ಶಿಕ್ಷಕ ಉಮೇಶ ನರಗುಂದ ಮಾತನಾಡಿ, ಗ್ರಾಮದ ಗವಿಸಿದ್ಧಲಿಂಗೇಶ್ವರ ಮಠವು ಪ್ರಾಚೀನ ಕಾಲದಲ್ಲಿ ಅಧ್ಯಯನ ಕೇಂದ್ರವಾಗಿತ್ತು. ರಾಮಲಿಂಗೇಶ್ವರ ದೇವಸ್ಥಾನ ಗುಡ್ಡದಲ್ಲಿ ರಾಮನು ವನವಾಸದ ಸಮಯ ದಲ್ಲಿ ಕೆಲವು ದಿನಗಳು ವಿಶ್ರಾಂತಿ ಪಡೆಯಲು ತಂಗಿದ್ದನ್ನು ಎನ್ನುವ ನಂಬಿಕೆಯಿದೆ. ಉತ್ತರಾದಿ ಮಠದ ಯತಿಗಳಾದ ಠೀಕಾಚಾರ್ಯರು 13ನೇ ಶತಮಾನದಲ್ಲಿ ನ್ಯಾಯಸುಧ ಗ್ರಂಥವನ್ನು ರಚಿಸಿ ಜಗತ್ತಿಗೆ ಕೊಟ್ಟಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಸುನೀಲ, ಲಕ್ಷ್ಮಣ್, ಬಸಮ್ಮ, ಗಂಗಾ ಹಾಡು, ಕುಣಿತ, ಹಾಸ್ಯ, ಮಿಮಿಕ್ರಿ, ನಾಟಕ ಪ್ರಸ್ತುತ ಪಡಿಸಿದರು.