ಜೆಸ್ಕಾಂ ಎಇಇ ಈರಣ್ಣ ಅಳ್ಳಿಚಂಡಿ ಮಾತನಾಡಿ, ‘ವಿದ್ಯುತ್ ಪರಿವರ್ತಕಗಳಿಗೆ ಹೊಸ ಕೇಬಲ್ ಅಳವಡಿಕೆ, ತಂತಿ ಬೇಲಿ ಹಾಕುವುದು, ಪ್ರೊಟೆಕ್ಷನ್ ಕಿಟ್ ಅಳವಡಿಸುವುದು, ಅರ್ಥಿಂಗ್ ಮಾಡುವುದು, ಆಯಿಲ್ ಲಿಕೇಜ್ ತಡೆಗಟ್ಟುವುದು ಸೇರಿದಂತೆ ಎಲ್ಲಾ ರೀತಿಯಿಂದಲೂ ಟಿಸಿ ಸಜ್ಜು ಗೊಳಿಸಿ ಯಾವುದೇ ರೀತಿಯ ಅವಘಡ ಸಂಭವಿಸದಂತೆ ಮುಂಜಾಗ್ರತೆ ಕ್ರಮ ವಹಿಸುವಂತೆ ಮಾಡುವುದು ಈ ಅಭಿ ಯಾನದ ಮುಖ್ಯ ಉದ್ದೇಶ’ ಎಂದರು.