್ಷಣೆ ಮಾಡಬೇಕು ಅರುಣಕುಮಾರ ಮಲ್ಕಾಪುರ,ಗ್ರಾಮಸ್ಥ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>