ನಗರದ ಮಾರುತಿ ರಸ್ತೆಯಲ್ಲಿರುವ ಪ್ರಭಾವಿ ವ್ಯಕ್ತಿಯೊಬ್ಬರು ಕಿರಾಣಿ ಅಂಗಡಿ ತೆರೆದು ಆಹಾರ ಧಾನ್ಯದ ಕಿಟ್ ಸಿದ್ಧಪಡಿಸುತ್ತಿದ್ದರು. ಅದೇ ಅಂಗಡಿಯ ಪಕ್ಕದಲ್ಲಿರುವ ಮಸಾಲಿ ಅಂಗಡಿ ವ್ಯಕ್ತಿಯೊಬ್ಬರು ಬಾಗಿಲು ತೆರೆದು ವ್ಯಾಪಾರ ಮಾಡುತ್ತಿದ್ದರು. ಆಗ ಅಲ್ಲಿಗೆ ನಗರಸಭೆಯ ಸಿಬ್ಬಂದಿ ತೆರಳಿ ಮಸಾಲಿ ಅಂಗಡಿಯನ್ನು ಬಂದ್ ಮಾಡುವಂತೆ ದಬಾಯಿಸಿದರು. ಆಗ ಮಸಾಲಿ ಅಂಗಡಿಯ ಮಾಲೀಕ ಬಾಜು ಕಿರಾಣಿ ಅಂಗಡಿ ತೆರೆದರು ಸಹ ಅದನ್ನು ಪ್ರಶ್ನಿಸುತ್ತಿಲ್ಲ. ನಗರಸಭೆಯ ಇಬ್ಬಗೆಯ ನೀತಿ ಸರಿಯಲ್ಲ. ಮೊದಲು ಕಿರಾಣಿ ಅಂಗಡಿ ಬಂದ್ ಮಾಡಿ ಎಂದು ಪ್ರತಿಭಟಿಸಿದ್ದಾರೆ. ಆಗ ಪಕ್ಕದ ಕಿರಾಣಿ ಅಂಗಡಿಯವರೊಂದಿಗೆ ಮಾತಿಗೆ ಮಾತು ಬೆಳೆದು ಪರಸ್ಪರ ಬಡಿದಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.