<p><strong>ವಡಗೇರಾ:</strong> ತಾಲ್ಲೂಕಿನ ಗಡ್ಡೆಸೂಗುರು ಗ್ರಾಮದ ಗೇಟ್ನಿಂದ ಅನತಿ ದೂರದಲ್ಲಿ ಇರುವ ಫಕೀರಸಾಬ್ ದರ್ಗಾದ ಬಳಿಯ ಸುತ್ತಲಿನ ಜಮೀನಿನಲ್ಲಿ ಭೀಮಾ ನದಿ ಪ್ರವಾಹದ ನೀರು ನುಗ್ಗಿ ಹತ್ತಿ ಹಾಗೂ ಭತ್ತದ ಬೆಳೆ ನಾಶವಾಗಿದೆ.</p>.<p>ಪ್ರವಾಹದ ನೀರು ಭಾನುವಾರ ಗಡ್ಡೆಸೂಗುರು ಗ್ರಾಮದ ಹತ್ತಿರದ ಹಳ್ಳಕ್ಕೆ ಹಾಗೂ ಹಳ್ಳದ ಪಕ್ಕದಲ್ಲಿ ಇರುವ ದರ್ಗಾದ ಸುತ್ತಲು ಆವರಿಸಿದ್ದರಿಂದ ಪ್ರಾರ್ಥನೆ ಸಲ್ಲಿಸಲು ತೊಂದರೆಯಾಯಿತು.</p>.<p>ನಿಧಾನವಾಗಿ ಸೋಮವಾರ ಸಂಜೆ ಪ್ರವಾಹದ ನೀರು ಇಳಿಮುಖವಾಗುತ್ತಾ ಬಂದರೂ ಮಂಗಳವಾರ ಬೆಳೆಗಳು ಜಲಾವೃತ್ತಗೊಂಡಿದ್ದವು.</p>.<p>ತಾಲ್ಲೂಕಿನ ಮಾಚನೂರ, ಬಬಲಾದ, ಬೀರನಾಳ, ಅರ್ಜುಣಿಗಿ, ಗುರುಸುಣಿಗಿ, ನಾಯ್ಕಲ್, ನಾಲ್ವಡಿಗಿ, ಬಲಕಲ್ ಸೇರಿ ನಾನಾ ಗ್ರಾಮಗಳಲ್ಲಿ ಪ್ರವಾಹದ ನೀರು ಜಮೀನುಗಳಿಗೆ ನುಗ್ಗಿದೆ. ಸಾವಿರಾರು ಎಕರೆ ಪ್ರದೇಶಗಳಲ್ಲಿ ಇದ್ದ ಅನೇಕ ಬೆಳೆಗಳು ಹಾಳಾಗಿ ಬಹಳ ನಷ್ಟವಾಗಿದೆ ಎಂದು ರೈತರು ಹೇಳಿದರು.</p>.<p>‘ಸುಮಾರು 67 ವರ್ಷಗಳ ಹಿಂದೆ ಇದೇ ತರ ಭೀಮಾ ನದಿಯ ಪ್ರವಾಹ ಬಂದಿತ್ತು. ಈಗ ನನಗೆ 85 ವರ್ಷ, ಮತ್ತೊಮ್ಮೆ ಭೀಮೆಯ ಪ್ರವಾಹ ನೋಡುವ ಸ್ಥಿತಿ ಬಂದಿದೆ. ಈ ಪ್ರವಾಹದಿಂದ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ನನ್ನ ಎರಡು ಎಕರೆ ಹತ್ತಿ ಹಾಳಾಗಿದೆ’ ಎಂದು ಗಡ್ಡೆಸೂಗುರು ಗ್ರಾಮದ ರೈತ ಹುಸೇನಸಾಬ್ ಮುಲ್ಲಾ ಪ್ರಜಾವಾಣಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಡಗೇರಾ:</strong> ತಾಲ್ಲೂಕಿನ ಗಡ್ಡೆಸೂಗುರು ಗ್ರಾಮದ ಗೇಟ್ನಿಂದ ಅನತಿ ದೂರದಲ್ಲಿ ಇರುವ ಫಕೀರಸಾಬ್ ದರ್ಗಾದ ಬಳಿಯ ಸುತ್ತಲಿನ ಜಮೀನಿನಲ್ಲಿ ಭೀಮಾ ನದಿ ಪ್ರವಾಹದ ನೀರು ನುಗ್ಗಿ ಹತ್ತಿ ಹಾಗೂ ಭತ್ತದ ಬೆಳೆ ನಾಶವಾಗಿದೆ.</p>.<p>ಪ್ರವಾಹದ ನೀರು ಭಾನುವಾರ ಗಡ್ಡೆಸೂಗುರು ಗ್ರಾಮದ ಹತ್ತಿರದ ಹಳ್ಳಕ್ಕೆ ಹಾಗೂ ಹಳ್ಳದ ಪಕ್ಕದಲ್ಲಿ ಇರುವ ದರ್ಗಾದ ಸುತ್ತಲು ಆವರಿಸಿದ್ದರಿಂದ ಪ್ರಾರ್ಥನೆ ಸಲ್ಲಿಸಲು ತೊಂದರೆಯಾಯಿತು.</p>.<p>ನಿಧಾನವಾಗಿ ಸೋಮವಾರ ಸಂಜೆ ಪ್ರವಾಹದ ನೀರು ಇಳಿಮುಖವಾಗುತ್ತಾ ಬಂದರೂ ಮಂಗಳವಾರ ಬೆಳೆಗಳು ಜಲಾವೃತ್ತಗೊಂಡಿದ್ದವು.</p>.<p>ತಾಲ್ಲೂಕಿನ ಮಾಚನೂರ, ಬಬಲಾದ, ಬೀರನಾಳ, ಅರ್ಜುಣಿಗಿ, ಗುರುಸುಣಿಗಿ, ನಾಯ್ಕಲ್, ನಾಲ್ವಡಿಗಿ, ಬಲಕಲ್ ಸೇರಿ ನಾನಾ ಗ್ರಾಮಗಳಲ್ಲಿ ಪ್ರವಾಹದ ನೀರು ಜಮೀನುಗಳಿಗೆ ನುಗ್ಗಿದೆ. ಸಾವಿರಾರು ಎಕರೆ ಪ್ರದೇಶಗಳಲ್ಲಿ ಇದ್ದ ಅನೇಕ ಬೆಳೆಗಳು ಹಾಳಾಗಿ ಬಹಳ ನಷ್ಟವಾಗಿದೆ ಎಂದು ರೈತರು ಹೇಳಿದರು.</p>.<p>‘ಸುಮಾರು 67 ವರ್ಷಗಳ ಹಿಂದೆ ಇದೇ ತರ ಭೀಮಾ ನದಿಯ ಪ್ರವಾಹ ಬಂದಿತ್ತು. ಈಗ ನನಗೆ 85 ವರ್ಷ, ಮತ್ತೊಮ್ಮೆ ಭೀಮೆಯ ಪ್ರವಾಹ ನೋಡುವ ಸ್ಥಿತಿ ಬಂದಿದೆ. ಈ ಪ್ರವಾಹದಿಂದ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ನನ್ನ ಎರಡು ಎಕರೆ ಹತ್ತಿ ಹಾಳಾಗಿದೆ’ ಎಂದು ಗಡ್ಡೆಸೂಗುರು ಗ್ರಾಮದ ರೈತ ಹುಸೇನಸಾಬ್ ಮುಲ್ಲಾ ಪ್ರಜಾವಾಣಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>